<p><strong>ಬೆಂಗಳೂರು</strong>: ಪತ್ನಿ ಹಾಗೂ ಮಗಳ ಮೇಲೆ ಕಾದ ಎಣ್ಣೆ ಸುರಿದಿದ್ದ ಆರೋಪಿ ಥಾಮಸ್ ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.</p>.<p>‘ಎಲ್.ಆರ್. ನಗರದ ನಿವಾಸಿ ಥಾಮಸ್, ಜ. 30ರಂದು ಕೃತ್ಯ ಎಸಗಿ ಪರಾರಿಯಾಗಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ಆತನ ಪತ್ನಿ ಅಂಥೋಣಿಯಮ್ಮ ಹಾಗೂ ಮಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>’ಮದ್ಯವ್ಯಸನಿ ಆಗಿದ್ದ ಥಾಮಸ್, ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಹಲ್ಲೆಯನ್ನೂ ಮಾಡುತ್ತಿದ್ದ.’</p>.<p>‘ಜ. 30ರಂದು ಮಧ್ಯಾಹ್ನ ಪತ್ನಿ ಅಂಥೋಣಿಯಮ್ಮ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಅವರ ಮೈ ಮೇಲೆ ಕಾದ ಎಣ್ಣೆ ಸುರಿದಿದ್ದ. ಬಿಡಿಸಲು ಬಂದ 13 ವರ್ಷದ ಮಗಳ ಮೇಲೂ ಎಣ್ಣೆ ಎರಚಿದ್ದ. ಅಂಥೋನಿಯಮ್ಮ ಅವರ ಮುಖ, ಎದೆ ಹಾಗೂ ಕೈ-ಕಾಲುಗಳಿಗೆ ಸುಟ್ಟ ಗಾಯವಾಗಿದೆ. ಮಗಳ ಮುಖ ಹಾಗೂ ಕೈ–ಕಾಲಿಗೂ ಗಾಯವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪತ್ನಿ ಹಾಗೂ ಮಗಳ ಮೇಲೆ ಕಾದ ಎಣ್ಣೆ ಸುರಿದಿದ್ದ ಆರೋಪಿ ಥಾಮಸ್ ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.</p>.<p>‘ಎಲ್.ಆರ್. ನಗರದ ನಿವಾಸಿ ಥಾಮಸ್, ಜ. 30ರಂದು ಕೃತ್ಯ ಎಸಗಿ ಪರಾರಿಯಾಗಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ಆತನ ಪತ್ನಿ ಅಂಥೋಣಿಯಮ್ಮ ಹಾಗೂ ಮಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>’ಮದ್ಯವ್ಯಸನಿ ಆಗಿದ್ದ ಥಾಮಸ್, ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಹಲ್ಲೆಯನ್ನೂ ಮಾಡುತ್ತಿದ್ದ.’</p>.<p>‘ಜ. 30ರಂದು ಮಧ್ಯಾಹ್ನ ಪತ್ನಿ ಅಂಥೋಣಿಯಮ್ಮ ಮೇಲೆ ಹಲ್ಲೆ ಮಾಡಿದ್ದ ಆರೋಪಿ, ಅವರ ಮೈ ಮೇಲೆ ಕಾದ ಎಣ್ಣೆ ಸುರಿದಿದ್ದ. ಬಿಡಿಸಲು ಬಂದ 13 ವರ್ಷದ ಮಗಳ ಮೇಲೂ ಎಣ್ಣೆ ಎರಚಿದ್ದ. ಅಂಥೋನಿಯಮ್ಮ ಅವರ ಮುಖ, ಎದೆ ಹಾಗೂ ಕೈ-ಕಾಲುಗಳಿಗೆ ಸುಟ್ಟ ಗಾಯವಾಗಿದೆ. ಮಗಳ ಮುಖ ಹಾಗೂ ಕೈ–ಕಾಲಿಗೂ ಗಾಯವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>