ಅದರಂಗಿ ಅರಣ್ಯವು ನೆಲಮಂಗಲ ಹಾಗೂ ಮಾಗಡಿ ತಾಲ್ಲೂಕುಗಳಿಗೆ ಹೊಂದಿಕೊಂಡಂತೆ ಇದ್ದು, ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈ ಭಾಗದಲ್ಲಿನ ಗ್ರಾಮಗಳ ಜನರು, ದನಗಾಹಿಗಳು ಹಾಗೂ ಕುರಿ ಮೇಕೆ ಮೇಯಿಸುವವರಿಗೆ ಭಯ ಮೂಡಿಸುತ್ತಿವೆ. ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗಿ ಕರು, ಮೇಕೆ, ಕುರಿಗಳನ್ನು ತಿನ್ನುತ್ತಿದ್ದರಿಂದ ಜನ ದಿಗಿಲುಗೊಂಡಿದ್ದರು.