<p><strong>ದಾಬಸ್ ಪೇಟೆ</strong>: ಭೂಮಿ ಹಸನು ಮಾಡಿಕೊಂಡ ರೈತರು ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದಾರೆ. ಮುಂಗಾರು ಆರಂಭವಾಗಿ 20 ದಿನ ಕಳೆದರೂ ಮಳೆ ಬಾರದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಸೋಂಪುರ ಹೋಬಳಿಯ ರೈತರು. </p>.<p>ಜೂನ್ ಮೊದಲ ವಾರದಿಂದ ಕೊನೆಯ ವಾರದವರೆಗೆ ತೊಗರಿ, ಅವರೆ, ನೆಲಗಡಲೆ, ಮುಸುಕಿನ ಜೋಳ ಬಿತ್ತನೆ ಮಾಡಲಾಗುತ್ತದೆ. ಜುಲೈ ಆರಂಭವಾಗುತ್ತಿದ್ದಂತೆ ರಾಗಿ ಬಿತ್ತನೆ ಕಾರ್ಯ ಪ್ರಾರಂಭಿಸುತ್ತಾರೆ. ಆದರೆ, ಈ ಬಾರಿ ಸರಾಸರಿ ಮಳೆಗಿಂತ ಕಡಿಮೆ ಹಾಗೂ ಸಕಾಲಕ್ಕೆ ಬಾರದ ಮಳೆಯಿಂದ ತೊಗರಿ, ಅವರೆ, ನೆಲಗಡಲೆ, ಮುಸುಕಿನ ಜೋಳ ಬಿತ್ತನೆ ಕಡಿಮೆಯಾಗಿದೆ. </p>.<p>ಮುಂಗಾರು ಪೂರ್ವದಿಂದಲೂ ಹೋಬಳಿಯಲ್ಲಿ ಮಳೆ ಅಷ್ಟಕಷ್ಟೇ. ಆಗಾಗ ಮಳೆ ಬಿದ್ದಾಗ ಭೂಮಿ ಉಳುಮೆ ಮಾಡಿಕೊಂಡು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಕಾಲಕ್ಕೆ ಮಳೆ ಬಾರದೆ ತೊಂದರೆಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು. </p>.<p>ಮುಂಗಾರಿನಲ್ಲಿಯೇ ಬಹುತೇಕ ರೈತರು ಮೇವಿಗಾಗಿ ಜೋಳವನ್ನು ಬಿತ್ತನೆ ಮಾಡುತ್ತಾರೆ. ಆದರೆ, ಮಳೆ ಇಲ್ಲದೆ ಜೋಳ ಒಣಗಿದ್ದು ಮೇವಿನ ಕೊರತೆಯನ್ನು ಸೃಷ್ಟಿಸಿದೆ. ಕಳೆದ ಎರಡು ವರ್ಷ ಮುಂಗಾರು ಮಳೆ ಯಥೇಚ್ಛವಾಗಿ ಬಿದ್ದಿತ್ತು. ಈ ಬಾರಿಯೂ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದರು. </p>.<p>ಆದರೆ, ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ಜನ ಆತಂಕಕ್ಕೆ ಒಳಗಾಗಿದ್ದಾರೆ. ‘ಮಳೆ ಸಕಾಲಕ್ಕೆ ಆಗುತ್ತಿಲ್ಲ. ಕೆಲವರು ಉಳುಮೆ ಸಹ ಮಾಡಿಲ್ಲ. ಇದು ಬಿತ್ತನೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ರೈತ ಶಿವನಂಜಯ್ಯ. </p>.<p> 'ಈಗ ಮಳೆ ಬಂದರೂ ತೊಗರಿ, ಅವರೆ, ಜೋಳ ಹಾಗೂ ರಾಗಿ ಬಿತ್ತನೆಯಾಗುತ್ತದೆ’ ಎನ್ನುತ್ತಾರೆ ಸೋಂಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಬನಾ ಡಿ. ನದಾಫ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ ಪೇಟೆ</strong>: ಭೂಮಿ ಹಸನು ಮಾಡಿಕೊಂಡ ರೈತರು ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದಾರೆ. ಮುಂಗಾರು ಆರಂಭವಾಗಿ 20 ದಿನ ಕಳೆದರೂ ಮಳೆ ಬಾರದ ಕಾರಣ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಸೋಂಪುರ ಹೋಬಳಿಯ ರೈತರು. </p>.<p>ಜೂನ್ ಮೊದಲ ವಾರದಿಂದ ಕೊನೆಯ ವಾರದವರೆಗೆ ತೊಗರಿ, ಅವರೆ, ನೆಲಗಡಲೆ, ಮುಸುಕಿನ ಜೋಳ ಬಿತ್ತನೆ ಮಾಡಲಾಗುತ್ತದೆ. ಜುಲೈ ಆರಂಭವಾಗುತ್ತಿದ್ದಂತೆ ರಾಗಿ ಬಿತ್ತನೆ ಕಾರ್ಯ ಪ್ರಾರಂಭಿಸುತ್ತಾರೆ. ಆದರೆ, ಈ ಬಾರಿ ಸರಾಸರಿ ಮಳೆಗಿಂತ ಕಡಿಮೆ ಹಾಗೂ ಸಕಾಲಕ್ಕೆ ಬಾರದ ಮಳೆಯಿಂದ ತೊಗರಿ, ಅವರೆ, ನೆಲಗಡಲೆ, ಮುಸುಕಿನ ಜೋಳ ಬಿತ್ತನೆ ಕಡಿಮೆಯಾಗಿದೆ. </p>.<p>ಮುಂಗಾರು ಪೂರ್ವದಿಂದಲೂ ಹೋಬಳಿಯಲ್ಲಿ ಮಳೆ ಅಷ್ಟಕಷ್ಟೇ. ಆಗಾಗ ಮಳೆ ಬಿದ್ದಾಗ ಭೂಮಿ ಉಳುಮೆ ಮಾಡಿಕೊಂಡು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸಕಾಲಕ್ಕೆ ಮಳೆ ಬಾರದೆ ತೊಂದರೆಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು. </p>.<p>ಮುಂಗಾರಿನಲ್ಲಿಯೇ ಬಹುತೇಕ ರೈತರು ಮೇವಿಗಾಗಿ ಜೋಳವನ್ನು ಬಿತ್ತನೆ ಮಾಡುತ್ತಾರೆ. ಆದರೆ, ಮಳೆ ಇಲ್ಲದೆ ಜೋಳ ಒಣಗಿದ್ದು ಮೇವಿನ ಕೊರತೆಯನ್ನು ಸೃಷ್ಟಿಸಿದೆ. ಕಳೆದ ಎರಡು ವರ್ಷ ಮುಂಗಾರು ಮಳೆ ಯಥೇಚ್ಛವಾಗಿ ಬಿದ್ದಿತ್ತು. ಈ ಬಾರಿಯೂ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದರು. </p>.<p>ಆದರೆ, ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ಜನ ಆತಂಕಕ್ಕೆ ಒಳಗಾಗಿದ್ದಾರೆ. ‘ಮಳೆ ಸಕಾಲಕ್ಕೆ ಆಗುತ್ತಿಲ್ಲ. ಕೆಲವರು ಉಳುಮೆ ಸಹ ಮಾಡಿಲ್ಲ. ಇದು ಬಿತ್ತನೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ರೈತ ಶಿವನಂಜಯ್ಯ. </p>.<p> 'ಈಗ ಮಳೆ ಬಂದರೂ ತೊಗರಿ, ಅವರೆ, ಜೋಳ ಹಾಗೂ ರಾಗಿ ಬಿತ್ತನೆಯಾಗುತ್ತದೆ’ ಎನ್ನುತ್ತಾರೆ ಸೋಂಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಬನಾ ಡಿ. ನದಾಫ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>