‘ಪಕ್ಷದ ಹೈಕಮಾಂಡ್ ಈವರೆಗೆ ನನಗೆ ಸ್ಪರ್ಧೆ ಕುರಿತು ಸೂಚನೆ ನೀಡಿಲ್ಲ. ಪಕ್ಷದ ಯಾರಿಂದಲೂ ಸೂಚನೆ ಇಲ್ಲ. ನನ್ನ ಮಗ ಟಿಕೆಟ್ ಆಕಾಂಕ್ಷಿ. ಮಗ ಎಂಬ ಕಾರಣಕ್ಕಾಗಿ ಅಲ್ಲ, ಆತ ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತ. ಮೂರು ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ತಪ್ಪಿದೆ. ಆದರೂ, ಬೇಸರಿಸಿಕೊಳ್ಳದೆ ಪಕ್ಷದ ಕೆಲಸ ಮಾಡುತ್ತಿದ್ದಾನೆ’ ಎಂದರು.