<p><strong>ಬೆಂಗಳೂರು: </strong>‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡಿರುವ ಉತ್ತರ–ದಕ್ಷಿಣ ಕಾರಿಡಾರ್ನ ರೀಚ್–3ಸಿ ವಿಸ್ತರಣೆಯ (ನಾಗಸಂದ್ರ– ಬೆಂಗಳೂರು ಅಂತರ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ-ಬಿಐಇಸಿ) ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ನಿಲ್ದಾಣ ನಿರ್ಮಿಸುವ ಸ್ಥಳ ಕುರಿತು ತಕರಾರು ಆರಂಭವಾಗಿರುವುದು ಇದಕ್ಕೆ ಕಾರಣ.</p>.<p>ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ಜಿಂದಾಲ್ ನಗರದ ಚಿಕ್ಕಬಿದರಕಲ್ಲು ಮತ್ತು ಬಿಐಇಸಿ ಬಳಿ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಆದರೆ, ಶ್ರೀಕಂಠಪುರದಲ್ಲಿ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಒತ್ತಾಯ.</p>.<p>ಈಗ ಕಾರ್ಯಾಚರಿಸುತ್ತಿರುವ ನಾಗಸಂದ್ರ ನಿಲ್ದಾಣದ ಬಳಿಕ ಮಂಜುನಾಥನಗರ, ಜಿಂದಾಲ್ ಹಾಗೂ ಬಿಐಇಸಿ ಮುಂಭಾಗ ನಿಲ್ದಾಣಗಳು ನಿರ್ಮಾಣವಾಗಲಿವೆ. ನಾಗಸಂದ್ರ- ಮಂಜುನಾಥನಗರ ನಿಲ್ದಾಣಗಳ ನಡುವೆ 550 ಮೀಟರ್ ಅಂತರ ಹಾಗೂ ಮಂಜುನಾಥನಗರ- ಜಿಂದಾಲ್ ನಿಲ್ದಾಣಗಳ ನಡುವೆ 750 ಮೀಟರ್ ಅಂತರವಿದೆ. ಎರಡು ನಿಲ್ದಾಣಗಳ ನಡುವೆ ಒಂದು ಕಿ.ಮೀ. ಅಂತರವಿರ ಬೇಕು ಎಂಬ ನಿಯಮವಿದೆ. ಆದರೆ,ಜಿಂದಾಲ್-ಬಿಐಇಸಿ ನಡುವೆ ಸುಮಾರು 2.1 ಕಿ.ಮೀ. ಅಂತರವಿರಲಿದೆ ಎಂದು ಶ್ರೀಕಂಠಪುರ ನಿವಾಸಿಗಳು ಹೇಳುತ್ತಾರೆ.</p>.<p>ಇದರಿಂದಾಗಿ ಶ್ರೀಕಂಠಪುರ ಅಥವಾ ಅಂಚೆಪಾಳ್ಯ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಮೆಟ್ರೊ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಚೆಪಾಳ್ಯದ ನಿವಾಸಿಗಳು ಮೆಟ್ರೊ ಬೇಕೆಂದರೆ 1 ಕಿ.ಮೀ. ದೂರದ ಬಿಐಇಸಿ ಕಡೆ ಅಥವಾ 1 ಕಿ.ಮೀ. ದೂರದ ಜಿಂದಾಲ್ ನಿಲ್ದಾಣದ ಕಡೆ ನಡೆದುಕೊಂಡು ಹೋಗಬೇಕಾಗುತ್ತದೆ. ನಡೆಯಲು ಸಾಧ್ಯವಾಗದಿದ್ದರೆ ಬಸ್, ದ್ವಿಚಕ್ರ ವಾಹನ ಬಳಸಬೇಕಾಗುತ್ತದೆ.</p>.<p>ಶ್ರೀಕಂಠಪುರ ಮತ್ತು ತೋಟದಗುಡ್ಡದಹಳ್ಳಿ ಗ್ರಾಮಸ್ಥರು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಬೆಂಗಳೂರು ನಗರಕ್ಕೆ ಕೆಲಸಕ್ಕಾಗಿ ನಿತ್ಯ ಓಡಾಡುತ್ತಾರೆ. ಜಿಂದಾಲ್ಮತ್ತು ಬಿಐಇಸಿ ನಿಲ್ದಾಣಗಳು ದೂರ ಆಗುತ್ತವೆ ಎಂದು ನಿವಾಸಿಗಳು ಹೇಳುತ್ತಾರೆ.</p>.<p class="Subhead">ಪ್ರಾರಂಭದಿಂದಲೂ ವಿಳಂಬ: ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಗೆ ಈ ಕಾಮಗಾರಿಯ ಗುತ್ತಿಗೆ ವಹಿಸಲಾಗಿದೆ. ಇದಕ್ಕೆ ಟೆಂಡರ್ ನೀಡುವುದು ವಿಳಂಬವಾಗಿದ್ದರಿಂದ ಈ ರೀಚ್ನ ಕಾಮಗಾರಿಯೂ ತಡವಾಗಿ ಪ್ರಾರಂಭವಾಗಿತ್ತು.ರೀಚ್ 2 (ಮೈಸೂರು ರಸ್ತೆ– ಕೆಂಗೇರಿ) ಹಾಗೂ ರೀಚ್ 4 ಬಿ (ಯಲಚೇನಹಳ್ಳಿ–ಅಂಜನಾಪುರ) ಮಾರ್ಗಗಳ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ವರ್ಷಗಳ ಹಿಂದೆಯೇ ಪೂರ್ಣಗೊಂಡಿತ್ತು. ರೀಚ್ 3ಸಿ ಮಾರ್ಗದ ಟೆಂಡರ್ ಪ್ರಕ್ರಿಯೆ 2017ರ ಪ್ರಾರಂಭದಲ್ಲಿಯೇ ಮುಗಿದಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿಯೂ ಈ ರೀಚ್ನ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡಿರುವ ಉತ್ತರ–ದಕ್ಷಿಣ ಕಾರಿಡಾರ್ನ ರೀಚ್–3ಸಿ ವಿಸ್ತರಣೆಯ (ನಾಗಸಂದ್ರ– ಬೆಂಗಳೂರು ಅಂತರ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ-ಬಿಐಇಸಿ) ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ನಿಲ್ದಾಣ ನಿರ್ಮಿಸುವ ಸ್ಥಳ ಕುರಿತು ತಕರಾರು ಆರಂಭವಾಗಿರುವುದು ಇದಕ್ಕೆ ಕಾರಣ.</p>.<p>ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ಜಿಂದಾಲ್ ನಗರದ ಚಿಕ್ಕಬಿದರಕಲ್ಲು ಮತ್ತು ಬಿಐಇಸಿ ಬಳಿ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಆದರೆ, ಶ್ರೀಕಂಠಪುರದಲ್ಲಿ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಒತ್ತಾಯ.</p>.<p>ಈಗ ಕಾರ್ಯಾಚರಿಸುತ್ತಿರುವ ನಾಗಸಂದ್ರ ನಿಲ್ದಾಣದ ಬಳಿಕ ಮಂಜುನಾಥನಗರ, ಜಿಂದಾಲ್ ಹಾಗೂ ಬಿಐಇಸಿ ಮುಂಭಾಗ ನಿಲ್ದಾಣಗಳು ನಿರ್ಮಾಣವಾಗಲಿವೆ. ನಾಗಸಂದ್ರ- ಮಂಜುನಾಥನಗರ ನಿಲ್ದಾಣಗಳ ನಡುವೆ 550 ಮೀಟರ್ ಅಂತರ ಹಾಗೂ ಮಂಜುನಾಥನಗರ- ಜಿಂದಾಲ್ ನಿಲ್ದಾಣಗಳ ನಡುವೆ 750 ಮೀಟರ್ ಅಂತರವಿದೆ. ಎರಡು ನಿಲ್ದಾಣಗಳ ನಡುವೆ ಒಂದು ಕಿ.ಮೀ. ಅಂತರವಿರ ಬೇಕು ಎಂಬ ನಿಯಮವಿದೆ. ಆದರೆ,ಜಿಂದಾಲ್-ಬಿಐಇಸಿ ನಡುವೆ ಸುಮಾರು 2.1 ಕಿ.ಮೀ. ಅಂತರವಿರಲಿದೆ ಎಂದು ಶ್ರೀಕಂಠಪುರ ನಿವಾಸಿಗಳು ಹೇಳುತ್ತಾರೆ.</p>.<p>ಇದರಿಂದಾಗಿ ಶ್ರೀಕಂಠಪುರ ಅಥವಾ ಅಂಚೆಪಾಳ್ಯ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಮೆಟ್ರೊ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಚೆಪಾಳ್ಯದ ನಿವಾಸಿಗಳು ಮೆಟ್ರೊ ಬೇಕೆಂದರೆ 1 ಕಿ.ಮೀ. ದೂರದ ಬಿಐಇಸಿ ಕಡೆ ಅಥವಾ 1 ಕಿ.ಮೀ. ದೂರದ ಜಿಂದಾಲ್ ನಿಲ್ದಾಣದ ಕಡೆ ನಡೆದುಕೊಂಡು ಹೋಗಬೇಕಾಗುತ್ತದೆ. ನಡೆಯಲು ಸಾಧ್ಯವಾಗದಿದ್ದರೆ ಬಸ್, ದ್ವಿಚಕ್ರ ವಾಹನ ಬಳಸಬೇಕಾಗುತ್ತದೆ.</p>.<p>ಶ್ರೀಕಂಠಪುರ ಮತ್ತು ತೋಟದಗುಡ್ಡದಹಳ್ಳಿ ಗ್ರಾಮಸ್ಥರು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಬೆಂಗಳೂರು ನಗರಕ್ಕೆ ಕೆಲಸಕ್ಕಾಗಿ ನಿತ್ಯ ಓಡಾಡುತ್ತಾರೆ. ಜಿಂದಾಲ್ಮತ್ತು ಬಿಐಇಸಿ ನಿಲ್ದಾಣಗಳು ದೂರ ಆಗುತ್ತವೆ ಎಂದು ನಿವಾಸಿಗಳು ಹೇಳುತ್ತಾರೆ.</p>.<p class="Subhead">ಪ್ರಾರಂಭದಿಂದಲೂ ವಿಳಂಬ: ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಗೆ ಈ ಕಾಮಗಾರಿಯ ಗುತ್ತಿಗೆ ವಹಿಸಲಾಗಿದೆ. ಇದಕ್ಕೆ ಟೆಂಡರ್ ನೀಡುವುದು ವಿಳಂಬವಾಗಿದ್ದರಿಂದ ಈ ರೀಚ್ನ ಕಾಮಗಾರಿಯೂ ತಡವಾಗಿ ಪ್ರಾರಂಭವಾಗಿತ್ತು.ರೀಚ್ 2 (ಮೈಸೂರು ರಸ್ತೆ– ಕೆಂಗೇರಿ) ಹಾಗೂ ರೀಚ್ 4 ಬಿ (ಯಲಚೇನಹಳ್ಳಿ–ಅಂಜನಾಪುರ) ಮಾರ್ಗಗಳ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ವರ್ಷಗಳ ಹಿಂದೆಯೇ ಪೂರ್ಣಗೊಂಡಿತ್ತು. ರೀಚ್ 3ಸಿ ಮಾರ್ಗದ ಟೆಂಡರ್ ಪ್ರಕ್ರಿಯೆ 2017ರ ಪ್ರಾರಂಭದಲ್ಲಿಯೇ ಮುಗಿದಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿಯೂ ಈ ರೀಚ್ನ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>