<p><strong>ಬೆಂಗಳೂರು</strong>: ಪ್ರಸಕ್ತ ವರ್ಷದ ‘ಆಶ್ವಾಸನ’ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಎಲೆಮರೆಯ ಕಾಯಿಯಂತೆ ಇರುವವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.</p>.<p>ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ದಾಂಡೇಲಿಯ ಉಸ್ತಾದ್ ಕಾಸಿಂ ಜಮಾದಾರ್, ಯಕ್ಷಗಾನಕ್ಕಾಗಿ ಶಿವಮೊಗ್ಗದ ನಿಟ್ಟೂರಿನ ಸಂತೆಗುಳಿ ನಾರಾಯಣ ಭಟ್ಟ, ಚಿತ್ರಕಲೆ ಮತ್ತು ನಾಟಕಕ್ಕಾಗಿಉತ್ತರ ಕನ್ನಡ ಜಿಲ್ಲೆಯ ಕೆಕ್ಕಾರಿನ ಜಿ.ಡಿ.ಭಟ್ಟ,<br />ಕರಕುಶಲ ಕಲೆಗಾಗಿ ನವಲಗುಂದದ ರಹಮತ್ತಾಭೀಕುತುಬುಬ್ಬಿನ್ ಪಾವಟೆಕರ್ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ಪ್ರಶಸ್ತಿಗೆ ಆಯ್ಕೆಯಾದವರಿಗೆ ಸ್ಮರಣಿಕೆ ಹಾಗೂ ₹15 ಸಾವಿರ ನೀಡಿ ಗೌರವಿಸಲಾಗುವುದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಿ.ಎಸ್. ಹೆಗಡೆ ತಿಳಿಸಿದ್ದಾರೆ.</p>.<p>ಘರಾಣಾದ ಪ್ರಸಿದ್ಧ ಗಾಯಕಿ ಲಲಿತಾ ಶಿವರಾಮ ಉಭಯಕರ್ ಅವರು1993ರಲ್ಲಿ ‘ಆಶ್ವಾಸನ ಫೌಂಡೇಷನ್’ ಸ್ಥಾಪಿಸಿದ್ದರು.</p>.<p>ಇದೇ 15ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದುಅಧ್ಯಕ್ಷೆ ಮಾಲವಿಕಾ ಬಿಜೂರ ಉಭಯಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪ್ರಸಕ್ತ ವರ್ಷದ ‘ಆಶ್ವಾಸನ’ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಎಲೆಮರೆಯ ಕಾಯಿಯಂತೆ ಇರುವವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.</p>.<p>ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ದಾಂಡೇಲಿಯ ಉಸ್ತಾದ್ ಕಾಸಿಂ ಜಮಾದಾರ್, ಯಕ್ಷಗಾನಕ್ಕಾಗಿ ಶಿವಮೊಗ್ಗದ ನಿಟ್ಟೂರಿನ ಸಂತೆಗುಳಿ ನಾರಾಯಣ ಭಟ್ಟ, ಚಿತ್ರಕಲೆ ಮತ್ತು ನಾಟಕಕ್ಕಾಗಿಉತ್ತರ ಕನ್ನಡ ಜಿಲ್ಲೆಯ ಕೆಕ್ಕಾರಿನ ಜಿ.ಡಿ.ಭಟ್ಟ,<br />ಕರಕುಶಲ ಕಲೆಗಾಗಿ ನವಲಗುಂದದ ರಹಮತ್ತಾಭೀಕುತುಬುಬ್ಬಿನ್ ಪಾವಟೆಕರ್ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ಪ್ರಶಸ್ತಿಗೆ ಆಯ್ಕೆಯಾದವರಿಗೆ ಸ್ಮರಣಿಕೆ ಹಾಗೂ ₹15 ಸಾವಿರ ನೀಡಿ ಗೌರವಿಸಲಾಗುವುದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜಿ.ಎಸ್. ಹೆಗಡೆ ತಿಳಿಸಿದ್ದಾರೆ.</p>.<p>ಘರಾಣಾದ ಪ್ರಸಿದ್ಧ ಗಾಯಕಿ ಲಲಿತಾ ಶಿವರಾಮ ಉಭಯಕರ್ ಅವರು1993ರಲ್ಲಿ ‘ಆಶ್ವಾಸನ ಫೌಂಡೇಷನ್’ ಸ್ಥಾಪಿಸಿದ್ದರು.</p>.<p>ಇದೇ 15ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದುಅಧ್ಯಕ್ಷೆ ಮಾಲವಿಕಾ ಬಿಜೂರ ಉಭಯಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>