ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆರೋಪಿಯನ್ನು ಬಂಧಿಸಿ ಚಾಕು ಜಪ್ತಿ ಮಾಡಿದ್ದಾರೆ.
'ಪಿಳ್ಳಪ್ಪ ಗಾರ್ಡನ್ ನಿವಾಸಿಯಾದ ಗಣೇಶ್, ಕೂಲಿ ಕಾರ್ಮಿಕ. ಕುರಿಮಾಂಸ ಖರೀದಿಸಲು ಬೆಳಿಗ್ಗೆ ಅಂಗಡಿಗೆ ಬಂದಿದ್ದ. ಅಂಗಡಿಯಲ್ಲಿ ಇದ್ದ ಚಾಕು ತೆಗೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.