<p><strong>ಬೆಂಗಳೂರು:</strong> ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ), ಪುಲಕೇಶಿನಗರ, ಹಲಸೂರು ಹಾಗೂ ಸುತ್ತಮುತ್ತ ಸೆ. 22ರಂದು ಗಣೇಶ ಮೂರ್ತಿ ಬೃಹತ್ ಮೆರವಣಿಗೆಗಳು ನಡೆಯಲಿದ್ದು, ವಾಹನಗಳ ದಟ್ಟಣೆ ಉಂಟಾಗುವ ಸಾಧ್ಯತೆ. ಅಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>.<p>‘ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಗಳು ಇವೆ. ದಟ್ಟಣೆ ಉಂಟಾಗುವುದರಿಂದ, ಮಾರ್ಗ ಬದಲಾವಣೆ ಮಾಡಲಾಗಿದೆ’ ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಹೇಳಿದ್ದಾರೆ.</p>.<p>ಸಂಚಾರ ನಿರ್ಬಂಧಿಸಿರುವ ರಸ್ತೆಗಳು:</p>.<ul><li><p> ನಾಗವಾರ ಜಂಕ್ಷನ್ನಿಂದ ಪಾಟರಿ ವೃತ್ತ</p></li><li><p>ನೇತಾಜಿ ಜಂಕ್ಷನ್ನಿಂದ ಪಾಟರಿ ವೃತ್ತ–ಟ್ಯಾನರಿ ರಸ್ತೆ</p></li><li><p>ಕೆನ್ಸಿಂಗ್ಟನ್ ಕಡೆಯಿಂದ ಎಂ.ಇ.ಜಿ – ಹಲಸೂರು ಕೆರೆವರೆಗೆ</p></li></ul>.<h2>ಪರ್ಯಾಯ ಮಾರ್ಗ:</h2>.<ul><li><p>ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್ ಕಡೆಗೆ ಹೋಗುವವರು, ನಾಗವಾರ ಜಂಕ್ಷನ್ನಿಂದ ಹೆಣ್ಣೂರು ಜಂಕ್ಷನ್–ರಾಬರ್ಟ್ಸನ್ ರಸ್ತೆ ಜಂಕ್ಷನ್ ಮೂಲಕ ಸಂಚರಿಸಬಹುದು</p></li><li><p>ಶಿವಾಜಿನಗರದಿಂದ ನಾಗವಾರ್ ಜಂಕ್ಷನ್ ಹೋಗುವವರು, ಸ್ಪೆನ್ಸರ್ ರಸ್ತೆ–ಕೋಲ್ಸ್ ರಸ್ತೆ–ಹೆಣ್ಣೂರು ಮೂಲಕ ತೆರಳಬಹುದು</p></li><li><p>ಆರ್.ಟಿ.ನಗರದಿಂದ ಕಾವಲ್ಬೈರಸಂದ್ರ ಹೋಗುವವರು, ಪುಷ್ಪಾಂಜಲಿ ಚಿತ್ರಮಂದಿರ–ವೀರಣ್ಣ ಪಾಳ್ಯ ಜಂಕ್ಷನ್ ಮೂಲಕ ಸಾಗಬಹುದು</p></li><li><p>ನೇತಾಜಿ ಜಂಕ್ಷನ್ನಿಂದ ನಾಗವಾರ ಜಂಕ್ಷನ್ ಹೋಗುವವರು, ಮಾಸ್ಕ್ ಜಂಕ್ಷನ್–ಪಾಟರಿ ವೃತ್ತ– ಹೆಣ್ಣೂರು ರಸ್ತೆ ಜಂಕ್ಷನ್– ಲಿಂಗಾರಾಜಪುರ ಮೇಲ್ಸೇತುವೆ ಮೂಲಕ ತೆರಳಬಹುದು</p></li></ul>.<h2>ವಾಹನ ನಿಲುಗಡೆಗೆ ನಿರ್ಬಂಧ:</h2>.<ul><li><p>ಪಾಟರಿ ವೃತ್ತದಿಂದ ನಾಗವಾರ ಜಂಕ್ಷನ್, ಗೋವಿಂದಪುರ ಜಂಕ್ಷನ್, ಎಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್ನಿಂದ ನರೇಂದ್ರ ಟೆಂಟ್ ಜಂಕ್ಷನ್ವರೆಗೆ</p></li><li><p>ಪಾಟರಿ ವೃತ್ತದ ಎಂ.ಎಂ. ರಸ್ತೆಯಿಂದ ಲಾಜರ್ ರಸ್ತೆಯವರೆಗೆ</p></li><li><p>ಹಲಸೂರು ಕೆರೆ ಮುಖ್ಯದ್ವಾರ ಹಾಗೂ ಸುತ್ತಮುತ್ತಲ ರಸ್ತೆಗಳು (ಸೆ. 22 ಹಾಗೂ ಸೆ. 24ರಂದು ವಾಹನ ನಿಲುಗಡೆ ನಿರ್ಬಂಧ)</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ), ಪುಲಕೇಶಿನಗರ, ಹಲಸೂರು ಹಾಗೂ ಸುತ್ತಮುತ್ತ ಸೆ. 22ರಂದು ಗಣೇಶ ಮೂರ್ತಿ ಬೃಹತ್ ಮೆರವಣಿಗೆಗಳು ನಡೆಯಲಿದ್ದು, ವಾಹನಗಳ ದಟ್ಟಣೆ ಉಂಟಾಗುವ ಸಾಧ್ಯತೆ. ಅಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>.<p>‘ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಗಳು ಇವೆ. ದಟ್ಟಣೆ ಉಂಟಾಗುವುದರಿಂದ, ಮಾರ್ಗ ಬದಲಾವಣೆ ಮಾಡಲಾಗಿದೆ’ ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಹೇಳಿದ್ದಾರೆ.</p>.<p>ಸಂಚಾರ ನಿರ್ಬಂಧಿಸಿರುವ ರಸ್ತೆಗಳು:</p>.<ul><li><p> ನಾಗವಾರ ಜಂಕ್ಷನ್ನಿಂದ ಪಾಟರಿ ವೃತ್ತ</p></li><li><p>ನೇತಾಜಿ ಜಂಕ್ಷನ್ನಿಂದ ಪಾಟರಿ ವೃತ್ತ–ಟ್ಯಾನರಿ ರಸ್ತೆ</p></li><li><p>ಕೆನ್ಸಿಂಗ್ಟನ್ ಕಡೆಯಿಂದ ಎಂ.ಇ.ಜಿ – ಹಲಸೂರು ಕೆರೆವರೆಗೆ</p></li></ul>.<h2>ಪರ್ಯಾಯ ಮಾರ್ಗ:</h2>.<ul><li><p>ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್ ಕಡೆಗೆ ಹೋಗುವವರು, ನಾಗವಾರ ಜಂಕ್ಷನ್ನಿಂದ ಹೆಣ್ಣೂರು ಜಂಕ್ಷನ್–ರಾಬರ್ಟ್ಸನ್ ರಸ್ತೆ ಜಂಕ್ಷನ್ ಮೂಲಕ ಸಂಚರಿಸಬಹುದು</p></li><li><p>ಶಿವಾಜಿನಗರದಿಂದ ನಾಗವಾರ್ ಜಂಕ್ಷನ್ ಹೋಗುವವರು, ಸ್ಪೆನ್ಸರ್ ರಸ್ತೆ–ಕೋಲ್ಸ್ ರಸ್ತೆ–ಹೆಣ್ಣೂರು ಮೂಲಕ ತೆರಳಬಹುದು</p></li><li><p>ಆರ್.ಟಿ.ನಗರದಿಂದ ಕಾವಲ್ಬೈರಸಂದ್ರ ಹೋಗುವವರು, ಪುಷ್ಪಾಂಜಲಿ ಚಿತ್ರಮಂದಿರ–ವೀರಣ್ಣ ಪಾಳ್ಯ ಜಂಕ್ಷನ್ ಮೂಲಕ ಸಾಗಬಹುದು</p></li><li><p>ನೇತಾಜಿ ಜಂಕ್ಷನ್ನಿಂದ ನಾಗವಾರ ಜಂಕ್ಷನ್ ಹೋಗುವವರು, ಮಾಸ್ಕ್ ಜಂಕ್ಷನ್–ಪಾಟರಿ ವೃತ್ತ– ಹೆಣ್ಣೂರು ರಸ್ತೆ ಜಂಕ್ಷನ್– ಲಿಂಗಾರಾಜಪುರ ಮೇಲ್ಸೇತುವೆ ಮೂಲಕ ತೆರಳಬಹುದು</p></li></ul>.<h2>ವಾಹನ ನಿಲುಗಡೆಗೆ ನಿರ್ಬಂಧ:</h2>.<ul><li><p>ಪಾಟರಿ ವೃತ್ತದಿಂದ ನಾಗವಾರ ಜಂಕ್ಷನ್, ಗೋವಿಂದಪುರ ಜಂಕ್ಷನ್, ಎಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್ನಿಂದ ನರೇಂದ್ರ ಟೆಂಟ್ ಜಂಕ್ಷನ್ವರೆಗೆ</p></li><li><p>ಪಾಟರಿ ವೃತ್ತದ ಎಂ.ಎಂ. ರಸ್ತೆಯಿಂದ ಲಾಜರ್ ರಸ್ತೆಯವರೆಗೆ</p></li><li><p>ಹಲಸೂರು ಕೆರೆ ಮುಖ್ಯದ್ವಾರ ಹಾಗೂ ಸುತ್ತಮುತ್ತಲ ರಸ್ತೆಗಳು (ಸೆ. 22 ಹಾಗೂ ಸೆ. 24ರಂದು ವಾಹನ ನಿಲುಗಡೆ ನಿರ್ಬಂಧ)</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>