<p><strong>ಬೆಂಗಳೂರು:</strong> ನಗರದಲ್ಲಿ ಗುರುವಾರ ಸಂಜೆಯಿಂದ ರಾತ್ರಿಯವರೆಗೆ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪಡಿಪಾಟಲು ಅನುಭವಿಸಿದರು.</p>.<p>ಅರೆ–ಬರೆ ಮುಗಿದ ಕಾಮಗಾರಿಗಳು, ಗುಂಡಿ ತೋಡಿ ಬಿಟ್ಟ ರಸ್ತೆಗಳು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದವು. ಸುಮಾರು ಆರು ತಾಸು ಸುರಿದ ಮಳೆಗೆ<br />ನಗರದ ಕೆಲವು ಪ್ರದೇಶಗಳು ಹೊಳೆಯಂತಾದವು. ಯಲಹಂಕ, ಟ್ರಿನಿಟಿ ವೃತ್ತ, ಹೊರಮಾವುವಿನ ಪ್ರಗತಿ ಲೇಔಟ್ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ಬಿದ್ದ ಬಗ್ಗೆ ವರದಿಯಾಗಿವೆ.</p>.<p>ರಾಜ್ಯದಲ್ಲಿ ಪೂರ್ವಾಭಿಮುಖವಾಗಿ ಮೋಡಗಳ ಚಲನೆ ಹಾಗೂ ದಕ್ಷಿಣ ತಮಿಳುನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿರುವುದರಿಂದ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು.</p>.<p>ಟಿನ್ಫ್ಯಾಕ್ಟರಿಯ ಉದಯನಗರ ಭಾಗದಲ್ಲಿ ಒಳಚರಂಡಿ ನೀರು ಮುಖ್ಯ ಮತ್ತು ಒಳ ರಸ್ತೆಗಳ ಭಾಗದಲ್ಲಿ ಹರಿದಿದ್ದರಿಂದ ಸ್ಥಳೀಯರು ದುರ್ನಾತ ಸಹಿಸಿಕೊಳ್ಳಬೇಕಾಯಿತು. ರಾಜಕಾಲುವೆ ನೀರನ್ನು ವಸತಿ ಪ್ರದೇಶಗಳ ಕಡೆಗೆ ಹರಿಯುವಂತೆ ಮಾಡಿದ್ದರಿಂದ ಉತ್ತರಹಳ್ಳಿಯ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಈಡಾಗಬೇಕಾಯಿತು.</p>.<p>‘ಉತ್ತರಹಳ್ಳಿ ಕೆರೆ ತುಂಬಿದರೆ ಆ ನೀರು ವಸತಿ ಪ್ರದೇಶದತ್ತ ಬರುತ್ತದೆ. ರಾಜಕಾಲುವೆಯ ನೀರು ಮನೆಯ ಕಡೆಗೇಬರುತ್ತದೆ. ಕಾಲುವೆಯ ನೀರು ಮನೆ<br />ಯೊಳಗೆ ಬಾರದಂತೆ ಸಣ್ಣ ಕಟ್ಟೆ ಕಟ್ಟಿಕೊಂಡಿದ್ದೆವು. ಆದರೆ, ಒಳಚರಂಡಿ ಪೈಪ್ಲೈನ್ ಮತ್ತು ರಸ್ತೆ ನಿರ್ಮಾಣಕ್ಕಾಗಿ ಜಲಮಂಡಳಿ ಹಾಗೂ ಬಿಬಿಎಂಪಿ<br />ಯವರು ಅದನ್ನೆಲ್ಲ ಕಿತ್ತು ಹಾಕಿದರು. ಈಗ ನೀರು ನುಗ್ಗುತ್ತಿದೆ. ಮನೆಯ ಗೋಡೆ ಗಳೂ ಸೋರುತ್ತಿವೆ’ ಎಂದು ಉತ್ತರಹಳ್ಳಿಯ 7ನೇ ಮುಖ್ಯರಸ್ತೆ, 3ನೇ ಬ್ಲಾಕ್ನ ನಿವಾಸಿಗಳು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.</p>.<p>‘ರಾಜಕಾಲುವೆ ಕಾಮಗಾರಿ ಪ್ರಾರಂಭಿ ಸಿದ್ದರು. ಅದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಲಾಕ್ಡೌನ್ಗಿಂತ ಮುಂಚೆ ರಸ್ತೆ ನಿರ್ಮಾಣ ಮಾಡಲು ಪ್ರಾರಂಭಿಸಿದ್ದರು.<br />ಇನ್ನೂ ಅದು ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಓಡಾಡಲೂ ಆಗುತ್ತಿಲ್ಲ’ ಎಂದರು.</p>.<p class="Subhead">ವಾಹನ ಸವಾರರ ಪರದಾಟ: ಮಡಿವಾಳ, ಸಿಲ್ಕ್ಬೋರ್ಡ್, ಚಾಮರಾಜಪೇಟೆ, ಮತ್ತಿಕೆರೆ, ಯಶವಂತಪುರ, ಕನಕಪುರ ರಸ್ತೆ, ಬನಶಂಕರಿ ಸೇರಿ ನಗರದ ಬಹುತೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.</p>.<p>ಕಾವೇರಿ ಜಂಕ್ಷನ್, ಮಲ್ಲೇಶ್ವರ ಸೆಂಟ್ರಲ್, ಮೈಸೂರು ರಸ್ತೆ, ಚಾಮರಾಜಪೇಟೆ, ಮಡಿವಾಳ ಹಾಗೂ ಓಕಳಿಪುರದಲ್ಲಿ ಸಂಚಾರ ದಟ್ಟಣೆಯೂ ಉಂಟಾಗಿತ್ತು. ಯಲಹಂಕ ನ್ಯೂಟೌನ್ ಹಾಗೂ ಟ್ರಿನಿಟಿ ಸರ್ಕಲ್ ವ್ಯಾಪ್ತಿಯಲ್ಲಿ ಕೆಲವು ಮರಗಳು ಧರೆಗುರುಳಿದವು.</p>.<p class="Subhead">ಮೇಲ್ಸೇತುವೆ ಕೆಳಗೆ ನೀರು: ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹೆಬ್ಬಾಳ,ಮಲ್ಲೇಶ್ವರ, ಯಶವಂತಪುರ ಹಾಗೂ ಓಕಳೀಪುರ ಸೇರಿದಂತೆ ನಗರದ ಹಲವು ಭಾಗದಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು.</p>.<p>ಆದರೆ, ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಇನ್ನೂ ಎರಡು ಅಥವಾ ಮೂರು ದಿನ ಮಳೆ ಸುರಿಯುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.</p>.<p><strong>ಬಾಣಂತಿ ಮಗುವಿಗೆ ತೊಂದರೆ</strong><br />‘ಮನೆಯ ಗೋಡೆಗಳು ಕುಸಿಯುತ್ತೇವೆಯೇನೋ ಎಂಬಷ್ಟರ ಮಟ್ಟಿಗೆ ರಭಸವಾಗಿ ನೀರು ಹರಿಯುತ್ತಿದೆ. ಈ ಮೊದಲು ಇದೇ ರೀತಿಯ ಪರಿಸ್ಥಿತಿ ಬಂದಾಗ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯುವುದಾಗಿ ಅಧಿಕಾರಿಗಳು ಹೇಳಿದ್ದರು. ಆ ಕೆಲಸ ಮಾಡಲಿಲ್ಲ. ರಾಜಕಾಲುವೆ ನೀರು ಹರಿಯದಂತೆ ನಾವೇ ಸಣ್ಣ ಕಟ್ಟೆ ಕಟ್ಟಿಸಿಕೊಂಡೆವು. ಅದನ್ನೂ ಒಡೆದು ಹಾಕಿದರು. ಮನೆಯಲ್ಲಿ ಬಾಣಂತಿ, ಮಗು ಇದೆ. ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಸ್ಥಿತಿ ಇದೆ’ ಎಂದು ಉತ್ತರಹಳ್ಳಿಯ ನಿವಾಸಿ ಕೆ. ಲಕ್ಷ್ಮಣ್ ಹೇಳಿದರು.</p>.<p>‘ನಾನು ಮತ್ತು ಕೆಲವು ನಿವಾಸಿಗಳು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರಿಗೆ ಕರೆ ಮಾಡಿದೆವು. ಆದರೆ, ಅವರು ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ಅವರು ದೂರಿದರು.</p>.<p>‘ಪ್ರತಿ ಬಾರಿ ಮಳೆ ಬಂದಾಗ ಇಷ್ಟು ಆತಂಕವಾಗುತ್ತಿರಲಿಲ್ಲ. ಕಾಮಗಾರಿ ಹೆಸರಿನಲ್ಲಿ ಎಲ್ಲೆಂದರಲ್ಲಿ ಗುಂಡಿ ತೋಡಿ ಹೋಗಿದ್ದಾರೆ. ನೀರು ತುಂಬಿಕೊಂಡು, ಮನೆಯ ಅಡಿಪಾಯ ಮತ್ತು ಗೋಡೆಗಳು ಶಿಥಿಲವಾಗುತ್ತಿವೆ’ ಎಂದು ಅವರು ಹೇಳಿದರು.</p>.<p><strong>ಕೊಡಿಗೇಹಳ್ಳಿ: ಹೆಚ್ಚು ಮಳೆ</strong></p>.<p>ನಗರದ ಕೊಡಿಗೇಹಳ್ಳಿಯಲ್ಲಿ ಗುರುವಾರ ಹೆಚ್ಚು ಅಂದರೆ, 65.50 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ಹೇಳಿದೆ.</p>.<p>ದೊರೆಸಾನಿಪಾಳ್ಯದ ಇಎಂಪಿಆರ್ಐ ಕ್ಯಾಂಪಸ್ನಲ್ಲಿ 51 ಮಿ.ಮೀ. ಮಳೆಯಾಗಿದೆ ಎಂದು ಅದು ಹೇಳಿದೆ.</p>.<p><br /><strong>ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ</strong></p>.<p>ಸಂಜೆ ಸುರಿದ ಮಳೆಯಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತು. ಸಂಜೆಯಿಂದ ಮಧ್ಯರಾತ್ರಿಯವರೆಗೆ ಕತ್ತಲಲ್ಲಿಯೇ ಕಳೆಯಬೇಕಾಯಿತು.</p>.<p>ಜಯನಗರ, ಜೆ.ಪಿ. ನಗರ, ರಾಮಮೂರ್ತಿ ನಗರ, ಆರ್.ಟಿ. ನಗರ, ತಾವರೆಕೆರೆ, ಕುಮಾರಸ್ವಾಮಿ ಲೇಔಟ್, ಹೊಸೂರು ರಸ್ತೆ ಮತ್ತಿತರ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತು.</p>.<p>‘ನಾಗನಾಥಪುರ ಉಪವಿಭಾಗ ವ್ಯಾಪ್ತಿಯಲ್ಲಿ ಎಫ್–4 ಫೀಡರ್ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಈ ಕಾರಣದಿಂದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದ ಕೆಲವಡೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಯಿತು. ಹಲವಾರು ಕಡೆ ಮರಗಳು ಬಿದ್ದಿದ್ದರಿಂದಲೂ ವಿದ್ಯುತ್ ವ್ಯತ್ಯಯವಾಯಿತು’ ಎಂದು ಬೆಸ್ಕಾಂ ಎಂಜಿನಿಯರ್ ಒಬ್ಬರು ತಿಳಿಸಿದರು.</p>.<p><strong>ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ.ಗಳಲ್ಲಿ)</strong></p>.<p><strong>ಪ್ರದೇಶಮತ್ತು ಪ್ರಮಾಣ</strong></p>.<p>ಕೊಡಿಗೇಹಳ್ಳಿ-65.50</p>.<p>ಕೋನಪ್ಪನ ಅಗ್ರಹಾರ-56</p>.<p>ದೊರೆಸಾನಿ ಪಾಳ್ಯ-51</p>.<p>ಬಿಳೇಕಹಳ್ಳಿ-44.5</p>.<p>ಕೋಣನಕುಂಟೆ-42.5</p>.<p>ಜಯನಗರ-42.5</p>.<p>ಆರ್.ಆರ್. ನಗರ-40</p>.<p>ಉತ್ತರಹಳ್ಳಿ-40</p>.<p>ಚೊಕ್ಕಸಂದ್ರ-45.5</p>.<p>ಎಚ್ಎಂಟಿ ವಾರ್ಡ್- 40</p>.<p>ವಿ. ನಾಗೇನಹಳ್ಳಿ-39.5</p>.<p>ಬಸವನಗುಡಿ- 38</p>.<p>ನಾಯಂಡಹಳ್ಳಿ- 37</p>.<p>ಬೆನ್ನಿಗಾನಹಳ್ಳಿ- 36</p>.<p>ಪಟ್ಟಾಭಿರಾಮನಗರ- 35</p>.<p>ಪೀಣ್ಯ ಕೈಗಾರಿಕಾ ಪ್ರದೇಶ- 31</p>.<p>ಎಚ್ಎಎಲ್- 30</p>.<p>ಕೆಂಗೇರಿ- 30</p>.<p>ಸಾರಕ್ಕಿ- 29</p>.<p>ಶೆಟ್ಟಿಹಳ್ಳಿ- 28</p>.<p>ಹೇರೋಹಳ್ಳಿ- 28</p>.<p>ಹೆಗ್ಗನಹಳ್ಳಿ- 28</p>.<p>ಕೃಷ್ಣರಾಜಪುರ- 26</p>.<p>ಮಾರಪ್ಪನಪಾಳ್ಯ- 26</p>.<p>ರಾಮಮೂರ್ತಿ ನಗರ- 25</p>.<p>ಜಕ್ಕೂರು- 24</p>.<p>ಕೆಂಗೇರಿ- 23</p>.<p>ಕಮ್ಮನಹಳ್ಳಿ- 21</p>.<p><strong>ಆಧಾರ: ಕೆಎಸ್ಎನ್ಡಿಎಂಸಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಗುರುವಾರ ಸಂಜೆಯಿಂದ ರಾತ್ರಿಯವರೆಗೆ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪಡಿಪಾಟಲು ಅನುಭವಿಸಿದರು.</p>.<p>ಅರೆ–ಬರೆ ಮುಗಿದ ಕಾಮಗಾರಿಗಳು, ಗುಂಡಿ ತೋಡಿ ಬಿಟ್ಟ ರಸ್ತೆಗಳು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದವು. ಸುಮಾರು ಆರು ತಾಸು ಸುರಿದ ಮಳೆಗೆ<br />ನಗರದ ಕೆಲವು ಪ್ರದೇಶಗಳು ಹೊಳೆಯಂತಾದವು. ಯಲಹಂಕ, ಟ್ರಿನಿಟಿ ವೃತ್ತ, ಹೊರಮಾವುವಿನ ಪ್ರಗತಿ ಲೇಔಟ್ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ಬಿದ್ದ ಬಗ್ಗೆ ವರದಿಯಾಗಿವೆ.</p>.<p>ರಾಜ್ಯದಲ್ಲಿ ಪೂರ್ವಾಭಿಮುಖವಾಗಿ ಮೋಡಗಳ ಚಲನೆ ಹಾಗೂ ದಕ್ಷಿಣ ತಮಿಳುನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿರುವುದರಿಂದ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು.</p>.<p>ಟಿನ್ಫ್ಯಾಕ್ಟರಿಯ ಉದಯನಗರ ಭಾಗದಲ್ಲಿ ಒಳಚರಂಡಿ ನೀರು ಮುಖ್ಯ ಮತ್ತು ಒಳ ರಸ್ತೆಗಳ ಭಾಗದಲ್ಲಿ ಹರಿದಿದ್ದರಿಂದ ಸ್ಥಳೀಯರು ದುರ್ನಾತ ಸಹಿಸಿಕೊಳ್ಳಬೇಕಾಯಿತು. ರಾಜಕಾಲುವೆ ನೀರನ್ನು ವಸತಿ ಪ್ರದೇಶಗಳ ಕಡೆಗೆ ಹರಿಯುವಂತೆ ಮಾಡಿದ್ದರಿಂದ ಉತ್ತರಹಳ್ಳಿಯ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಈಡಾಗಬೇಕಾಯಿತು.</p>.<p>‘ಉತ್ತರಹಳ್ಳಿ ಕೆರೆ ತುಂಬಿದರೆ ಆ ನೀರು ವಸತಿ ಪ್ರದೇಶದತ್ತ ಬರುತ್ತದೆ. ರಾಜಕಾಲುವೆಯ ನೀರು ಮನೆಯ ಕಡೆಗೇಬರುತ್ತದೆ. ಕಾಲುವೆಯ ನೀರು ಮನೆ<br />ಯೊಳಗೆ ಬಾರದಂತೆ ಸಣ್ಣ ಕಟ್ಟೆ ಕಟ್ಟಿಕೊಂಡಿದ್ದೆವು. ಆದರೆ, ಒಳಚರಂಡಿ ಪೈಪ್ಲೈನ್ ಮತ್ತು ರಸ್ತೆ ನಿರ್ಮಾಣಕ್ಕಾಗಿ ಜಲಮಂಡಳಿ ಹಾಗೂ ಬಿಬಿಎಂಪಿ<br />ಯವರು ಅದನ್ನೆಲ್ಲ ಕಿತ್ತು ಹಾಕಿದರು. ಈಗ ನೀರು ನುಗ್ಗುತ್ತಿದೆ. ಮನೆಯ ಗೋಡೆ ಗಳೂ ಸೋರುತ್ತಿವೆ’ ಎಂದು ಉತ್ತರಹಳ್ಳಿಯ 7ನೇ ಮುಖ್ಯರಸ್ತೆ, 3ನೇ ಬ್ಲಾಕ್ನ ನಿವಾಸಿಗಳು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.</p>.<p>‘ರಾಜಕಾಲುವೆ ಕಾಮಗಾರಿ ಪ್ರಾರಂಭಿ ಸಿದ್ದರು. ಅದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಲಾಕ್ಡೌನ್ಗಿಂತ ಮುಂಚೆ ರಸ್ತೆ ನಿರ್ಮಾಣ ಮಾಡಲು ಪ್ರಾರಂಭಿಸಿದ್ದರು.<br />ಇನ್ನೂ ಅದು ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಓಡಾಡಲೂ ಆಗುತ್ತಿಲ್ಲ’ ಎಂದರು.</p>.<p class="Subhead">ವಾಹನ ಸವಾರರ ಪರದಾಟ: ಮಡಿವಾಳ, ಸಿಲ್ಕ್ಬೋರ್ಡ್, ಚಾಮರಾಜಪೇಟೆ, ಮತ್ತಿಕೆರೆ, ಯಶವಂತಪುರ, ಕನಕಪುರ ರಸ್ತೆ, ಬನಶಂಕರಿ ಸೇರಿ ನಗರದ ಬಹುತೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.</p>.<p>ಕಾವೇರಿ ಜಂಕ್ಷನ್, ಮಲ್ಲೇಶ್ವರ ಸೆಂಟ್ರಲ್, ಮೈಸೂರು ರಸ್ತೆ, ಚಾಮರಾಜಪೇಟೆ, ಮಡಿವಾಳ ಹಾಗೂ ಓಕಳಿಪುರದಲ್ಲಿ ಸಂಚಾರ ದಟ್ಟಣೆಯೂ ಉಂಟಾಗಿತ್ತು. ಯಲಹಂಕ ನ್ಯೂಟೌನ್ ಹಾಗೂ ಟ್ರಿನಿಟಿ ಸರ್ಕಲ್ ವ್ಯಾಪ್ತಿಯಲ್ಲಿ ಕೆಲವು ಮರಗಳು ಧರೆಗುರುಳಿದವು.</p>.<p class="Subhead">ಮೇಲ್ಸೇತುವೆ ಕೆಳಗೆ ನೀರು: ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹೆಬ್ಬಾಳ,ಮಲ್ಲೇಶ್ವರ, ಯಶವಂತಪುರ ಹಾಗೂ ಓಕಳೀಪುರ ಸೇರಿದಂತೆ ನಗರದ ಹಲವು ಭಾಗದಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು.</p>.<p>ಆದರೆ, ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಇನ್ನೂ ಎರಡು ಅಥವಾ ಮೂರು ದಿನ ಮಳೆ ಸುರಿಯುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.</p>.<p><strong>ಬಾಣಂತಿ ಮಗುವಿಗೆ ತೊಂದರೆ</strong><br />‘ಮನೆಯ ಗೋಡೆಗಳು ಕುಸಿಯುತ್ತೇವೆಯೇನೋ ಎಂಬಷ್ಟರ ಮಟ್ಟಿಗೆ ರಭಸವಾಗಿ ನೀರು ಹರಿಯುತ್ತಿದೆ. ಈ ಮೊದಲು ಇದೇ ರೀತಿಯ ಪರಿಸ್ಥಿತಿ ಬಂದಾಗ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯುವುದಾಗಿ ಅಧಿಕಾರಿಗಳು ಹೇಳಿದ್ದರು. ಆ ಕೆಲಸ ಮಾಡಲಿಲ್ಲ. ರಾಜಕಾಲುವೆ ನೀರು ಹರಿಯದಂತೆ ನಾವೇ ಸಣ್ಣ ಕಟ್ಟೆ ಕಟ್ಟಿಸಿಕೊಂಡೆವು. ಅದನ್ನೂ ಒಡೆದು ಹಾಕಿದರು. ಮನೆಯಲ್ಲಿ ಬಾಣಂತಿ, ಮಗು ಇದೆ. ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಸ್ಥಿತಿ ಇದೆ’ ಎಂದು ಉತ್ತರಹಳ್ಳಿಯ ನಿವಾಸಿ ಕೆ. ಲಕ್ಷ್ಮಣ್ ಹೇಳಿದರು.</p>.<p>‘ನಾನು ಮತ್ತು ಕೆಲವು ನಿವಾಸಿಗಳು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರಿಗೆ ಕರೆ ಮಾಡಿದೆವು. ಆದರೆ, ಅವರು ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ಅವರು ದೂರಿದರು.</p>.<p>‘ಪ್ರತಿ ಬಾರಿ ಮಳೆ ಬಂದಾಗ ಇಷ್ಟು ಆತಂಕವಾಗುತ್ತಿರಲಿಲ್ಲ. ಕಾಮಗಾರಿ ಹೆಸರಿನಲ್ಲಿ ಎಲ್ಲೆಂದರಲ್ಲಿ ಗುಂಡಿ ತೋಡಿ ಹೋಗಿದ್ದಾರೆ. ನೀರು ತುಂಬಿಕೊಂಡು, ಮನೆಯ ಅಡಿಪಾಯ ಮತ್ತು ಗೋಡೆಗಳು ಶಿಥಿಲವಾಗುತ್ತಿವೆ’ ಎಂದು ಅವರು ಹೇಳಿದರು.</p>.<p><strong>ಕೊಡಿಗೇಹಳ್ಳಿ: ಹೆಚ್ಚು ಮಳೆ</strong></p>.<p>ನಗರದ ಕೊಡಿಗೇಹಳ್ಳಿಯಲ್ಲಿ ಗುರುವಾರ ಹೆಚ್ಚು ಅಂದರೆ, 65.50 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ಹೇಳಿದೆ.</p>.<p>ದೊರೆಸಾನಿಪಾಳ್ಯದ ಇಎಂಪಿಆರ್ಐ ಕ್ಯಾಂಪಸ್ನಲ್ಲಿ 51 ಮಿ.ಮೀ. ಮಳೆಯಾಗಿದೆ ಎಂದು ಅದು ಹೇಳಿದೆ.</p>.<p><br /><strong>ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ</strong></p>.<p>ಸಂಜೆ ಸುರಿದ ಮಳೆಯಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತು. ಸಂಜೆಯಿಂದ ಮಧ್ಯರಾತ್ರಿಯವರೆಗೆ ಕತ್ತಲಲ್ಲಿಯೇ ಕಳೆಯಬೇಕಾಯಿತು.</p>.<p>ಜಯನಗರ, ಜೆ.ಪಿ. ನಗರ, ರಾಮಮೂರ್ತಿ ನಗರ, ಆರ್.ಟಿ. ನಗರ, ತಾವರೆಕೆರೆ, ಕುಮಾರಸ್ವಾಮಿ ಲೇಔಟ್, ಹೊಸೂರು ರಸ್ತೆ ಮತ್ತಿತರ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತು.</p>.<p>‘ನಾಗನಾಥಪುರ ಉಪವಿಭಾಗ ವ್ಯಾಪ್ತಿಯಲ್ಲಿ ಎಫ್–4 ಫೀಡರ್ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಈ ಕಾರಣದಿಂದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದ ಕೆಲವಡೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಯಿತು. ಹಲವಾರು ಕಡೆ ಮರಗಳು ಬಿದ್ದಿದ್ದರಿಂದಲೂ ವಿದ್ಯುತ್ ವ್ಯತ್ಯಯವಾಯಿತು’ ಎಂದು ಬೆಸ್ಕಾಂ ಎಂಜಿನಿಯರ್ ಒಬ್ಬರು ತಿಳಿಸಿದರು.</p>.<p><strong>ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ.ಗಳಲ್ಲಿ)</strong></p>.<p><strong>ಪ್ರದೇಶಮತ್ತು ಪ್ರಮಾಣ</strong></p>.<p>ಕೊಡಿಗೇಹಳ್ಳಿ-65.50</p>.<p>ಕೋನಪ್ಪನ ಅಗ್ರಹಾರ-56</p>.<p>ದೊರೆಸಾನಿ ಪಾಳ್ಯ-51</p>.<p>ಬಿಳೇಕಹಳ್ಳಿ-44.5</p>.<p>ಕೋಣನಕುಂಟೆ-42.5</p>.<p>ಜಯನಗರ-42.5</p>.<p>ಆರ್.ಆರ್. ನಗರ-40</p>.<p>ಉತ್ತರಹಳ್ಳಿ-40</p>.<p>ಚೊಕ್ಕಸಂದ್ರ-45.5</p>.<p>ಎಚ್ಎಂಟಿ ವಾರ್ಡ್- 40</p>.<p>ವಿ. ನಾಗೇನಹಳ್ಳಿ-39.5</p>.<p>ಬಸವನಗುಡಿ- 38</p>.<p>ನಾಯಂಡಹಳ್ಳಿ- 37</p>.<p>ಬೆನ್ನಿಗಾನಹಳ್ಳಿ- 36</p>.<p>ಪಟ್ಟಾಭಿರಾಮನಗರ- 35</p>.<p>ಪೀಣ್ಯ ಕೈಗಾರಿಕಾ ಪ್ರದೇಶ- 31</p>.<p>ಎಚ್ಎಎಲ್- 30</p>.<p>ಕೆಂಗೇರಿ- 30</p>.<p>ಸಾರಕ್ಕಿ- 29</p>.<p>ಶೆಟ್ಟಿಹಳ್ಳಿ- 28</p>.<p>ಹೇರೋಹಳ್ಳಿ- 28</p>.<p>ಹೆಗ್ಗನಹಳ್ಳಿ- 28</p>.<p>ಕೃಷ್ಣರಾಜಪುರ- 26</p>.<p>ಮಾರಪ್ಪನಪಾಳ್ಯ- 26</p>.<p>ರಾಮಮೂರ್ತಿ ನಗರ- 25</p>.<p>ಜಕ್ಕೂರು- 24</p>.<p>ಕೆಂಗೇರಿ- 23</p>.<p>ಕಮ್ಮನಹಳ್ಳಿ- 21</p>.<p><strong>ಆಧಾರ: ಕೆಎಸ್ಎನ್ಡಿಎಂಸಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>