<p>ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಾಗೂ ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಮಿಷವೊಡ್ಡಿ ಸಿವಿಲ್ ಗುತ್ತಿಗೆದಾರರೊಬ್ಬರಿಂದ ₹ 22.72 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಯಲಹಂಕ ನಿವಾಸಿಯಾಗಿರುವ 30 ವರ್ಷದ ಗುತ್ತಿಗೆದಾರರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಸೈಯದ್ ರೆಹಮತ್ ಉಲ್ಲಾ, ಸೈಯದ್ ಖಾದರ್ ಹಾಗೂ ಸೈಯದ್ ಹುಸೇನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದೂರುದಾರರಿಗೆ ಕೆಲ ವರ್ಷಗಳ ಹಿಂದೆಯಷ್ಟೇ ಆರೋಪಿ ರೆಹಮತ್ ಉಲ್ಲಾ ಪರಿಚಯವಾಗಿತ್ತು. ‘ರಾಜ್ಯ ಸರ್ಕಾರದ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ನನಗೆ ಪರಿಚಯ. ಅವರಿಗೆ ಹೇಳಿ ಕಾಮಗಾರಿ ಗುತ್ತಿಗೆ ಕೊಡಿಸುತ್ತೇನೆ’ ಎಂದು ಆರೋಪಿ ಆಮಿಷವೊಡ್ಡಿದ್ದ. ನಂತರ, ₹ 4 ಲಕ್ಷ ಪಡೆದುಕೊಂಡಿದ್ದ. ಇದಾದ ಬಳಿಕ ಆರೋಪಿ ಯಾವುದೇ ಕಾಮಗಾರಿ ಕೊಡಿಸಿರಲಿಲ್ಲ.’</p>.<p>‘ಆರೋಪಿ ವರ್ತನೆಯನ್ನು ದೂರುದಾರ ಪ್ರಶ್ನಿಸಿದ್ದರು. ಸದ್ಯದಲ್ಲೇ ಕಾಮಗಾರಿ ಕೊಡಿಸುವುದಾಗಿ ಪುನಃ ಹೇಳಿದ್ದ ಆರೋಪಿ, ‘ದುಬೈನಲ್ಲಿರುವ ಸಂಬಂಧಿಕರೊಬ್ಬರ ಬಳಿ ಚಿನ್ನವಿದೆ. ಅದನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ’ ಎಂದಿದ್ದ. ಅದನ್ನೂ ನಂಬಿದ್ದ ದೂರು ದಾರ, ₹ 22.72 ಲಕ್ಷ ನೀಡಿದ್ದ. ಹಣ ಪಡೆದಿದ್ದ ಆರೋಪಿಗಳು, ಯಾವುದೇ ಚಿನ್ನಾಭರಣ ಕೊಟ್ಟಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದರಿಂದ ದೂರು ದಾರರು ಆರೋಪಿಸಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಾಗೂ ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಮಿಷವೊಡ್ಡಿ ಸಿವಿಲ್ ಗುತ್ತಿಗೆದಾರರೊಬ್ಬರಿಂದ ₹ 22.72 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಯಲಹಂಕ ನಿವಾಸಿಯಾಗಿರುವ 30 ವರ್ಷದ ಗುತ್ತಿಗೆದಾರರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಸೈಯದ್ ರೆಹಮತ್ ಉಲ್ಲಾ, ಸೈಯದ್ ಖಾದರ್ ಹಾಗೂ ಸೈಯದ್ ಹುಸೇನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದೂರುದಾರರಿಗೆ ಕೆಲ ವರ್ಷಗಳ ಹಿಂದೆಯಷ್ಟೇ ಆರೋಪಿ ರೆಹಮತ್ ಉಲ್ಲಾ ಪರಿಚಯವಾಗಿತ್ತು. ‘ರಾಜ್ಯ ಸರ್ಕಾರದ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ನನಗೆ ಪರಿಚಯ. ಅವರಿಗೆ ಹೇಳಿ ಕಾಮಗಾರಿ ಗುತ್ತಿಗೆ ಕೊಡಿಸುತ್ತೇನೆ’ ಎಂದು ಆರೋಪಿ ಆಮಿಷವೊಡ್ಡಿದ್ದ. ನಂತರ, ₹ 4 ಲಕ್ಷ ಪಡೆದುಕೊಂಡಿದ್ದ. ಇದಾದ ಬಳಿಕ ಆರೋಪಿ ಯಾವುದೇ ಕಾಮಗಾರಿ ಕೊಡಿಸಿರಲಿಲ್ಲ.’</p>.<p>‘ಆರೋಪಿ ವರ್ತನೆಯನ್ನು ದೂರುದಾರ ಪ್ರಶ್ನಿಸಿದ್ದರು. ಸದ್ಯದಲ್ಲೇ ಕಾಮಗಾರಿ ಕೊಡಿಸುವುದಾಗಿ ಪುನಃ ಹೇಳಿದ್ದ ಆರೋಪಿ, ‘ದುಬೈನಲ್ಲಿರುವ ಸಂಬಂಧಿಕರೊಬ್ಬರ ಬಳಿ ಚಿನ್ನವಿದೆ. ಅದನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ’ ಎಂದಿದ್ದ. ಅದನ್ನೂ ನಂಬಿದ್ದ ದೂರು ದಾರ, ₹ 22.72 ಲಕ್ಷ ನೀಡಿದ್ದ. ಹಣ ಪಡೆದಿದ್ದ ಆರೋಪಿಗಳು, ಯಾವುದೇ ಚಿನ್ನಾಭರಣ ಕೊಟ್ಟಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದರಿಂದ ದೂರು ದಾರರು ಆರೋಪಿಸಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>