‘ಬಿಬಿಎಂಪಿಯಲ್ಲಿ ಲಭ್ಯ ಇರುವ ಸಾರ್ವಜನಿಕ ನಿಧಿ ಬಳಕೆ ಮಾಡಿಕೊಂಡು ಕೋವಿಡ್ ವಿರುದ್ಧ ಜಾಗೃತಿ ಸಂದೇಶ ಪ್ರದರ್ಶಿಸಲಾಗುವುದು. ಯಾವುದೇ ಖಾಸಗಿ ಕಂಪನಿಗಳ ಜಾಹೀರಾತಿಗೆ ಅವಕಾಶ ನೀಡುವುದಿಲ್ಲ’ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ಜಾಗೃತಿ ಸಂದೇಶದ ಜತೆಗೆ ಖಾಸಗಿ ಕಂಪನಿಗಳ ಜಾಹೀರಾತುಗಳನ್ನು ಅಳವಡಿಸಿದ ಕಾರಣ ಅನುಮತಿ ಹಿಂಪಡೆದ ನ್ಯಾಯಾಲಯ, ಫಲಕಗಳನ್ನು ತೆರವುಗೊಳಿಸಲು ಈ ಹಿಂದಿನ ವಿಚಾರಣೆ ವೇಳೆ ಆದೇಶಿಸಿತ್ತು.