ಬೆಂಗಳೂರು: ಸಂವಿಧಾನದಆಶಯಗಳಿಗೆ ಇಂದು ಧಕ್ಕೆ ಬರುತ್ತಿದೆ ಎಂದು ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಹೇಳಿ, ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ವಾಗ್ಬಾಣ ಬಿಡಲು ಯತ್ನಿಸಿದರೂ, ಅವರದೇ ಪಕ್ಷದ ನಾಯಕ ಎಸ್ ಆರ್ ಪಾಟೀಲ ಮತ್ತು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ತಣ್ಣೀರು ಎರಚಿ, ಐವನ್ ಬಾಯಿ ಮುಚ್ಚಿಸಿದರು.