<p><strong>ಬೆಂಗಳೂರು:</strong> ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ ಏಳು ಆರೋಪಿಗಳನ್ನು ಆಗ್ನೇಯ ವಿಭಾಗದ ಆಡುಗೋಡು ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಮೈಸೂರಿನ ಜೆ.ಪಿ. ನಗರದ ಶಶಿಕುಮಾರ್ (25), ಮಂಡಿಮೊಹಲ್ಲಾದ ಸೈಯದ್ ಕಾಸಿಫ್ (31), ರಾಜೀವ್ನಗರದ ಮೊಹಮ್ಮದ್ ಮುದಾಸೀರ್(36), ಉದಯಗಿರಿಯ ಶಫಿ(38), ಇಮ್ತಿಯಾಜ್ ಪಾಷಾ(33), ಲಷ್ಕರ್ ಮೊಹಲ್ಲಾದ ಅಜರುದ್ದೀನ್(32) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಸೈಯದ್ ದಾನೀಶ್(20) ಬಂಧಿತರು.</p>.<p>ವಂಚನೆ ನಡೆಸಿ ಎಲ್ಲರೂ ಮೈಸೂರಿನ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಮೊಹಮ್ಮದ್ ಕಾಶಿಫ್ ಎಂಬಾತನ ಸ್ನೇಹಿತನ ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ ಆರೋಪಿಗಳು, ₹1.50 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದರು.</p>.<p>ಬಂಧಿತರಿಂದ ಒಂಬತ್ತು ಮೊಬೈಲ್ ಫೋನ್ಗಳು, 11 ಬ್ಯಾಂಕ್ ಪಾಸ್ಬುಕ್, ಆರು ಚೆಕ್ ಬುಕ್, 31 ಎಟಿಎಂ ಕಾರ್ಡ್, ಒಂಬತ್ತು ಆಧಾರ್ ಕಾರ್ಡ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ದೂರುದಾರ ಮೊಹಮ್ಮದ್ ಕಾಶಿಫ್ಗೆ ಜ.7ರಂದು ಅವರ ಸ್ನೇಹಿತರೊಬ್ಬರ ಹೆಸರು ಹಾಗೂ ಫೋಟೊ ಹೊಂದಿದ್ದ ಫೇಸ್ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದು ನಿಜವೆಂದು ನಂಬಿದ್ದ ಕಾಶಿಫ್, ಆ ರಿಕ್ವೆಸ್ಟ್ ಅನ್ನು ಸ್ವೀಕರಿಸಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಪ್ರೊಫೈಲ್ನಿಂದ, ‘ನಾನು ದುಬೈನಲ್ಲಿದ್ದು, ಕೆಲವೇ ದಿನಗಳಲ್ಲಿ ಭಾರತಕ್ಕೆ ಬರುತ್ತಿದ್ದೇನೆ. ನನ್ನ ಬಳಿಯಿರುವ ಅಪಾರ ಹಣವನ್ನು ಭಾರತಕ್ಕೆ ತೆಗೆದುಕೊಂಡು ಬಂದರೆ ಹೆಚ್ಚಿನ ತೆರಿಗೆ ಪಾವತಿಸಬೇಕು. ಆ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇನೆ. ನಾನು ಬೆಂಗಳೂರಿಗೆ ಬಂದಾಗ ಹಣ ಪಡೆಯುತ್ತೇನೆ’ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ್ದ ಮೊಹಮ್ಮದ್ ಕಾಶಿಫ್, ತಮ್ಮ ಬ್ಯಾಂಕ್ ಖಾತೆಯ ವಿವಿರ ನೀಡಿದ್ದರು. ಬಳಿಕ ಬ್ಯಾಂಕ್ ಖಾತೆಗೆ ₹7.85 ಲಕ್ಷ ಹಣ ವರ್ಗಾಯಿಸಿದಂತೆ ನಕಲಿ ರಶೀದಿ ಕಳುಹಿಸಿದ್ದ ಸೈಬರ್ ವಂಚಕರು, ಮರುದಿನ ಹಣ ಬ್ಯಾಂಕ್ ಖಾತೆಗೆ ಜಮೆ ಆಗಲಿದೆಯೆಂದು ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.</p>.<p>‘ಮರುದಿನ ಮತ್ತೆ ಫೇಸ್ಬುಕ್ ಖಾತೆಯ ಮೂಲಕ ಆರೋಪಿಗಳ ಪೈಕಿ ಒಬ್ಬ ಸಂಪರ್ಕಿಸಿ, ತಾನು ಸೌದಿ ಅರೇಬಿಯಾದ ಪೊಲೀಸ್ ಠಾಣೆಯೊಂದರಲ್ಲಿ ತೊಂದರೆಗೆ ಸಿಲುಕಿದ್ದೇನೆ. ತುರ್ತಾಗಿ ₹1.95 ಲಕ್ಷ ಹಣ ಬೇಕಿದೆ ಎಂದು ತಿಳಿಸಿದ್ದ. ಹಣವನ್ನು ಏಜೆಂಟ್ಗೆ ಕಳುಹಿಸುವಂತೆ ಸೂಚಿಸಿದ್ದ. ಮಾತು ನಂಬಿದ್ದ ದೂರುದಾರರು, ₹5 ಸಾವಿರ ಹಣ ವರ್ಗಾವಣೆ ಮಾಡಿದ್ದರು. ಆರೋಪಿಗಳು ತಿಳಿಸಿದ್ದ ನಂಬರ್ಗೆ ಹಂತ ಹಂತವಾಗಿ ₹1.50 ಲಕ್ಷ ಹಣ ವರ್ಗಾಯಿಸಿದ್ದರು’ ಎಂದು ಮೂಲಗಳು ತಿಳಿಸಿವೆ.</p>.<p>‘ಯಾವುದೇ ಹಣ ವಾಪಸ್ ಬಾರದ ಕಾರಣ ದೂರು ನೀಡಿದ್ದರು. ತಾಂತ್ರಿಕ ಸಾಕ್ಷ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.</p>.<div><blockquote>ತನಿಖೆ ವೇಳೆ ಮೈಸೂರಿನ ಬ್ಯಾಂಕ್ವೊಂದರ ಖಾತೆಗೆ ಹಣ ವರ್ಗಾವಣೆ ಆಗಿರುವುದು ಗೊತ್ತಾಗಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು </blockquote><span class="attribution">ಸಾರಾ ಫಾತಿಮಾ ಡಿಸಿಪಿ ಆಗ್ನೇಯ ವಿಭಾಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ ಏಳು ಆರೋಪಿಗಳನ್ನು ಆಗ್ನೇಯ ವಿಭಾಗದ ಆಡುಗೋಡು ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಮೈಸೂರಿನ ಜೆ.ಪಿ. ನಗರದ ಶಶಿಕುಮಾರ್ (25), ಮಂಡಿಮೊಹಲ್ಲಾದ ಸೈಯದ್ ಕಾಸಿಫ್ (31), ರಾಜೀವ್ನಗರದ ಮೊಹಮ್ಮದ್ ಮುದಾಸೀರ್(36), ಉದಯಗಿರಿಯ ಶಫಿ(38), ಇಮ್ತಿಯಾಜ್ ಪಾಷಾ(33), ಲಷ್ಕರ್ ಮೊಹಲ್ಲಾದ ಅಜರುದ್ದೀನ್(32) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಸೈಯದ್ ದಾನೀಶ್(20) ಬಂಧಿತರು.</p>.<p>ವಂಚನೆ ನಡೆಸಿ ಎಲ್ಲರೂ ಮೈಸೂರಿನ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ಮೊಹಮ್ಮದ್ ಕಾಶಿಫ್ ಎಂಬಾತನ ಸ್ನೇಹಿತನ ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ ಆರೋಪಿಗಳು, ₹1.50 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದರು.</p>.<p>ಬಂಧಿತರಿಂದ ಒಂಬತ್ತು ಮೊಬೈಲ್ ಫೋನ್ಗಳು, 11 ಬ್ಯಾಂಕ್ ಪಾಸ್ಬುಕ್, ಆರು ಚೆಕ್ ಬುಕ್, 31 ಎಟಿಎಂ ಕಾರ್ಡ್, ಒಂಬತ್ತು ಆಧಾರ್ ಕಾರ್ಡ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>ದೂರುದಾರ ಮೊಹಮ್ಮದ್ ಕಾಶಿಫ್ಗೆ ಜ.7ರಂದು ಅವರ ಸ್ನೇಹಿತರೊಬ್ಬರ ಹೆಸರು ಹಾಗೂ ಫೋಟೊ ಹೊಂದಿದ್ದ ಫೇಸ್ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದು ನಿಜವೆಂದು ನಂಬಿದ್ದ ಕಾಶಿಫ್, ಆ ರಿಕ್ವೆಸ್ಟ್ ಅನ್ನು ಸ್ವೀಕರಿಸಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಪ್ರೊಫೈಲ್ನಿಂದ, ‘ನಾನು ದುಬೈನಲ್ಲಿದ್ದು, ಕೆಲವೇ ದಿನಗಳಲ್ಲಿ ಭಾರತಕ್ಕೆ ಬರುತ್ತಿದ್ದೇನೆ. ನನ್ನ ಬಳಿಯಿರುವ ಅಪಾರ ಹಣವನ್ನು ಭಾರತಕ್ಕೆ ತೆಗೆದುಕೊಂಡು ಬಂದರೆ ಹೆಚ್ಚಿನ ತೆರಿಗೆ ಪಾವತಿಸಬೇಕು. ಆ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇನೆ. ನಾನು ಬೆಂಗಳೂರಿಗೆ ಬಂದಾಗ ಹಣ ಪಡೆಯುತ್ತೇನೆ’ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ್ದ ಮೊಹಮ್ಮದ್ ಕಾಶಿಫ್, ತಮ್ಮ ಬ್ಯಾಂಕ್ ಖಾತೆಯ ವಿವಿರ ನೀಡಿದ್ದರು. ಬಳಿಕ ಬ್ಯಾಂಕ್ ಖಾತೆಗೆ ₹7.85 ಲಕ್ಷ ಹಣ ವರ್ಗಾಯಿಸಿದಂತೆ ನಕಲಿ ರಶೀದಿ ಕಳುಹಿಸಿದ್ದ ಸೈಬರ್ ವಂಚಕರು, ಮರುದಿನ ಹಣ ಬ್ಯಾಂಕ್ ಖಾತೆಗೆ ಜಮೆ ಆಗಲಿದೆಯೆಂದು ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.</p>.<p>‘ಮರುದಿನ ಮತ್ತೆ ಫೇಸ್ಬುಕ್ ಖಾತೆಯ ಮೂಲಕ ಆರೋಪಿಗಳ ಪೈಕಿ ಒಬ್ಬ ಸಂಪರ್ಕಿಸಿ, ತಾನು ಸೌದಿ ಅರೇಬಿಯಾದ ಪೊಲೀಸ್ ಠಾಣೆಯೊಂದರಲ್ಲಿ ತೊಂದರೆಗೆ ಸಿಲುಕಿದ್ದೇನೆ. ತುರ್ತಾಗಿ ₹1.95 ಲಕ್ಷ ಹಣ ಬೇಕಿದೆ ಎಂದು ತಿಳಿಸಿದ್ದ. ಹಣವನ್ನು ಏಜೆಂಟ್ಗೆ ಕಳುಹಿಸುವಂತೆ ಸೂಚಿಸಿದ್ದ. ಮಾತು ನಂಬಿದ್ದ ದೂರುದಾರರು, ₹5 ಸಾವಿರ ಹಣ ವರ್ಗಾವಣೆ ಮಾಡಿದ್ದರು. ಆರೋಪಿಗಳು ತಿಳಿಸಿದ್ದ ನಂಬರ್ಗೆ ಹಂತ ಹಂತವಾಗಿ ₹1.50 ಲಕ್ಷ ಹಣ ವರ್ಗಾಯಿಸಿದ್ದರು’ ಎಂದು ಮೂಲಗಳು ತಿಳಿಸಿವೆ.</p>.<p>‘ಯಾವುದೇ ಹಣ ವಾಪಸ್ ಬಾರದ ಕಾರಣ ದೂರು ನೀಡಿದ್ದರು. ತಾಂತ್ರಿಕ ಸಾಕ್ಷ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.</p>.<div><blockquote>ತನಿಖೆ ವೇಳೆ ಮೈಸೂರಿನ ಬ್ಯಾಂಕ್ವೊಂದರ ಖಾತೆಗೆ ಹಣ ವರ್ಗಾವಣೆ ಆಗಿರುವುದು ಗೊತ್ತಾಗಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು </blockquote><span class="attribution">ಸಾರಾ ಫಾತಿಮಾ ಡಿಸಿಪಿ ಆಗ್ನೇಯ ವಿಭಾಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>