<p><strong>ಬೆಂಗಳೂರು</strong>: ಕೊರೊನಾ ಸೋಂಕಿನಂತಹ ಆರೋಗ್ಯ ಬಿಕ್ಕಟ್ಟು, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಭವಿಷ್ಯದಲ್ಲಿಯೂ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಎದುರಿಸಲು ಶಾಶ್ವತವಾದ ‘ಸಮುದಾಯ ಸನ್ನದ್ಧತೆ’ ರೂಪುಗೊಳ್ಳಬೇಕಾಗಿದೆ...</p>.<p><strong>‘</strong>ಆತ್ಮಹತ್ಯೆ ತಡೆಗಟ್ಟುವಿಕೆ: ಈಗಿನ ಸವಾಲುಗಳು ಮತ್ತು ಸಂಶೋಧನೆಗಳು’ ಕುರಿತು ನಿಮ್ಹಾನ್ಸ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆನ್ಲೈನ್ ಸಮಾವೇಶದಲ್ಲಿ ಮನೋವೈದ್ಯರು ವ್ಯಕ್ತಪಡಿಸಿದ ಅಭಿಪ್ರಾಯವಿದು.</p>.<p>ಕೋವಿಡ್–19 ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಬಗ್ಗೆ ಮನೋವೈದ್ಯರು ಕಳವಳ ವ್ಯಕ್ತಪಡಿಸಿದರು. ‘ನಿರಂತರವಾಗಿ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ರೀತಿಯಲ್ಲಿ ಸಮಾಜವನ್ನು ರೂಪಿಸಬೇಕಾಗಿದೆ’ ಎಂದು ಸಲಹೆ ನೀಡಿದರು.</p>.<p class="Subhead"><strong>ಗಮನಿಸಬೇಕು ಒಡನಾಡಿಗಳ ಗುಂಪು</strong></p>.<p>‘ಸಮುದಾಯ ಎಂದರೆ ಒಡನಾಡಿಗಳ ಗುಂಪು. ಮನೆಯಲ್ಲಿ ಕುಟುಂಬ ಸದಸ್ಯರು, ಶಾಲೆಯಲ್ಲಿ ಗೆಳೆಯರು–ಶಿಕ್ಷಕರು, ಕಚೇರಿಯಲ್ಲಿ ಸಹೋದ್ಯೋಗಿಗಳು ಒಡನಾಡಿಗಳ ಗುಂಪು ಎನಿಸಿಕೊಳ್ಳುತ್ತಾರೆ. ಒಡನಾಡಿಗಳು ಯಾರಾದರೂ ಮೌನಕ್ಕೆ ಜಾರಿದ್ದರೆ, ಊಟಕ್ಕೆ ಜೊತೆಯಲ್ಲಿ ಬಾರದಿದ್ದರೆ, ಶಾಲೆಗೆ ಗೈರು ಹಾಜರಾಗುತ್ತಿದ್ದರೆ ಅಥವಾ ಅವರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದರೆ ತಕ್ಷಣ ಈ ಗುಂಪು ಜಾಗರೂಕವಾಗಬೇಕು. ಆ ವರ್ತನೆಗೆ ಕಾರಣಗಳೇನು ಎಂದು ವಿಚಾರಿಸುವುದರಿಂದ ಖಿನ್ನತೆಯ ಸಮಸ್ಯೆಗಳನ್ನು ಬೇಗ ಪತ್ತೆ ಮಾಡಬಹುದು’ ಎಂದು ತಜ್ಞರು ಹೇಳಿದರು.</p>.<p class="Subhead"><strong>ಪೋಸ್ಟ್ಗಳ ಮೇಲಿರಲಿ ಗಮನ</strong></p>.<p>‘ಯಾರು, ಏನೇ ಕೇಳಿದರೂ ಕೆಲವರು ಬಾಯಿ ಬಿಡುವುದಿಲ್ಲ. ಬದಲಾಗಿ, ಸಾಮಾಜಿಕ ಮಾಧ್ಯಮಗಳಲ್ಲಿಸಾವು ಅಥವಾ ಆತ್ಮಹತ್ಯೆ ಸೂಚಿಸುವಂತಹ ಸಾಲುಗಳನ್ನು ಬರೆಯುತ್ತಾರೆ. ಇದನ್ನು ನಿರ್ಲಕ್ಷ್ಯ ಮಾಡಬಾರದು. ಈ ವಿಚಾರ ಗಮನಕ್ಕೆ ಬಂದ ತಕ್ಷಣ ಒಡನಾಡಿಗಳ ಗುಂಪು ಅಂತಹವರ ಜೊತೆ ಮಾತನಾಡಬೇಕು’ ಎಂದು ತಜ್ಞರು ಸಲಹೆ ನೀಡಿದರು.</p>.<p>ಸಮಾವೇಶವನ್ನು ಉದ್ಘಾಟಿಸಿದ ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್, ‘ಆತ್ಮಹತ್ಯೆ ಕುರಿತ ಸುದ್ದಿಗಳ ಕುರಿತು ಮಾಧ್ಯಮಗಳೂ ಸಂವೇದನಾಶೀಲವಾಗಿರಬೇಕು. ಕೊರೊನಾದಿಂದ ಯಾವುದೇ ವ್ಯಕ್ತಿ ಮೃತಪಟ್ಟರೆ, ಚಿತ್ರನಟ, ಕ್ರಿಕೆಟ್ ಆಟಗಾರ ಅಥವಾ ಯಾವುದೇ ಸೆಲೆಬ್ರಿಟಿ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಸಾರ್ವತ್ರೀಕರಣಗೊಳಿಸಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೊರೊನಾ ಸೋಂಕಿನಂತಹ ಆರೋಗ್ಯ ಬಿಕ್ಕಟ್ಟು, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಭವಿಷ್ಯದಲ್ಲಿಯೂ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಎದುರಿಸಲು ಶಾಶ್ವತವಾದ ‘ಸಮುದಾಯ ಸನ್ನದ್ಧತೆ’ ರೂಪುಗೊಳ್ಳಬೇಕಾಗಿದೆ...</p>.<p><strong>‘</strong>ಆತ್ಮಹತ್ಯೆ ತಡೆಗಟ್ಟುವಿಕೆ: ಈಗಿನ ಸವಾಲುಗಳು ಮತ್ತು ಸಂಶೋಧನೆಗಳು’ ಕುರಿತು ನಿಮ್ಹಾನ್ಸ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆನ್ಲೈನ್ ಸಮಾವೇಶದಲ್ಲಿ ಮನೋವೈದ್ಯರು ವ್ಯಕ್ತಪಡಿಸಿದ ಅಭಿಪ್ರಾಯವಿದು.</p>.<p>ಕೋವಿಡ್–19 ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಬಗ್ಗೆ ಮನೋವೈದ್ಯರು ಕಳವಳ ವ್ಯಕ್ತಪಡಿಸಿದರು. ‘ನಿರಂತರವಾಗಿ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ರೀತಿಯಲ್ಲಿ ಸಮಾಜವನ್ನು ರೂಪಿಸಬೇಕಾಗಿದೆ’ ಎಂದು ಸಲಹೆ ನೀಡಿದರು.</p>.<p class="Subhead"><strong>ಗಮನಿಸಬೇಕು ಒಡನಾಡಿಗಳ ಗುಂಪು</strong></p>.<p>‘ಸಮುದಾಯ ಎಂದರೆ ಒಡನಾಡಿಗಳ ಗುಂಪು. ಮನೆಯಲ್ಲಿ ಕುಟುಂಬ ಸದಸ್ಯರು, ಶಾಲೆಯಲ್ಲಿ ಗೆಳೆಯರು–ಶಿಕ್ಷಕರು, ಕಚೇರಿಯಲ್ಲಿ ಸಹೋದ್ಯೋಗಿಗಳು ಒಡನಾಡಿಗಳ ಗುಂಪು ಎನಿಸಿಕೊಳ್ಳುತ್ತಾರೆ. ಒಡನಾಡಿಗಳು ಯಾರಾದರೂ ಮೌನಕ್ಕೆ ಜಾರಿದ್ದರೆ, ಊಟಕ್ಕೆ ಜೊತೆಯಲ್ಲಿ ಬಾರದಿದ್ದರೆ, ಶಾಲೆಗೆ ಗೈರು ಹಾಜರಾಗುತ್ತಿದ್ದರೆ ಅಥವಾ ಅವರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದರೆ ತಕ್ಷಣ ಈ ಗುಂಪು ಜಾಗರೂಕವಾಗಬೇಕು. ಆ ವರ್ತನೆಗೆ ಕಾರಣಗಳೇನು ಎಂದು ವಿಚಾರಿಸುವುದರಿಂದ ಖಿನ್ನತೆಯ ಸಮಸ್ಯೆಗಳನ್ನು ಬೇಗ ಪತ್ತೆ ಮಾಡಬಹುದು’ ಎಂದು ತಜ್ಞರು ಹೇಳಿದರು.</p>.<p class="Subhead"><strong>ಪೋಸ್ಟ್ಗಳ ಮೇಲಿರಲಿ ಗಮನ</strong></p>.<p>‘ಯಾರು, ಏನೇ ಕೇಳಿದರೂ ಕೆಲವರು ಬಾಯಿ ಬಿಡುವುದಿಲ್ಲ. ಬದಲಾಗಿ, ಸಾಮಾಜಿಕ ಮಾಧ್ಯಮಗಳಲ್ಲಿಸಾವು ಅಥವಾ ಆತ್ಮಹತ್ಯೆ ಸೂಚಿಸುವಂತಹ ಸಾಲುಗಳನ್ನು ಬರೆಯುತ್ತಾರೆ. ಇದನ್ನು ನಿರ್ಲಕ್ಷ್ಯ ಮಾಡಬಾರದು. ಈ ವಿಚಾರ ಗಮನಕ್ಕೆ ಬಂದ ತಕ್ಷಣ ಒಡನಾಡಿಗಳ ಗುಂಪು ಅಂತಹವರ ಜೊತೆ ಮಾತನಾಡಬೇಕು’ ಎಂದು ತಜ್ಞರು ಸಲಹೆ ನೀಡಿದರು.</p>.<p>ಸಮಾವೇಶವನ್ನು ಉದ್ಘಾಟಿಸಿದ ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್, ‘ಆತ್ಮಹತ್ಯೆ ಕುರಿತ ಸುದ್ದಿಗಳ ಕುರಿತು ಮಾಧ್ಯಮಗಳೂ ಸಂವೇದನಾಶೀಲವಾಗಿರಬೇಕು. ಕೊರೊನಾದಿಂದ ಯಾವುದೇ ವ್ಯಕ್ತಿ ಮೃತಪಟ್ಟರೆ, ಚಿತ್ರನಟ, ಕ್ರಿಕೆಟ್ ಆಟಗಾರ ಅಥವಾ ಯಾವುದೇ ಸೆಲೆಬ್ರಿಟಿ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಸಾರ್ವತ್ರೀಕರಣಗೊಳಿಸಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>