‘ನೂತನ ಪಿಂಚಣಿ ಯೋಜನೆಗೆ ಬಜೆಟ್ನಲ್ಲಿ ಹಣ ಹೊಂದಿಸಲು ಸಾಧ್ಯವಿಲ್ಲ, ಆಯಾ ಸಂಸ್ಥೆಗಳ ಸಂಪನ್ಮೂಲದಲ್ಲೇ ಹಣ ಹೊಂದಿಸಿಕೊಂಡು ಎನ್ಪಿಎಸ್ ಆರಂಭಿಸಲು ಸರ್ಕಾರ ಸೂಚಿಸಿದೆ. ಆದರೆ ಹಲವು ಸಂಸ್ಥೆಗಳಲ್ಲಿ ಸಂಪನ್ಮೂಲದ ಕೊರತೆ ಇದೆ, ಇಂತಹ ಕ್ರಮ ಕೈಗೊಂಡರೆ ರೋಗಿಗಳ ಮೇಲೆ ಹೊರೆ ಬೀಳುವ ಸಾಧ್ಯತೆಯೂ ಇರುತ್ತದೆ.ಹೀಗಾಗಿ ಸರ್ಕಾರವೇ ಈ ಯೋಜನೆಗೆ ಬಜೆಟ್ ನಿಗದಿಪಡಿಸಿ ಜಾರಿಗೆ ತರಬೇಕು. 14 ವರ್ಷಗಳಿಂದ ಮಾಡುತ್ತಿರುವ ಈ ಒತ್ತಾಯವನ್ನು ಈಡೇರಿಸಬೇಕು’ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.