ಈ ಭಾಗದಲ್ಲಿನ ಸುಗಮ ಸಂಪರ್ಕಕ್ಕಾಗಿ ಭಾಷ್ಯಂ ವೃತ್ತದಿಂದ ಮಲ್ಲೇಶ್ವರದ 18ನೇ ಅಡ್ಡರಸ್ತೆವರೆಗೂ ರಸ್ತೆ ಅಗಲೀಕರಣದ ಜತೆಗೆ ನಾಲ್ಕು ಪಥದ ಮೇಲ್ಸೇತುವೆ ನಿರ್ಮಿಸುತ್ತಿದ್ದಾರೆ. ಇದು ಜನೋಪಕಾರಿ ಯೋಜನೆಯಾಗಿದ್ದರೆ, ಜನರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಈ ಯೋಜನೆ ಬೇಡ ಎಂದು 22 ಸಾವಿರ ನಿವಾಸಿಗಳು ಸಹಿ ಹಾಕಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡು ಸಾವಿರ ಮಕ್ಕಳು ಬಿಬಿಎಂಪಿಗೆ ಮನವಿ ಮಾಡಿದ್ದಾರೆ. ಮುಂದಿನ ಪೀಳಿಗೆಗಾಗಿ ಈ ಯೋಜನೆ ಎನ್ನುತ್ತೀರಿ. ಮಕ್ಕಳೇ ಬೇಡ ಎನ್ನುತ್ತಿದ್ದಾರೆ. ಅವರ ಮನವಿ ತಿರಸ್ಕರಿಸಿ ಈ ಯೋಜನೆ ಮಾಡಲು ಮುಂದಾಗಿರುವುದೇಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.