ಬೆಂಗಳೂರು: ಹಣಕಾಸಿನ ತೊಂದರೆಯಿಂದಾಗಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಯೋಜನೆಯನ್ನು ಮುಂದುವರಿಸಬೇಕೆ ಅಥವಾ ನಿಲ್ಲಿಸಬೇಕೆ ಎಂಬ ವಿಷಯದ ಕುರಿತು ಸಚಿವ ಸಂಪುಟ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು.
ನಿರ್ದಿಷ್ಟವಾಗಿ ಯಾವುದೇ ತೀರ್ಮಾನಕ್ಕೆ ಬರಲಾಗದೇ ವಿಷಯವನ್ನು ಮುಂದೂಡಲಾಯಿತು. ಕೆಲವು ಸಚಿವರು ಯೋಜನೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.
‘ಯಡಿಯೂರಪ್ಪ ಸರ್ಕಾರ ಯೋಜನೆ ನಿಲ್ಲಿಸಿದರೆ, ಹೋರಾಟ ಮಾಡುವುದಾಗಿ’ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು.