<p><strong>ಬೆಂಗಳೂರು</strong>: ಪೂಜೆಯ ನೆಪದಲ್ಲಿ ₹2 ಸಾವಿರ ಮುಖಬೆಲೆಯ ನೋಟುಗಳ ಮಳೆ ಸುರಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ 10 ಮಂದಿಯನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಆರೋಪಿಗಳಾದ ಕೆ.ಮೋಹನ್, ಶ್ರೀನಿವಾಸಮೂರ್ತಿ, ರಾಜು, ಬಸವರಾಜ್ ಅಲಿಯಾಸ್ ಸತ್ಯಾನಂದ ಸ್ವಾಮಿ, ಮುನಿಶಾಮಪ್ಪ ಅಲಿಯಾಸ್ ಮೋಹನ್, ಮಲ್ಲಿಕಾರ್ಜುನ್, ರಾಮಕೃಷ್ಣ, ಪಾಲಿ ಮುರಳೀಧರ್, ರಾಮಚಂದ್ರ, ಮುಬಾರಕ್ ಎಂಬುವವರನ್ನು ಬಂಧಿಸಲಾಗಿದೆ.</p>.<p>ಆರೋಪಿಗಳಿಂದ ₹2 ಸಾವಿರ ಮುಖಬೆಲೆಯ ₹18 ಲಕ್ಷ ಮೌಲ್ಯದ ನೋಟುಗಳು, ಸ್ಕ್ರೀನ್ ಫಿಲಂ ಪ್ರಿಂಟ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಚಲಾವಣೆಯಿಂದ ಹಿಂಪಡೆಯಲಾದ ಎರಡು ಸಾವಿರ ಮುಖಬೆಲೆಯ 70 ಅಸಲಿ ನೋಟುಗಳ ಸಿರೀಸ್ ನಂಬರ್ ತಿರುಚಿ ಬ್ಯಾಂಕ್ಗೆ ಸಲ್ಲಿಕೆ ಆಗಿರುವ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ಆರ್ಬಿಐ ವ್ಯವಸ್ಥಾಪಕರು ಅಕ್ಟೋಬರ್ 17ರಂದು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆ ನೋಟುಗಳನ್ನು ಬ್ಯಾಂಕ್ಗೆ ಜಮೆ ಮಾಡಿದ್ದ ಕಬ್ಬನ್ಪೇಟೆಯಲ್ಲಿ ನೆಲಸಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕಮಿಷನ್ ಆಸೆಗೆ ಕೃತ್ಯ ಎಸಗಿರುವುದು ಗೊತ್ತಾಗಿತ್ತು. ತನಿಖೆ ಮುಂದುವರಿಸಿದಾಗ ನಕಲಿ ಸ್ವಾಮೀಜಿಗಳ ತಂತ್ರ ಬಯಲಾಯಿತು ಎಂದು ಪೊಲೀಸರು ಹೇಳಿದರು.</p>.<p>ಆರೋಪಿಗಳ ಪೈಕಿ ಬಸವರಾಜ್, ಮಲ್ಲಿಕಾರ್ಜುನ್ ಹಾಗೂ ಮುನಿಶಾಮಪ್ಪ ಸ್ವಾಮೀಜಿಗಳ ವೇಷ ಧರಿಸಿಕೊಂಡು ಶ್ರೀಮಂತರನ್ನು ಭೇಟಿ ಮಾಡುತ್ತಿದ್ದರು. ಈ ಮೂವರು ನಕಲಿ ಸ್ವಾಮೀಜಿಗಳು, ಸಾರ್ವಜನಿಕರಿಗೆ ಪೂಜೆ ಮಾಡಿಸುವ ನೆಪದಲ್ಲಿ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿರುವ 2018ರಲ್ಲಿ ಮುದ್ರಿತವಾಗಿರುವ ಸಿರೀಸ್ ಎಂಎನ್ಒಪಿಜಿ ಹೊರತುಪಡಿಸಿ ₹2 ಸಾವಿರ ಮುಖಬೆಲೆಯ ನೋಟುಗಳನ್ನು ನೀಡಿದಲ್ಲಿ ಅವುಗಳಿಗೆ ನೂರುಪಟ್ಟು ಹಣವನ್ನು ನೀಡಲಾಗುವುದು (ಹಣದ ಮಳೆ) ಎಂದು ನಂಬಿಸುತ್ತಿದ್ದರು. <br>₹2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳದೇ ಇನ್ನೂ ಮನೆಯಲ್ಲಿ ಇಟ್ಟುಕೊಂಡವರು ಈ ಆಮಿಷಕ್ಕೆ ಒಳಗಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.</p>.<p>ಹಣದ ಮಳೆ ಸುರಿಸುವ ಸ್ಥಳವನ್ನೂ ಆರೋಪಿಗಳೇ ಹೇಳುತ್ತಿದ್ದರು. ಪೂಜೆ ಮಾಡಬೇಕು. ಸ್ಥಳಕ್ಕೆ ಒಬ್ಬರೇ ಬರಬೇಕೆಂದು ಆರೋಪಿಗಳು ಷರತ್ತು ವಿಧಿಸುತ್ತಿದ್ದರು. ಬಳಿಕ ನದಿ, ಕೆರೆಗಳ ಬಳಿಗೆ ಜನರನ್ನು ಕರೆದೊಯ್ದು ನಕಲಿ ಸ್ವಾಮೀಜಿಗಳು ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದರು.</p>.<p>‘ನೀವು ನೀಡಿದ ನೋಟುಗಳು ಮುಕ್ಕಾಗಿವೆ. ಹೊಳೆಯಲ್ಲಿ ಮುಳುಗಿ ಏಳಬೇಕು’ ಎಂಬುದಾಗಿ ಸ್ವಾಮೀಜಿಗಳು ಸೂಚಿಸುತ್ತಿದ್ದರು. ನೀರಿನಲ್ಲಿ ಮುಳುಗಿ ಏಳುವಷ್ಟರಲ್ಲಿ ದುಡ್ಡಿನೊಂದಿಗೆ ನಕಲಿ ಸ್ವಾಮೀಜಿಗಳು ಪರಾರಿ ಆಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>ನೋಟಿನ ಮೇಲಿರುವ ಕ್ರಮ ಸಂಖ್ಯೆ, ಸಿರೀಸ್ ಹಾಗೂ ಮುದ್ರಿತ ವರ್ಷವನ್ನು ಯಶವಂತಪುರದಲ್ಲಿ ನೆಲಸಿದ್ದ ಮುಬಾರಕ್ ಬದಲಾವಣೆ ಮಾಡುತ್ತಿದ್ದ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>‘₹2 ಸಾವಿರ ಮುಖಬೆಲೆಯ ಲಕ್ಕಿ ಸಿರೀಸ್ ನಮ್ಮ ಬಳಿಯಿದೆ. ಈ ಹಣವನ್ನು ಮನೆಯಲ್ಲಿ ಇಟ್ಟುಕೊಂಡರೆ ಇನ್ನೂ ಶ್ರೀಮಂತರಾಗಬಹುದು ಎಂದೂ ಆರೋಪಿಗಳು ನಂಬಿಸುತ್ತಿದ್ದರು. ಲಕ್ಕಿ ಸಿರೀಸ್ನ ನಂಬರಿನ ನೋಟಿಗೆ ₹1 ಲಕ್ಷಕ್ಕೆ ₹2 ಲಕ್ಷ ಪಡೆದು ಪರಾರಿ ಆಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. </p>.<p><strong>ಎಲ್ಲೆಲ್ಲಿ ಆರೋಪಿಗಳ ಬಂಧನ?</strong></p><p>ಕಬ್ಬನ್ಪೇಟೆ ಮೆಜೆಸ್ಟಿಕ್ ಯಶವಂತಪುರ ಹಾಗೂ ಆಂಧ್ರಪ್ರದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.</p><p><strong>ವಂಚನೆ ಜಾಲ ವಿಸ್ತರಣೆ </strong></p><p>ಈ ರೀತಿ ವಂಚಿಸಿದ ನೋಟುಗಳನ್ನು ಮಧ್ಯವರ್ತಿಗಳ ಮೂಲಕ ಆರ್ಬಿಐಗೆ ಜಮೆ ಮಾಡಿಸಿ ₹ 20 ಸಾವಿರ ₹30 ಸಾವಿರ ಕಡಿಮೆ ಹಣ ಪಡೆದುಕೊಳ್ಳುತ್ತಿದ್ದರು. ಬೆಂಗಳೂರು ಯಾದಗಿರಿ ಹಾವೇರಿ ಆಂಧ್ರಪ್ರದೇಶ ತಮಿಳುನಾಡಿನಲ್ಲೂ ಈ ಜಾಲ ವಿಸ್ತರಿಸಿಕೊಂಡಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪೂಜೆಯ ನೆಪದಲ್ಲಿ ₹2 ಸಾವಿರ ಮುಖಬೆಲೆಯ ನೋಟುಗಳ ಮಳೆ ಸುರಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ 10 ಮಂದಿಯನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಆರೋಪಿಗಳಾದ ಕೆ.ಮೋಹನ್, ಶ್ರೀನಿವಾಸಮೂರ್ತಿ, ರಾಜು, ಬಸವರಾಜ್ ಅಲಿಯಾಸ್ ಸತ್ಯಾನಂದ ಸ್ವಾಮಿ, ಮುನಿಶಾಮಪ್ಪ ಅಲಿಯಾಸ್ ಮೋಹನ್, ಮಲ್ಲಿಕಾರ್ಜುನ್, ರಾಮಕೃಷ್ಣ, ಪಾಲಿ ಮುರಳೀಧರ್, ರಾಮಚಂದ್ರ, ಮುಬಾರಕ್ ಎಂಬುವವರನ್ನು ಬಂಧಿಸಲಾಗಿದೆ.</p>.<p>ಆರೋಪಿಗಳಿಂದ ₹2 ಸಾವಿರ ಮುಖಬೆಲೆಯ ₹18 ಲಕ್ಷ ಮೌಲ್ಯದ ನೋಟುಗಳು, ಸ್ಕ್ರೀನ್ ಫಿಲಂ ಪ್ರಿಂಟ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಚಲಾವಣೆಯಿಂದ ಹಿಂಪಡೆಯಲಾದ ಎರಡು ಸಾವಿರ ಮುಖಬೆಲೆಯ 70 ಅಸಲಿ ನೋಟುಗಳ ಸಿರೀಸ್ ನಂಬರ್ ತಿರುಚಿ ಬ್ಯಾಂಕ್ಗೆ ಸಲ್ಲಿಕೆ ಆಗಿರುವ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ಆರ್ಬಿಐ ವ್ಯವಸ್ಥಾಪಕರು ಅಕ್ಟೋಬರ್ 17ರಂದು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆ ನೋಟುಗಳನ್ನು ಬ್ಯಾಂಕ್ಗೆ ಜಮೆ ಮಾಡಿದ್ದ ಕಬ್ಬನ್ಪೇಟೆಯಲ್ಲಿ ನೆಲಸಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕಮಿಷನ್ ಆಸೆಗೆ ಕೃತ್ಯ ಎಸಗಿರುವುದು ಗೊತ್ತಾಗಿತ್ತು. ತನಿಖೆ ಮುಂದುವರಿಸಿದಾಗ ನಕಲಿ ಸ್ವಾಮೀಜಿಗಳ ತಂತ್ರ ಬಯಲಾಯಿತು ಎಂದು ಪೊಲೀಸರು ಹೇಳಿದರು.</p>.<p>ಆರೋಪಿಗಳ ಪೈಕಿ ಬಸವರಾಜ್, ಮಲ್ಲಿಕಾರ್ಜುನ್ ಹಾಗೂ ಮುನಿಶಾಮಪ್ಪ ಸ್ವಾಮೀಜಿಗಳ ವೇಷ ಧರಿಸಿಕೊಂಡು ಶ್ರೀಮಂತರನ್ನು ಭೇಟಿ ಮಾಡುತ್ತಿದ್ದರು. ಈ ಮೂವರು ನಕಲಿ ಸ್ವಾಮೀಜಿಗಳು, ಸಾರ್ವಜನಿಕರಿಗೆ ಪೂಜೆ ಮಾಡಿಸುವ ನೆಪದಲ್ಲಿ ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿರುವ 2018ರಲ್ಲಿ ಮುದ್ರಿತವಾಗಿರುವ ಸಿರೀಸ್ ಎಂಎನ್ಒಪಿಜಿ ಹೊರತುಪಡಿಸಿ ₹2 ಸಾವಿರ ಮುಖಬೆಲೆಯ ನೋಟುಗಳನ್ನು ನೀಡಿದಲ್ಲಿ ಅವುಗಳಿಗೆ ನೂರುಪಟ್ಟು ಹಣವನ್ನು ನೀಡಲಾಗುವುದು (ಹಣದ ಮಳೆ) ಎಂದು ನಂಬಿಸುತ್ತಿದ್ದರು. <br>₹2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳದೇ ಇನ್ನೂ ಮನೆಯಲ್ಲಿ ಇಟ್ಟುಕೊಂಡವರು ಈ ಆಮಿಷಕ್ಕೆ ಒಳಗಾಗುತ್ತಿದ್ದರು ಎಂದು ಪೊಲೀಸರು ಹೇಳಿದರು.</p>.<p>ಹಣದ ಮಳೆ ಸುರಿಸುವ ಸ್ಥಳವನ್ನೂ ಆರೋಪಿಗಳೇ ಹೇಳುತ್ತಿದ್ದರು. ಪೂಜೆ ಮಾಡಬೇಕು. ಸ್ಥಳಕ್ಕೆ ಒಬ್ಬರೇ ಬರಬೇಕೆಂದು ಆರೋಪಿಗಳು ಷರತ್ತು ವಿಧಿಸುತ್ತಿದ್ದರು. ಬಳಿಕ ನದಿ, ಕೆರೆಗಳ ಬಳಿಗೆ ಜನರನ್ನು ಕರೆದೊಯ್ದು ನಕಲಿ ಸ್ವಾಮೀಜಿಗಳು ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದರು.</p>.<p>‘ನೀವು ನೀಡಿದ ನೋಟುಗಳು ಮುಕ್ಕಾಗಿವೆ. ಹೊಳೆಯಲ್ಲಿ ಮುಳುಗಿ ಏಳಬೇಕು’ ಎಂಬುದಾಗಿ ಸ್ವಾಮೀಜಿಗಳು ಸೂಚಿಸುತ್ತಿದ್ದರು. ನೀರಿನಲ್ಲಿ ಮುಳುಗಿ ಏಳುವಷ್ಟರಲ್ಲಿ ದುಡ್ಡಿನೊಂದಿಗೆ ನಕಲಿ ಸ್ವಾಮೀಜಿಗಳು ಪರಾರಿ ಆಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>ನೋಟಿನ ಮೇಲಿರುವ ಕ್ರಮ ಸಂಖ್ಯೆ, ಸಿರೀಸ್ ಹಾಗೂ ಮುದ್ರಿತ ವರ್ಷವನ್ನು ಯಶವಂತಪುರದಲ್ಲಿ ನೆಲಸಿದ್ದ ಮುಬಾರಕ್ ಬದಲಾವಣೆ ಮಾಡುತ್ತಿದ್ದ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>‘₹2 ಸಾವಿರ ಮುಖಬೆಲೆಯ ಲಕ್ಕಿ ಸಿರೀಸ್ ನಮ್ಮ ಬಳಿಯಿದೆ. ಈ ಹಣವನ್ನು ಮನೆಯಲ್ಲಿ ಇಟ್ಟುಕೊಂಡರೆ ಇನ್ನೂ ಶ್ರೀಮಂತರಾಗಬಹುದು ಎಂದೂ ಆರೋಪಿಗಳು ನಂಬಿಸುತ್ತಿದ್ದರು. ಲಕ್ಕಿ ಸಿರೀಸ್ನ ನಂಬರಿನ ನೋಟಿಗೆ ₹1 ಲಕ್ಷಕ್ಕೆ ₹2 ಲಕ್ಷ ಪಡೆದು ಪರಾರಿ ಆಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.</p>.<p>ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. </p>.<p><strong>ಎಲ್ಲೆಲ್ಲಿ ಆರೋಪಿಗಳ ಬಂಧನ?</strong></p><p>ಕಬ್ಬನ್ಪೇಟೆ ಮೆಜೆಸ್ಟಿಕ್ ಯಶವಂತಪುರ ಹಾಗೂ ಆಂಧ್ರಪ್ರದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.</p><p><strong>ವಂಚನೆ ಜಾಲ ವಿಸ್ತರಣೆ </strong></p><p>ಈ ರೀತಿ ವಂಚಿಸಿದ ನೋಟುಗಳನ್ನು ಮಧ್ಯವರ್ತಿಗಳ ಮೂಲಕ ಆರ್ಬಿಐಗೆ ಜಮೆ ಮಾಡಿಸಿ ₹ 20 ಸಾವಿರ ₹30 ಸಾವಿರ ಕಡಿಮೆ ಹಣ ಪಡೆದುಕೊಳ್ಳುತ್ತಿದ್ದರು. ಬೆಂಗಳೂರು ಯಾದಗಿರಿ ಹಾವೇರಿ ಆಂಧ್ರಪ್ರದೇಶ ತಮಿಳುನಾಡಿನಲ್ಲೂ ಈ ಜಾಲ ವಿಸ್ತರಿಸಿಕೊಂಡಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>