<p><strong>ಬೆಂಗಳೂರು: ‘</strong>ಆಧುನಿಕ ಕಾಲದಲ್ಲಿ ಇಡೀ ಜಗತ್ತಿಗೆ ಶಾಂತಿ ಬಹಳ ಮುಖ್ಯ ಎಂದು ಹೇಳುವುದಷ್ಟೇ ನಮ್ಮ ಕೆಲಸವಲ್ಲ. ಅದೊಂದು ಸಾಮೂಹಿಕ ಬದ್ಧತೆಯಾಗಿ ಕಾರ್ಯರೂಪಕ್ಕೆ ಬರಬೇಕು’ ಭಾರತೀಯ ಸೇನೆಯ ವೈದ್ಯ ಕರ್ನಲ್ ಕೆ.ಎಂ. ಹರಿಕೃಷ್ಣ ಹೇಳಿದರು.</p>.<p>ನಗರದ ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಭಾಷೆಗಳ ಕೇಂದ್ರವು ಆಯೋಜಿಸಿದ್ದ ಎರಡು ದಿನಗಳ ‘ಭಾಷೆ, ಸಂಸ್ಕೃತಿ ಮತ್ತು ವಿಶ್ವ ಶಾಂತಿ: ಶಾಂತಿಯುತ ಜಗತ್ತಿಗೆ ಸಂವಾದ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.</p>.<p>ಗ್ಲೋಬಲ್ ಸ್ಕೂಲ್ ಗ್ರೂಪ್ನ ಶೈಕ್ಷಣಿಕ ಮುಖ್ಯಸ್ಥ ಎನ್. ನಾಗರಾಜನ್ ಮಾತನಾಡಿ, ‘ಶಾಂತಿ ಎನ್ನುವುದು ಐಷಾರಾಮಿತನದಿಂದ ಬರುವಂತದ್ದಲ್ಲ. ಮನುಷ್ಯರು ಹಾಗೂ ದೇಶಗಳ ನಡುವಿನ ಸಂಭಾಷಣೆಯಲ್ಲಿ ಶಾಂತಿ ನೆಲೆಯೂರಬೇಕು. ಗೌರವಯುತ ಸಂವಹನ ಪ್ರತಿ ರಾಷ್ಟ್ರಗಳ ನಡುವೆ ಸೇತುವೆಯಾಗಬೇಕು’ ಎಂದು ಹೇಳಿದರು.</p>.<p>ಜಾಗತಿಕ ಭಾಷೆಗಳ ಕೇಂದ್ರದ ನಿರ್ದೇಶಕಿ ಜ್ಯೋತಿ ವೆಂಕಟೇಶ್ ಮತ್ತು ಅಧ್ಯಾಪಕರಾದ ಶ್ರಾವ್ಯ ಮೌಳಿ ಸಮ್ಮೇಳನದ ವರದಿ ಮಂಡಿಸಿದರು. </p>.<p>ಜಪಾನ್, ಇಂಗ್ಲೆಂಡ್ ಸೇರಿದಂತೆ ವಿವಿಧ ರಾಷ್ಟ್ರಗಳ ವಿಶ್ವವಿದ್ಯಾಲಯಗಳು, ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಷೆ, ಸಂಸ್ಕೃತಿ ಮತ್ತು ಶಾಂತಿ ನಡುವಿನ ಸಂಬಂಧಗಳ ಹಲವು ಆಯಾಮಗಳ ಕುರಿತು ದೇಶ, ವಿದೇಶಗಳ ಭಾಷಾ ತಜ್ಞರು, ಶಾಂತಿದೂತರು, ಸಂಶೋಧಕರು, ಪರಿಣಿತರು ಚರ್ಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಆಧುನಿಕ ಕಾಲದಲ್ಲಿ ಇಡೀ ಜಗತ್ತಿಗೆ ಶಾಂತಿ ಬಹಳ ಮುಖ್ಯ ಎಂದು ಹೇಳುವುದಷ್ಟೇ ನಮ್ಮ ಕೆಲಸವಲ್ಲ. ಅದೊಂದು ಸಾಮೂಹಿಕ ಬದ್ಧತೆಯಾಗಿ ಕಾರ್ಯರೂಪಕ್ಕೆ ಬರಬೇಕು’ ಭಾರತೀಯ ಸೇನೆಯ ವೈದ್ಯ ಕರ್ನಲ್ ಕೆ.ಎಂ. ಹರಿಕೃಷ್ಣ ಹೇಳಿದರು.</p>.<p>ನಗರದ ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಭಾಷೆಗಳ ಕೇಂದ್ರವು ಆಯೋಜಿಸಿದ್ದ ಎರಡು ದಿನಗಳ ‘ಭಾಷೆ, ಸಂಸ್ಕೃತಿ ಮತ್ತು ವಿಶ್ವ ಶಾಂತಿ: ಶಾಂತಿಯುತ ಜಗತ್ತಿಗೆ ಸಂವಾದ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.</p>.<p>ಗ್ಲೋಬಲ್ ಸ್ಕೂಲ್ ಗ್ರೂಪ್ನ ಶೈಕ್ಷಣಿಕ ಮುಖ್ಯಸ್ಥ ಎನ್. ನಾಗರಾಜನ್ ಮಾತನಾಡಿ, ‘ಶಾಂತಿ ಎನ್ನುವುದು ಐಷಾರಾಮಿತನದಿಂದ ಬರುವಂತದ್ದಲ್ಲ. ಮನುಷ್ಯರು ಹಾಗೂ ದೇಶಗಳ ನಡುವಿನ ಸಂಭಾಷಣೆಯಲ್ಲಿ ಶಾಂತಿ ನೆಲೆಯೂರಬೇಕು. ಗೌರವಯುತ ಸಂವಹನ ಪ್ರತಿ ರಾಷ್ಟ್ರಗಳ ನಡುವೆ ಸೇತುವೆಯಾಗಬೇಕು’ ಎಂದು ಹೇಳಿದರು.</p>.<p>ಜಾಗತಿಕ ಭಾಷೆಗಳ ಕೇಂದ್ರದ ನಿರ್ದೇಶಕಿ ಜ್ಯೋತಿ ವೆಂಕಟೇಶ್ ಮತ್ತು ಅಧ್ಯಾಪಕರಾದ ಶ್ರಾವ್ಯ ಮೌಳಿ ಸಮ್ಮೇಳನದ ವರದಿ ಮಂಡಿಸಿದರು. </p>.<p>ಜಪಾನ್, ಇಂಗ್ಲೆಂಡ್ ಸೇರಿದಂತೆ ವಿವಿಧ ರಾಷ್ಟ್ರಗಳ ವಿಶ್ವವಿದ್ಯಾಲಯಗಳು, ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಷೆ, ಸಂಸ್ಕೃತಿ ಮತ್ತು ಶಾಂತಿ ನಡುವಿನ ಸಂಬಂಧಗಳ ಹಲವು ಆಯಾಮಗಳ ಕುರಿತು ದೇಶ, ವಿದೇಶಗಳ ಭಾಷಾ ತಜ್ಞರು, ಶಾಂತಿದೂತರು, ಸಂಶೋಧಕರು, ಪರಿಣಿತರು ಚರ್ಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>