<p><strong>ಬೆಂಗಳೂರು:</strong> ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹೊಸ ಮಾದರಿಯ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) 75 ಬಸ್ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಕೋವಿಡ್ನಿಂದಾಗಿ ಬಿಎಂಟಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಸಂಕಷ್ಟದಿಂದ ಪಾರು ಮಾಡುವ ಸಂಕಲ್ಪವನ್ನು ಸರ್ಕಾರ ಹೊಂದಿದೆ’ ಎಂದರು.</p>.<p>‘ಬೆಂಗಳೂರಿನಲ್ಲಿ 1.25 ಕೋಟಿ ಜನಸಂಖ್ಯೆ ಇದೆ. ಇದಕ್ಕೆ ಸಮಾನವಾಗಿ ವಾಹನಗಳ ಸಂಖ್ಯೆಯೂ ಇದೆ. ಮುಂದಿನ ಮೂರು ವರ್ಷದಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಲಿದೆ. ನಗರದ ವಿಸ್ತೀರ್ಣ, ರಸ್ತೆಗಳು ಅಷ್ಟೇ ಇವೆ. ಹೀಗಾಗಿ, ಬೆಂಗಳೂರು ಸಾರಿಗೆಯಲ್ಲಿ ಹೊಸ ಚಿಂತನೆ ಅಗತ್ಯ ಇದೆ’ ಎಂದರು.</p>.<p>‘ಸಾರಿಗೆ ಇಲಾಖೆಗೆ 2022-23ರಲ್ಲಿ ಸರ್ಕಾರ ₹ 800 ಕೋಟಿ ನೆರವು ನೀಡಿದೆ. ಕಳೆದ 2–3 ವರ್ಷಗಳಿಂದ ₹ 3 ಸಾವಿರ ಕೋಟಿ ನೆರವು ನೀಡಲಾಗಿದೆ. ಹಿಂದಿನ ಸರ್ಕಾರಗಳ ಆಡಳಿತ ವೈಖರಿಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ನಮ್ಮ ಗುರಿ’ ಎಂದರು.</p>.<p>‘ಒಟ್ಟು 300 ಎಲೆಕ್ಟ್ರಿಕ್ ಬಸ್ಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ, 75 ಬಸ್ಗಳನ್ನು ಲೋಕಾರ್ಪಣೆ ಮಾಡಿದ್ದೇನೆ. ಮುಂದಿನ ಹಂತಗಳಲ್ಲಿ ಉಳಿದ ಬಸ್ಗಳೂ ಬರಲಿವೆ. ಬಿಎಂಟಿಸಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ 922 ಎಲೆಕ್ಟ್ರಿಕ್ ಬಸ್ಗಳನ್ನು ಲೀಸ್ಗೆ ಕೊಡಲಿದೆ’ ಎಂದು ಮಾಹಿತಿ ನೀಡಿದರು.</p>.<p><strong>ಎಲೆಕ್ಟ್ರಿಕ್ ಬಸ್ಗಳ ವಿಶೇಷತೆ</strong><br />12 ಮೀ. ಉದ್ದದ ಈ ಹವಾನಿಯಂತ್ರಿತ ರಹಿತ (ನಾನ್ ಎಸಿ) ಬಸ್ಗಳಲ್ಲಿ 40+1 ಆಸನಗಳಿವೆ. ಪ್ರಯಾಣಿಕರ ಸುರಕ್ಷತೆಗೆ ವೆಹಿಕಲ್ ಟ್ರ್ಯಾಕಿಂಗ್ ಯುನಿಟ್, ಸಿಸಿಟಿವಿ ಕ್ಯಾಮೆರಾ, ತುರ್ತು ಪ್ಯಾನಿಕ್ ಬಟನ್, ಎಲ್ಇಡಿ ಮಾರ್ಗ ಫಲಕ ಅಳವಡಿಸಲಾಗಿದೆ.</p>.<p>ಅಂಗವಿಕಲರ ಅನುಕೂಲಕ್ಕಾಗಿ ಗಾಲಿ ಕುರ್ಚಿ ಯಾಂತ್ರಿಕವಾಗಿ ಕಾರ್ಯನಿರ್ವಹಿಸಬಲ್ಲ ವ್ಯವಸ್ಥೆಯೂ ಇದೆ. ಸ್ವಿಚ್ ಮೊಬಿಲಿಟಿ ಆಟೊಮೊಟಿವ್ ಕಂಪನಿ ಈ ಬಸ್ಗಳನ್ನು 12 ವರ್ಷಗಳ ಅವಧಿಗೆ ನಿವ್ವಳ ವೆಚ್ಚ ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಿದೆ. ನಿತ್ಯ ಪ್ರತಿ ಬಸ್ಸಿಗೆ 225 ಕಿ.ಮೀ ಕಾರ್ಯಾಚರಣೆಗೆ ಪ್ರತಿ ಕಿ.ಮೀ ವಿದ್ಯುಚ್ಛಕ್ತಿ ಒಳಗೊಂಡಂತೆ ₹ 48.90 ಪಾವತಿಸಲಾಗುವುದು. ಒಂದು ಬಾರಿ ಚಾರ್ಜಿಂಗ್ ನಂತರ ಬಸ್ 150 ಕಿ.ಮೀ. ಕ್ರಮಿಸುತ್ತವೆ. ಉಳಿದ 75 ಕಿ.ಮೀಗಳನ್ನು ಅವಕಾಶ ಸಿಕ್ಕಾಗ ಚಾರ್ಜ್ ಮಾಡಿಕೊಂಡು ಕಾರ್ಯಾಚರಿಸಲಾಗುತ್ತದೆ. ಈ ಬಸ್ಗಳು ರಿಚಾರ್ಜ್ಗೆ ಮಾರ್ಗದಲ್ಲಿರುವ ನಿಗದಿತ ಬಸ್ ನಿಲ್ದಾಣಗಳಲ್ಲಿ ತ್ವರಿತವಾಗಿ ಚಾರ್ಚ್ ಮಾಡುವ ವ್ಯವಸ್ಥೆ ಇದೆ. ಇದಕ್ಕಾಗಿ, ಕೆಂಪೇಗೌಡ ಬಸ್ ನಿಲ್ದಾಣ (ಘಟಕ- 07), ಯಶವಂತಪುರ (ಘಟಕ- 08), ಕೆಂಗೇರಿ (ಘಟಕ- 12) ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದೆ.</p>.<p><strong>ಎಲೆಕ್ಟ್ರಿಕ್ ಬಸ್ಗಳ ಸಂಚಾರ</strong><br /><strong>ಎಲ್ಲಿಂದ, ಎಲ್ಲಿಗೆ; ಎಷ್ಟು ಬಸ್ಗಳು</strong><br />ಮೆಜೆಸ್ಟಿಕ್- ವಿದ್ಯಾರಣ್ಯಪುರ; 10<br />ಶಿವಾಜಿನಗರ- ಯಲಹಂಕ; 20<br />ಯಲಹಂಕ- ಕೆಂಗೇರಿ; 10<br />ಮೆಜೆಸ್ಟಿಕ್- ಯಲಹಂಕ ಉಪನಗರ; 15<br />ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್; 20</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹೊಸ ಮಾದರಿಯ ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) 75 ಬಸ್ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಕೋವಿಡ್ನಿಂದಾಗಿ ಬಿಎಂಟಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಸಂಕಷ್ಟದಿಂದ ಪಾರು ಮಾಡುವ ಸಂಕಲ್ಪವನ್ನು ಸರ್ಕಾರ ಹೊಂದಿದೆ’ ಎಂದರು.</p>.<p>‘ಬೆಂಗಳೂರಿನಲ್ಲಿ 1.25 ಕೋಟಿ ಜನಸಂಖ್ಯೆ ಇದೆ. ಇದಕ್ಕೆ ಸಮಾನವಾಗಿ ವಾಹನಗಳ ಸಂಖ್ಯೆಯೂ ಇದೆ. ಮುಂದಿನ ಮೂರು ವರ್ಷದಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಲಿದೆ. ನಗರದ ವಿಸ್ತೀರ್ಣ, ರಸ್ತೆಗಳು ಅಷ್ಟೇ ಇವೆ. ಹೀಗಾಗಿ, ಬೆಂಗಳೂರು ಸಾರಿಗೆಯಲ್ಲಿ ಹೊಸ ಚಿಂತನೆ ಅಗತ್ಯ ಇದೆ’ ಎಂದರು.</p>.<p>‘ಸಾರಿಗೆ ಇಲಾಖೆಗೆ 2022-23ರಲ್ಲಿ ಸರ್ಕಾರ ₹ 800 ಕೋಟಿ ನೆರವು ನೀಡಿದೆ. ಕಳೆದ 2–3 ವರ್ಷಗಳಿಂದ ₹ 3 ಸಾವಿರ ಕೋಟಿ ನೆರವು ನೀಡಲಾಗಿದೆ. ಹಿಂದಿನ ಸರ್ಕಾರಗಳ ಆಡಳಿತ ವೈಖರಿಯಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ನಮ್ಮ ಗುರಿ’ ಎಂದರು.</p>.<p>‘ಒಟ್ಟು 300 ಎಲೆಕ್ಟ್ರಿಕ್ ಬಸ್ಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ, 75 ಬಸ್ಗಳನ್ನು ಲೋಕಾರ್ಪಣೆ ಮಾಡಿದ್ದೇನೆ. ಮುಂದಿನ ಹಂತಗಳಲ್ಲಿ ಉಳಿದ ಬಸ್ಗಳೂ ಬರಲಿವೆ. ಬಿಎಂಟಿಸಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ 922 ಎಲೆಕ್ಟ್ರಿಕ್ ಬಸ್ಗಳನ್ನು ಲೀಸ್ಗೆ ಕೊಡಲಿದೆ’ ಎಂದು ಮಾಹಿತಿ ನೀಡಿದರು.</p>.<p><strong>ಎಲೆಕ್ಟ್ರಿಕ್ ಬಸ್ಗಳ ವಿಶೇಷತೆ</strong><br />12 ಮೀ. ಉದ್ದದ ಈ ಹವಾನಿಯಂತ್ರಿತ ರಹಿತ (ನಾನ್ ಎಸಿ) ಬಸ್ಗಳಲ್ಲಿ 40+1 ಆಸನಗಳಿವೆ. ಪ್ರಯಾಣಿಕರ ಸುರಕ್ಷತೆಗೆ ವೆಹಿಕಲ್ ಟ್ರ್ಯಾಕಿಂಗ್ ಯುನಿಟ್, ಸಿಸಿಟಿವಿ ಕ್ಯಾಮೆರಾ, ತುರ್ತು ಪ್ಯಾನಿಕ್ ಬಟನ್, ಎಲ್ಇಡಿ ಮಾರ್ಗ ಫಲಕ ಅಳವಡಿಸಲಾಗಿದೆ.</p>.<p>ಅಂಗವಿಕಲರ ಅನುಕೂಲಕ್ಕಾಗಿ ಗಾಲಿ ಕುರ್ಚಿ ಯಾಂತ್ರಿಕವಾಗಿ ಕಾರ್ಯನಿರ್ವಹಿಸಬಲ್ಲ ವ್ಯವಸ್ಥೆಯೂ ಇದೆ. ಸ್ವಿಚ್ ಮೊಬಿಲಿಟಿ ಆಟೊಮೊಟಿವ್ ಕಂಪನಿ ಈ ಬಸ್ಗಳನ್ನು 12 ವರ್ಷಗಳ ಅವಧಿಗೆ ನಿವ್ವಳ ವೆಚ್ಚ ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಿದೆ. ನಿತ್ಯ ಪ್ರತಿ ಬಸ್ಸಿಗೆ 225 ಕಿ.ಮೀ ಕಾರ್ಯಾಚರಣೆಗೆ ಪ್ರತಿ ಕಿ.ಮೀ ವಿದ್ಯುಚ್ಛಕ್ತಿ ಒಳಗೊಂಡಂತೆ ₹ 48.90 ಪಾವತಿಸಲಾಗುವುದು. ಒಂದು ಬಾರಿ ಚಾರ್ಜಿಂಗ್ ನಂತರ ಬಸ್ 150 ಕಿ.ಮೀ. ಕ್ರಮಿಸುತ್ತವೆ. ಉಳಿದ 75 ಕಿ.ಮೀಗಳನ್ನು ಅವಕಾಶ ಸಿಕ್ಕಾಗ ಚಾರ್ಜ್ ಮಾಡಿಕೊಂಡು ಕಾರ್ಯಾಚರಿಸಲಾಗುತ್ತದೆ. ಈ ಬಸ್ಗಳು ರಿಚಾರ್ಜ್ಗೆ ಮಾರ್ಗದಲ್ಲಿರುವ ನಿಗದಿತ ಬಸ್ ನಿಲ್ದಾಣಗಳಲ್ಲಿ ತ್ವರಿತವಾಗಿ ಚಾರ್ಚ್ ಮಾಡುವ ವ್ಯವಸ್ಥೆ ಇದೆ. ಇದಕ್ಕಾಗಿ, ಕೆಂಪೇಗೌಡ ಬಸ್ ನಿಲ್ದಾಣ (ಘಟಕ- 07), ಯಶವಂತಪುರ (ಘಟಕ- 08), ಕೆಂಗೇರಿ (ಘಟಕ- 12) ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದೆ.</p>.<p><strong>ಎಲೆಕ್ಟ್ರಿಕ್ ಬಸ್ಗಳ ಸಂಚಾರ</strong><br /><strong>ಎಲ್ಲಿಂದ, ಎಲ್ಲಿಗೆ; ಎಷ್ಟು ಬಸ್ಗಳು</strong><br />ಮೆಜೆಸ್ಟಿಕ್- ವಿದ್ಯಾರಣ್ಯಪುರ; 10<br />ಶಿವಾಜಿನಗರ- ಯಲಹಂಕ; 20<br />ಯಲಹಂಕ- ಕೆಂಗೇರಿ; 10<br />ಮೆಜೆಸ್ಟಿಕ್- ಯಲಹಂಕ ಉಪನಗರ; 15<br />ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್; 20</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>