‘ಆರೋಪಿ ವರ್ತನೆಯನ್ನು ದೂರುದಾರ ಪ್ರಶ್ನಿಸಿದ್ದರು. ಸದ್ಯದಲ್ಲೇ ಕಾಮಗಾರಿ ಕೊಡಿಸುವುದಾಗಿ ಪುನಃ ಹೇಳಿದ್ದ ಆರೋಪಿ, ‘ದುಬೈನಲ್ಲಿರುವ ಸಂಬಂಧಿಕರೊಬ್ಬರ ಬಳಿ ಚಿನ್ನವಿದೆ. ಅದನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ’ ಎಂದಿದ್ದ. ಅದನ್ನೂ ನಂಬಿದ್ದ ದೂರು ದಾರ, ₹ 22.72 ಲಕ್ಷ ನೀಡಿದ್ದ. ಹಣ ಪಡೆದಿದ್ದ ಆರೋಪಿಗಳು, ಯಾವುದೇ ಚಿನ್ನಾಭರಣ ಕೊಟ್ಟಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದರಿಂದ ದೂರು ದಾರರು ಆರೋಪಿಸಿದ್ದಾರೆ’ ಎಂದರು.