‘ಇತಿಹಾಸದ ಪತ್ರ ವ್ಯವಹಾರಗಳು, ಒಪ್ಪಂದಗಳು, ಕರಡುಪ್ರತಿಗಳು ಹಾಗೂ ಇತರೆ ಹಳೆಯ ದಾಖಲೆಗಳನ್ನು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸಂರಕ್ಷಿಸಿದೆ. ಪತ್ರಾಗಾರ ಇಲಾಖೆಯಲ್ಲೇ ಹಳೆಯ ಪತ್ರವಾದ ನಾಲ್ಕನೇ ಆಂಗ್ಲೋ–ಮೈಸೂರು ಯುದ್ಧದ ಶ್ರೀರಂಗ ಪಟ್ಟಣ ಒಪ್ಪಂದ ಪ್ರತಿಯನ್ನು ಸಂರಕ್ಷಿಸಲಾಗಿದೆ. ಮೈಸೂರು ರಾಜರ ಮತ್ತು ದಿವಾನರ ಸಹಿಗಳನ್ನು ಪತ್ರಾಗಾರ ಇಲಾಖೆಯಲ್ಲಿ ಸಂಗ್ರಹಿಸಿರಿಸಲಾಗಿದೆ. ಹೀಗೆ ಹಲವಾರು ಇಲಾಖೆಗಳ ದಾಖಲಾತಿಗಳನ್ನು ರಾಜ್ಯ ಪತ್ರಾಗಾರ ಇಲಾಖೆಯು ಸಂಗ್ರಹಿಸಿದೆ. ಇತಿಹಾಸದ ಪರಂಪರೆಯೆಂದರೆ ಕಟ್ಟಡಗಳು, ಉಡುಗೆ–ತೊಡುಗೆಗಳು, ಸ್ಮಾರಕಗಳು ಹಾಗೂ ನಾಣ್ಯಗಳು ಅಷ್ಟೇ ಅಲ್ಲ, ದಾಖಲೆಗಳ ಪರಂಪರೆಯು ಇತಿಹಾಸದ ಭಾಗವೇ ಆಗಿದೆ’ ಎಂದು ತಿಳಿಸಿದರು.