‘ಸಮುದಾಯ ಎಂದರೆ ಒಡನಾಡಿಗಳ ಗುಂಪು. ಮನೆಯಲ್ಲಿ ಕುಟುಂಬ ಸದಸ್ಯರು, ಶಾಲೆಯಲ್ಲಿ ಗೆಳೆಯರು–ಶಿಕ್ಷಕರು, ಕಚೇರಿಯಲ್ಲಿ ಸಹೋದ್ಯೋಗಿಗಳು ಒಡನಾಡಿಗಳ ಗುಂಪು ಎನಿಸಿಕೊಳ್ಳುತ್ತಾರೆ. ಒಡನಾಡಿಗಳು ಯಾರಾದರೂ ಮೌನಕ್ಕೆ ಜಾರಿದ್ದರೆ, ಊಟಕ್ಕೆ ಜೊತೆಯಲ್ಲಿ ಬಾರದಿದ್ದರೆ, ಶಾಲೆಗೆ ಗೈರು ಹಾಜರಾಗುತ್ತಿದ್ದರೆ ಅಥವಾ ಅವರ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದರೆ ತಕ್ಷಣ ಈ ಗುಂಪು ಜಾಗರೂಕವಾಗಬೇಕು. ಆ ವರ್ತನೆಗೆ ಕಾರಣಗಳೇನು ಎಂದು ವಿಚಾರಿಸುವುದರಿಂದ ಖಿನ್ನತೆಯ ಸಮಸ್ಯೆಗಳನ್ನು ಬೇಗ ಪತ್ತೆ ಮಾಡಬಹುದು’ ಎಂದು ತಜ್ಞರು ಹೇಳಿದರು.