ಇಬ್ಬರೂ ಕಡೂರಿನವರು: ‘ವೈದ್ಯ ರೇವಂತ್ ಅವರ ಕಡೂರಿನ ಮನೆಯಲ್ಲಿ ಹರ್ಷಿತಾ ಕುಟುಂಬ ಬಾಡಿಗೆಗೆ ಇತ್ತು. ಅದೇ ವೇಳೆ ಅವರಿಬ್ಬರ ನಡುವೆ ಸ್ನೇಹ ಏರ್ಪಟ್ಟಿತ್ತು. ಬಳಿಕ, ಮನೆಯವರು ಇಬ್ಬರಿಗೂ ಬೇರೆ ಬೇರೆ ಮದುವೆ ಮಾಡಿದ್ದರು. ಅದಾದ ಬಳಿಕವೂ ಅವರಿಬ್ಬರು ಕದ್ದುಮುಚ್ಚಿ ಭೇಟಿಯಾಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.