<p><strong>ಬೆಂಗಳೂರು</strong>: ‘ಸ್ವಚ್ಛ ಗಾಳಿ ನೀಡುವ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಯಲು ಅವಕಾಶ ಕೊಡಬೇಡಿ. ವೃಕ್ಷ ಸಂರಕ್ಷಣೆ ಹಾಗೂ ಸಂವರ್ಧನೆಗೆ ನಿಮ್ಮ ಕೈಯಲ್ಲಿ ಆದ ಸಹಾಯ ಮಾಡಿ‘ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.</p>.<p>ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪರಮೇಶ್ವರಪ್ಪ ಅವರ ‘ಆಳ ಬೇರು ಮರ ಅಮರ ನಿಸರ್ಗದ ವರ’ ಆತ್ಮಕಥೆಯನ್ನು ಗುರುವಾರ ಇಲ್ಲಿ ಜನಾರ್ಪಣೆ ಮಾಡಿ ಮಾತನಾಡಿದರು.</p>.<p>‘ಆಮ್ಲಜನಕ ಪ್ರತಿಯೊಬ್ಬರ ಬದುಕಿಗೆ ಬೇಕೇ ಬೇಕು. ಅದರ ಮಹತ್ವ ತಿಳಿದಿದ್ದು ಕೋವಿಡ್ ಕಾಲದಲ್ಲಿ. ಸಕಾಲಕ್ಕೆ ಆಮ್ಲಜನಕ ದೊರಕದೇ ಲಕ್ಷಾಂತರ ಮಂದಿ ಸಾವಿಗೀಡಾದರು. ಮರಗಳು ಪ್ರಾಕೃತಿಕವಾಗಿಯೇ ನಿತ್ಯ ಆಮ್ಲಜನಕ ನೀಡುವುದರಿಂದ ವೃಕ್ಷಗಳಿಗೆ ಸದಾ ಕೃತಜ್ಞರಾಗಿರಬೇಕು’ ಎಂದು ತಿಳಿಸಿದರು.</p>.<p>‘ಅಮೆಜಾನ್ ಮಳೆ ಕಾಡುಗಳನ್ನು ಆಮ್ಲಜನಕದ ಕಣಜ ಎಂದು ಕರೆಯುತ್ತಾರೆ. ಜಗತ್ತಿನ ಶೇ 20ರಷ್ಟು ಆಮ್ಲಜನಕವನ್ನು ಅಮೆಜಾನ್ ಕಾಡುಗಳು ಪೂರೈಸುತ್ತವೆ. ನಿತ್ಯಹರಿದ್ವರ್ಣದ ಕಾಡುಗಳು, ಪಶ್ಚಿಮ ಘಟ್ಟಗಳೂ ಆಮ್ಲಜನಕದ ಆಗರವಾಗಿರುವುದರಿಂದ ಮುಂದಿನ ಪೀಳಿಗೆಗಳಿಗೆ ಇವುಗಳನ್ನು ಸಂರಕ್ಷಿಸಬೇಕು’ ಎಂದು ಹೇಳಿದರು.</p>.<p>‘ಮಾನವ -ವನ್ಯಜೀವಿ ಸಂಘರ್ಷ ಇಂದಿನ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಸಹಬಾಳ್ವೆಯ ಬಗ್ಗೆ ಜನಜಾಗೃತಿ ಮೂಡಿಸಲೇಬೇಕಿದೆ. ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಅಧಿಕಾರಿಗಳು, ಸಿಬ್ಬಂದಿಯಲ್ಲಿ ತುಡಿತ ಇರಲೇಬೇಕಾಗುತ್ತದೆ. ಎಸ್. ಪರಮೇಶ್ವರಪ್ಪ ಅವರು ಭೌತಿಕವಾಗಿ ನಮ್ಮ ಜತೆಗಿಲ್ಲದೇ ಇದ್ದರೂ ಅವರ ಬದುಕು ಮಾದರಿ’ ಎಂದು ಹೇಳಿದರು.</p>.<p>ಪರಿಸರ ತಜ್ಞರಾದ ಸುರೇಶ್ ಹೆಬ್ಳೀಕರ್, ಉಲ್ಲಾಸ್ ಕಾರಂತ್, ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ನಿವೃತ್ತ ಅಧಿಕಾರಿ ಆರ್.ಎಂ. ಪಾಲಣ್ಣ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸ್ವಚ್ಛ ಗಾಳಿ ನೀಡುವ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಯಲು ಅವಕಾಶ ಕೊಡಬೇಡಿ. ವೃಕ್ಷ ಸಂರಕ್ಷಣೆ ಹಾಗೂ ಸಂವರ್ಧನೆಗೆ ನಿಮ್ಮ ಕೈಯಲ್ಲಿ ಆದ ಸಹಾಯ ಮಾಡಿ‘ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.</p>.<p>ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪರಮೇಶ್ವರಪ್ಪ ಅವರ ‘ಆಳ ಬೇರು ಮರ ಅಮರ ನಿಸರ್ಗದ ವರ’ ಆತ್ಮಕಥೆಯನ್ನು ಗುರುವಾರ ಇಲ್ಲಿ ಜನಾರ್ಪಣೆ ಮಾಡಿ ಮಾತನಾಡಿದರು.</p>.<p>‘ಆಮ್ಲಜನಕ ಪ್ರತಿಯೊಬ್ಬರ ಬದುಕಿಗೆ ಬೇಕೇ ಬೇಕು. ಅದರ ಮಹತ್ವ ತಿಳಿದಿದ್ದು ಕೋವಿಡ್ ಕಾಲದಲ್ಲಿ. ಸಕಾಲಕ್ಕೆ ಆಮ್ಲಜನಕ ದೊರಕದೇ ಲಕ್ಷಾಂತರ ಮಂದಿ ಸಾವಿಗೀಡಾದರು. ಮರಗಳು ಪ್ರಾಕೃತಿಕವಾಗಿಯೇ ನಿತ್ಯ ಆಮ್ಲಜನಕ ನೀಡುವುದರಿಂದ ವೃಕ್ಷಗಳಿಗೆ ಸದಾ ಕೃತಜ್ಞರಾಗಿರಬೇಕು’ ಎಂದು ತಿಳಿಸಿದರು.</p>.<p>‘ಅಮೆಜಾನ್ ಮಳೆ ಕಾಡುಗಳನ್ನು ಆಮ್ಲಜನಕದ ಕಣಜ ಎಂದು ಕರೆಯುತ್ತಾರೆ. ಜಗತ್ತಿನ ಶೇ 20ರಷ್ಟು ಆಮ್ಲಜನಕವನ್ನು ಅಮೆಜಾನ್ ಕಾಡುಗಳು ಪೂರೈಸುತ್ತವೆ. ನಿತ್ಯಹರಿದ್ವರ್ಣದ ಕಾಡುಗಳು, ಪಶ್ಚಿಮ ಘಟ್ಟಗಳೂ ಆಮ್ಲಜನಕದ ಆಗರವಾಗಿರುವುದರಿಂದ ಮುಂದಿನ ಪೀಳಿಗೆಗಳಿಗೆ ಇವುಗಳನ್ನು ಸಂರಕ್ಷಿಸಬೇಕು’ ಎಂದು ಹೇಳಿದರು.</p>.<p>‘ಮಾನವ -ವನ್ಯಜೀವಿ ಸಂಘರ್ಷ ಇಂದಿನ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಸಹಬಾಳ್ವೆಯ ಬಗ್ಗೆ ಜನಜಾಗೃತಿ ಮೂಡಿಸಲೇಬೇಕಿದೆ. ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಅಧಿಕಾರಿಗಳು, ಸಿಬ್ಬಂದಿಯಲ್ಲಿ ತುಡಿತ ಇರಲೇಬೇಕಾಗುತ್ತದೆ. ಎಸ್. ಪರಮೇಶ್ವರಪ್ಪ ಅವರು ಭೌತಿಕವಾಗಿ ನಮ್ಮ ಜತೆಗಿಲ್ಲದೇ ಇದ್ದರೂ ಅವರ ಬದುಕು ಮಾದರಿ’ ಎಂದು ಹೇಳಿದರು.</p>.<p>ಪರಿಸರ ತಜ್ಞರಾದ ಸುರೇಶ್ ಹೆಬ್ಳೀಕರ್, ಉಲ್ಲಾಸ್ ಕಾರಂತ್, ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ನಿವೃತ್ತ ಅಧಿಕಾರಿ ಆರ್.ಎಂ. ಪಾಲಣ್ಣ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>