<p><strong>ಬೆಂಗಳೂರು:</strong> ಎಚ್ಎಎಲ್ ಆಸ್ತಿಯನ್ನು ಬಳಸಿಕೊಂಡು ವಿಂಡ್ ಟನಲ್ ರಸ್ತೆಯ ಸಮೀಪ 1.43 ಕಿ.ಮೀ ಉದ್ದ ಸರ್ವಿಸ್ ರಸ್ತೆಯನ್ನು ರಾಜಕಾಲುವೆ ಬಫರ್ ವಲಯದಲ್ಲಿ ನಿರ್ಮಿಸಲು ಬಿ–ಸ್ಮೈಲ್ ನಿರ್ಧರಿಸಿದೆ.</p>.<p>ರಾಜಕಾಲುವೆ/ ಬಫರ್ ವಲಯದ ಸಂರಕ್ಷಣೆ, ಅಭಿವೃದ್ಧಿ ಜೊತೆಗೆ ಸರ್ವಿಸ್ ರಸ್ತೆಯನ್ನು ನಿರ್ಮಿಸಲು ₹19.98 ಕೋಟಿ ವೆಚ್ಚದ ಬಿ–ಸ್ಮೈಲ್ ಟೆಂಡರ್ ಆಹ್ವಾನಿಸಿದ್ದು, ಆರು ತಿಂಗಳಲ್ಲಿ ರಸ್ತೆ ನಿರ್ಮಿಸುವ ಗುರಿ ಹೊಂದಿದೆ.</p>.<p>ಚಲ್ಲಘಟ್ಟದ ಜೆಸಿಟಿ ರಸ್ತೆಯ ಸಮೀಪದ ರಾಜಕಾಲುವೆ ಬಫರ್ ವಲಯದಲ್ಲಿ ಆರಂಭವಾಗುವ ಸರ್ವಿಸ್ ರಸ್ತೆ, ಎಚ್ಎಎಲ್ನ ಕಾಂಪೌಂಡ್ ಸಮೀಪ ಹಾದುಹೋಗಿ, ಬೆಳ್ಳಂದೂರು ಕೆರೆ ದಡದಲ್ಲಿ ಸಾಗಲಿದೆ. ಈ ಸರ್ವಿಸ್ ರಸ್ತೆ ಕೆಂಪಾಪುರಕ್ಕೆ ಸಂಪರ್ಕ ಕಲ್ಪಿಸಲಿದೆ.</p>.<p>ರಾಜಕಾಲುವೆಗೆ ರೀಟೈನಿಂಗ್ ವಾಲ್, ಸೇತುವೆ ನಿರ್ಮಾಣ, ಒಳಚರಂಡಿ ಪೈಪ್ ಅಳವಡಿಕೆ, ಯುಟಿಲಿಟಿ ಚೇಂಬರ್ಗಳು, ಕೇಬಲ್ ಡಕ್ಟ್, ಎಚ್ಡಿಪಿಇ ಕೇಬಲ್ ಅಳವಡಿಸುವುದು ಸೇರಿದಂತೆ, ಬ್ಲ್ಯಾಕ್ ಟಾಪಿಂಗ್ ರಸ್ತೆಯನ್ನು ಪಾದಚಾರಿ ಮಾರ್ಗ, ಮಳೆ ನೀರು ಸಂಗ್ರಹ ವ್ಯವಸ್ಥೆಯೊಂದಿಗೆ ನಿರ್ಮಿಸಲು ಬಿ–ಸ್ಮೈಲ್ ನಿರ್ಧರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎಚ್ಎಎಲ್ ಆಸ್ತಿಯನ್ನು ಬಳಸಿಕೊಂಡು ವಿಂಡ್ ಟನಲ್ ರಸ್ತೆಯ ಸಮೀಪ 1.43 ಕಿ.ಮೀ ಉದ್ದ ಸರ್ವಿಸ್ ರಸ್ತೆಯನ್ನು ರಾಜಕಾಲುವೆ ಬಫರ್ ವಲಯದಲ್ಲಿ ನಿರ್ಮಿಸಲು ಬಿ–ಸ್ಮೈಲ್ ನಿರ್ಧರಿಸಿದೆ.</p>.<p>ರಾಜಕಾಲುವೆ/ ಬಫರ್ ವಲಯದ ಸಂರಕ್ಷಣೆ, ಅಭಿವೃದ್ಧಿ ಜೊತೆಗೆ ಸರ್ವಿಸ್ ರಸ್ತೆಯನ್ನು ನಿರ್ಮಿಸಲು ₹19.98 ಕೋಟಿ ವೆಚ್ಚದ ಬಿ–ಸ್ಮೈಲ್ ಟೆಂಡರ್ ಆಹ್ವಾನಿಸಿದ್ದು, ಆರು ತಿಂಗಳಲ್ಲಿ ರಸ್ತೆ ನಿರ್ಮಿಸುವ ಗುರಿ ಹೊಂದಿದೆ.</p>.<p>ಚಲ್ಲಘಟ್ಟದ ಜೆಸಿಟಿ ರಸ್ತೆಯ ಸಮೀಪದ ರಾಜಕಾಲುವೆ ಬಫರ್ ವಲಯದಲ್ಲಿ ಆರಂಭವಾಗುವ ಸರ್ವಿಸ್ ರಸ್ತೆ, ಎಚ್ಎಎಲ್ನ ಕಾಂಪೌಂಡ್ ಸಮೀಪ ಹಾದುಹೋಗಿ, ಬೆಳ್ಳಂದೂರು ಕೆರೆ ದಡದಲ್ಲಿ ಸಾಗಲಿದೆ. ಈ ಸರ್ವಿಸ್ ರಸ್ತೆ ಕೆಂಪಾಪುರಕ್ಕೆ ಸಂಪರ್ಕ ಕಲ್ಪಿಸಲಿದೆ.</p>.<p>ರಾಜಕಾಲುವೆಗೆ ರೀಟೈನಿಂಗ್ ವಾಲ್, ಸೇತುವೆ ನಿರ್ಮಾಣ, ಒಳಚರಂಡಿ ಪೈಪ್ ಅಳವಡಿಕೆ, ಯುಟಿಲಿಟಿ ಚೇಂಬರ್ಗಳು, ಕೇಬಲ್ ಡಕ್ಟ್, ಎಚ್ಡಿಪಿಇ ಕೇಬಲ್ ಅಳವಡಿಸುವುದು ಸೇರಿದಂತೆ, ಬ್ಲ್ಯಾಕ್ ಟಾಪಿಂಗ್ ರಸ್ತೆಯನ್ನು ಪಾದಚಾರಿ ಮಾರ್ಗ, ಮಳೆ ನೀರು ಸಂಗ್ರಹ ವ್ಯವಸ್ಥೆಯೊಂದಿಗೆ ನಿರ್ಮಿಸಲು ಬಿ–ಸ್ಮೈಲ್ ನಿರ್ಧರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>