‘ಮರ ಮಿತ್ರರ’ ನೇಮಕ: ಇದಕ್ಕಾಗಿ 890 ‘ಮರ ಮಿತ್ರ’ರನ್ನು ನೇಮಿಸಲಾಗಿದ್ದು, ಪಂಚಾಯಿತಿ ಮಟ್ಟದಲ್ಲಿ ಇವರು ರೈತರನ್ನು ಉತ್ತೇಜಿಸಲಿದ್ದಾರೆ. ಈಗಾಗಲೇ ವಿವಿಧ ಪಂಚಾಯಿತಿಗಳಲ್ಲಿ ಮರ ಆಧಾರಿತ ಕೃಷಿ ಅಭಿಯಾನಕ್ಕೆ ಸಂಬಂಧಿಸಿದ1,800 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಉತ್ತಮ ಸ್ಪಂದನೆಯೂ ದೊರಕಿದೆ. ಈ ಅಭಿಯಾನದಿಂದ ರೈತರ ಆದಾಯ ಶೇ 300ರಿಂದ ಶೇ 800ರಷ್ಟು ಹೆಚ್ಚಾಗಲಿದೆ ಎಂದು ಜಗ್ಗಿ ವಾಸುದೇವ್ ಹೇಳಿದರು.