<p><strong>ಬೆಂಗಳೂರು</strong>: ‘ವಿದ್ಯಾರ್ಥಿಗಳು ಕುತೂಹಲವನ್ನು ಉಳಿಸಿಕೊಳ್ಳಲು, ಪ್ರಶ್ನೆಗಳನ್ನು ಕೇಳಲು ಎಂದಿಗೂ ಹಿಂಜರಿಯಬಾರದು. ತಮ್ಮ ಕನಸುಗಳ ಕಡೆಗೆ ಸಾಗುವುದಕ್ಕೆ ವಿಳಂಬ ಮಾಡದೆ ಕೆಲಸ ಶುರು ಮಾಡಬೇಕು’ ಎಂದು ಟ್ರೆಸಾ ಮೋಟಾರ್ಸ್ನ ಸಂಸ್ಥಾಪಕ ರೋಹನ್ ಶ್ರವಣ್ ಹೇಳಿದರು.</p>.<p>ರೇವಾ ವಿಶ್ವವಿದ್ಯಾಲಯವು 2025–2026ನೇ ಸಾಲಿನ ತನ್ನ ಹೊಸ ಶೈಕ್ಷಣಿಕ ಬ್ಯಾಚ್ ಸ್ವಾಗತಕ್ಕೆ ಹಮ್ಮಿಕೊಂಡಿದ್ದ ‘ಸೌಗಂಧಿಕಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಒರಾಕಲ್ ಗ್ಲೋಬಲ್ ಸರ್ವೀಸಸ್ ಸೆಂಟರ್ನ ಉಪಾಧ್ಯಕ್ಷ ಸತ್ಯ ಲಂಕಾ ಅವರು ವಾಸ್ತವದ ಪರಿಶೀಲನೆ ಜೊತೆಗೆ, ವಿಶ್ವವಿದ್ಯಾಲಯ ಜೀವನದ ಪರಿವರ್ತನಾ ಸ್ವರೂಪದ ಬಗ್ಗೆ ಮಾತನಾಡಿದರು.</p>.<p>ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ. ಶ್ಯಾಮ ರಾಜು ಮಾತನಾಡಿ, ಶೈಕ್ಷಣಿಕ ಶ್ರೇಷ್ಠತೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪೋಷಿಸುವ ಸಮಗ್ರ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದರು.</p>.<p>ಕುಲಪತಿ ಸಂಜಯ್ ಆರ್. ಚಿಟ್ನಿಸ್, ಸಮ ಕುಲಾಧಿಪತಿ ಆರ್.ಸಿ. ಬಿರಾದಾರ್, ಕುಲಸಚಿವ ಕೆ.ಎಸ್. ನಾರಾಯಣಸ್ವಾಮಿ, ಕುಲಸಚಿವ (ಮೌಲ್ಯಮಾಪನ) ಬೀನಾ ಜಿ, ಬೋಧಕ ವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ವಿದ್ಯಾರ್ಥಿಗಳು ಕುತೂಹಲವನ್ನು ಉಳಿಸಿಕೊಳ್ಳಲು, ಪ್ರಶ್ನೆಗಳನ್ನು ಕೇಳಲು ಎಂದಿಗೂ ಹಿಂಜರಿಯಬಾರದು. ತಮ್ಮ ಕನಸುಗಳ ಕಡೆಗೆ ಸಾಗುವುದಕ್ಕೆ ವಿಳಂಬ ಮಾಡದೆ ಕೆಲಸ ಶುರು ಮಾಡಬೇಕು’ ಎಂದು ಟ್ರೆಸಾ ಮೋಟಾರ್ಸ್ನ ಸಂಸ್ಥಾಪಕ ರೋಹನ್ ಶ್ರವಣ್ ಹೇಳಿದರು.</p>.<p>ರೇವಾ ವಿಶ್ವವಿದ್ಯಾಲಯವು 2025–2026ನೇ ಸಾಲಿನ ತನ್ನ ಹೊಸ ಶೈಕ್ಷಣಿಕ ಬ್ಯಾಚ್ ಸ್ವಾಗತಕ್ಕೆ ಹಮ್ಮಿಕೊಂಡಿದ್ದ ‘ಸೌಗಂಧಿಕಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಒರಾಕಲ್ ಗ್ಲೋಬಲ್ ಸರ್ವೀಸಸ್ ಸೆಂಟರ್ನ ಉಪಾಧ್ಯಕ್ಷ ಸತ್ಯ ಲಂಕಾ ಅವರು ವಾಸ್ತವದ ಪರಿಶೀಲನೆ ಜೊತೆಗೆ, ವಿಶ್ವವಿದ್ಯಾಲಯ ಜೀವನದ ಪರಿವರ್ತನಾ ಸ್ವರೂಪದ ಬಗ್ಗೆ ಮಾತನಾಡಿದರು.</p>.<p>ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ. ಶ್ಯಾಮ ರಾಜು ಮಾತನಾಡಿ, ಶೈಕ್ಷಣಿಕ ಶ್ರೇಷ್ಠತೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪೋಷಿಸುವ ಸಮಗ್ರ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದರು.</p>.<p>ಕುಲಪತಿ ಸಂಜಯ್ ಆರ್. ಚಿಟ್ನಿಸ್, ಸಮ ಕುಲಾಧಿಪತಿ ಆರ್.ಸಿ. ಬಿರಾದಾರ್, ಕುಲಸಚಿವ ಕೆ.ಎಸ್. ನಾರಾಯಣಸ್ವಾಮಿ, ಕುಲಸಚಿವ (ಮೌಲ್ಯಮಾಪನ) ಬೀನಾ ಜಿ, ಬೋಧಕ ವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>