<p><strong>ಬೆಂಗಳೂರು</strong>: ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ವಿದೇಶದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಹಾಗೂ ನೀತಿ ನಿರೂಪಕರನ್ನು ಒಳಗೊಂಡ ’ಜಿ–20ಯ ಎಸ್–20’ ಶೃಂಗ ಸಭೆಯ 100ಕ್ಕೂ ಹೆಚ್ಚು ಪ್ರತಿನಿಧಿಗಳು ಜಗ್ಗಿ ವಾಸುದೇವ್ ಅವರೊಂದಿಗೆ ಸಂವಾದ ನಡೆಸಿದರು.</p>.<p>ಸಂವಾದಲ್ಲಿ ಮಾತನಾಡಿದ ಜಗ್ಗಿ ವಾಸುದೇವ್ ಅವರು, ‘ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯೆಡೆಗೆ ನಮ್ಮ ಬದ್ಧತೆ ಇರಲಿ. ಪ್ರಪಂಚವನ್ನು ಪ್ರಜ್ಞಾವಂತ ದಿಕ್ಕಿನ ಕಡೆಗೆ ಕೊಂಡೊಯ್ಯಬೇಕು’ ಎಂದು ಆಶಿಸಿದರು.</p>.<p>ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಸದಸ್ಯ ಸಂಜೀವ್ ಸನ್ಯಾಲ್ ಮಾತನಾಡಿ, ‘ವಿಜ್ಞಾನಕ್ಕಷ್ಟೇ ಸೀಮಿತವಾಗದೇ ಮತ್ತಷ್ಟು ವಿಷಯಗಳ ಬಗ್ಗೆ ಆಳ ಅಧ್ಯಯನ ನಡೆಸಬೇಕಿದೆ. ಒಂದು ಸಮಗ್ರ ದೃಷ್ಟಿಕೋನವನ್ನು ಪಡೆಯಲು ಸಭೆ ಇಲ್ಲಿ ಆಯೋಜಿಸಲಾಗಿದೆ’ ಎಂದು ಹೇಳಿದರು.</p>.<p>ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ ಅಜೀಜ್ ಸಿಟಿ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಅಧ್ಯಕ್ಷ ಡಾ.ಮುನೀರ್ ಡೆಸೋಕಿ ಮಾತನಾಡಿ, ‘ಈಶಾ ಕೇಂದ್ರದಂತಹ ಪ್ರಶಸ್ತ ಸ್ಥಳದಲ್ಲಿ ಗಂಭೀರ ವಿಷಯಗಳು ಹಾಗೂ ಸವಾಲು ಎದುರಿಸುವ ಕುರಿತು ಚರ್ಚಿಸಲಾಗಿದೆ’ ಎಂದು ಹೇಳಿದರು.</p>.<p>ಎಸ್–20 ಸಹ ಅಧ್ಯಕ್ಷ ಪ್ರೊ.ಅಶುತೋಷ್ ಶರ್ಮ, ಈ ಸ್ಥಳವು ಭಾರತದ ಬಗ್ಗೆ ಹೊಸ ನೆನಪುಗಳು ಹಾಗೂ ಹೊಸ ಅನಿಸಿಕೆಗಳ ಛಾಪು ಮೂಡಿಸಲು ಸಹಕಾರಿ ಆಗಲಿದೆ ಎಂದರು.</p>.<p>ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ನಾಗರಾಜ ನಾಯ್ಡು ಕಾಕನೂರ್, ವಿಜ್ಞಾನ ಪ್ರಪಂಚವನ್ನು ಅರ್ಥೈಸಿಕೊಳ್ಳುವ ಗುರಿ ಹೊಂದಿದ್ದರೆ, ಅಧ್ಯಾತ್ಮವು ಸತ್ಯ ಅರ್ಥ ಮಾಡಿಕೊಳ್ಳುವ ಗುರಿ ಹೊಂದಿದೆ ಎಂದು ಹೇಳಿದರು.</p>.<p>ಜುಲೈ 21ರಿಂದ ಎರಡು ದಿನಗಳ ಕಾಲ ಸಮಾವೇಶ ನಡೆಯಿತು. 35 ದೇಶದ ಪ್ರತಿನಿಧಿಗಳು ಹಾಗೂ 65 ಮಂದಿ ಭಾರತೀಯ ಪ್ರತಿನಿಧಿಗಳು ಭಾಗವಹಿಸಿದ್ದರು.</p>.<p>ಹಸಿರು ಭವಿಷ್ಯಕ್ಕಾಗಿ ಶುದ್ಧ ಇಂಧನ, ಸಮಗ್ರ ಅರೋಗ್ಯ ಮತ್ತು ವಿಜ್ಞಾನವನ್ನು ಸಮಾಜ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯುವ ವಿಚಾರಗಳ ಕುರಿತು ಚರ್ಚಿಸಲಾಯಿತು.</p>.<p>ಈಶಾ ಫೌಂಡೇಶನ್ನ ಕಲಾವಿದರು ಸಮರ ಕಲೆ ಕಳರಿಪಯಟ್ಟು, ಶಾಸ್ತ್ರೀಯ ನೃತ್ಯ ಕಲೆ, ಭರತನಾಟ್ಯ ಪ್ರದರ್ಶನ ಆಯೋಜಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ವಿದೇಶದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಹಾಗೂ ನೀತಿ ನಿರೂಪಕರನ್ನು ಒಳಗೊಂಡ ’ಜಿ–20ಯ ಎಸ್–20’ ಶೃಂಗ ಸಭೆಯ 100ಕ್ಕೂ ಹೆಚ್ಚು ಪ್ರತಿನಿಧಿಗಳು ಜಗ್ಗಿ ವಾಸುದೇವ್ ಅವರೊಂದಿಗೆ ಸಂವಾದ ನಡೆಸಿದರು.</p>.<p>ಸಂವಾದಲ್ಲಿ ಮಾತನಾಡಿದ ಜಗ್ಗಿ ವಾಸುದೇವ್ ಅವರು, ‘ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯೆಡೆಗೆ ನಮ್ಮ ಬದ್ಧತೆ ಇರಲಿ. ಪ್ರಪಂಚವನ್ನು ಪ್ರಜ್ಞಾವಂತ ದಿಕ್ಕಿನ ಕಡೆಗೆ ಕೊಂಡೊಯ್ಯಬೇಕು’ ಎಂದು ಆಶಿಸಿದರು.</p>.<p>ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಸದಸ್ಯ ಸಂಜೀವ್ ಸನ್ಯಾಲ್ ಮಾತನಾಡಿ, ‘ವಿಜ್ಞಾನಕ್ಕಷ್ಟೇ ಸೀಮಿತವಾಗದೇ ಮತ್ತಷ್ಟು ವಿಷಯಗಳ ಬಗ್ಗೆ ಆಳ ಅಧ್ಯಯನ ನಡೆಸಬೇಕಿದೆ. ಒಂದು ಸಮಗ್ರ ದೃಷ್ಟಿಕೋನವನ್ನು ಪಡೆಯಲು ಸಭೆ ಇಲ್ಲಿ ಆಯೋಜಿಸಲಾಗಿದೆ’ ಎಂದು ಹೇಳಿದರು.</p>.<p>ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ ಅಜೀಜ್ ಸಿಟಿ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಅಧ್ಯಕ್ಷ ಡಾ.ಮುನೀರ್ ಡೆಸೋಕಿ ಮಾತನಾಡಿ, ‘ಈಶಾ ಕೇಂದ್ರದಂತಹ ಪ್ರಶಸ್ತ ಸ್ಥಳದಲ್ಲಿ ಗಂಭೀರ ವಿಷಯಗಳು ಹಾಗೂ ಸವಾಲು ಎದುರಿಸುವ ಕುರಿತು ಚರ್ಚಿಸಲಾಗಿದೆ’ ಎಂದು ಹೇಳಿದರು.</p>.<p>ಎಸ್–20 ಸಹ ಅಧ್ಯಕ್ಷ ಪ್ರೊ.ಅಶುತೋಷ್ ಶರ್ಮ, ಈ ಸ್ಥಳವು ಭಾರತದ ಬಗ್ಗೆ ಹೊಸ ನೆನಪುಗಳು ಹಾಗೂ ಹೊಸ ಅನಿಸಿಕೆಗಳ ಛಾಪು ಮೂಡಿಸಲು ಸಹಕಾರಿ ಆಗಲಿದೆ ಎಂದರು.</p>.<p>ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ನಾಗರಾಜ ನಾಯ್ಡು ಕಾಕನೂರ್, ವಿಜ್ಞಾನ ಪ್ರಪಂಚವನ್ನು ಅರ್ಥೈಸಿಕೊಳ್ಳುವ ಗುರಿ ಹೊಂದಿದ್ದರೆ, ಅಧ್ಯಾತ್ಮವು ಸತ್ಯ ಅರ್ಥ ಮಾಡಿಕೊಳ್ಳುವ ಗುರಿ ಹೊಂದಿದೆ ಎಂದು ಹೇಳಿದರು.</p>.<p>ಜುಲೈ 21ರಿಂದ ಎರಡು ದಿನಗಳ ಕಾಲ ಸಮಾವೇಶ ನಡೆಯಿತು. 35 ದೇಶದ ಪ್ರತಿನಿಧಿಗಳು ಹಾಗೂ 65 ಮಂದಿ ಭಾರತೀಯ ಪ್ರತಿನಿಧಿಗಳು ಭಾಗವಹಿಸಿದ್ದರು.</p>.<p>ಹಸಿರು ಭವಿಷ್ಯಕ್ಕಾಗಿ ಶುದ್ಧ ಇಂಧನ, ಸಮಗ್ರ ಅರೋಗ್ಯ ಮತ್ತು ವಿಜ್ಞಾನವನ್ನು ಸಮಾಜ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯುವ ವಿಚಾರಗಳ ಕುರಿತು ಚರ್ಚಿಸಲಾಯಿತು.</p>.<p>ಈಶಾ ಫೌಂಡೇಶನ್ನ ಕಲಾವಿದರು ಸಮರ ಕಲೆ ಕಳರಿಪಯಟ್ಟು, ಶಾಸ್ತ್ರೀಯ ನೃತ್ಯ ಕಲೆ, ಭರತನಾಟ್ಯ ಪ್ರದರ್ಶನ ಆಯೋಜಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>