‘ನಮ್ಮ ಸಂಸ್ಕೃತಿಯು ಸಹನೆಯೇ ಮುಖ್ಯ ಎನ್ನುತ್ತದೆ, ನಮ್ಮ ತತ್ವಶಾಸ್ತ್ರಗಳು ಸಹನೆ, ತಾಳ್ಮೆಯನ್ನೇ ಉಲ್ಲೇಖಿಸುತ್ತವೆ. ಅದರಂತೆ ನಮ್ಮ ಸಂವಿಧಾನವು ಸಹನೆ, ತಾಳ್ಮೆಯ ಗುಣವನ್ನು ಪಾಲಿಸುತ್ತದೆ. ನ್ಯಾಯಾಂಗವನ್ನು ಟೀಕಿಸುವ ಹಕ್ಕನ್ನು ಸಂವಿಧಾನ ಕೊಟ್ಟಿದ್ದರೂ ಅದನ್ನು ವಿವೇಚನೆಯಿಂದ ಬಳಸಬೇಕು. ನಮ್ಮ ವಿಮರ್ಶೆಗಳು, ಟೀಕೆಗಳನ್ನು ಈ ವ್ಯವಸ್ಥೆಯನ್ನು ವಿಸ್ತರಿಸುವಂತಿರಬೇಕು, ಹಾಳು ಮಾಡುವಂತಿರಬಾರದು’ ಎಂದು ಪುನರುಚ್ಚರಿಸಿದರು.