ತರಕಾರಿ ಖರೀದಿಸಲೆಂದು ಕಳೆದ ಶುಕ್ರವಾರ ಬಂದಿದ್ದಲಕ್ಕಸಂದ್ರ ನಿವಾಸಿ ಮದನ್ ಎಂಬುವರನ್ನು ಬನಶಂಕರಿ ದೇವಸ್ಥಾನ ಸಮೀಪ ಮಾರಕಾಸ್ತ್ರಗಳಿಂದ ಹೊಡೆದು, ಕೊಲೆ ಮಾಡಲಾಗಿತ್ತು. ಕೊಲೆಯ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ಇತ್ತೀಚೆಗೆ ಹರಿದಾಡಿತ್ತು. ಈ ಸಂಬಂಧ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.