<p><strong>ಬೆಂಗಳೂರು:</strong> ಬನ್ನೇರುಘಟ್ಟ ರಸ್ತೆಯಲ್ಲಿ ಜೀಡಿ ಮರ ಜಂಕ್ಷನ್ ಹೆಸರುವಾಸಿ. ಇಲ್ಲಿ ಗೇರುಹಣ್ಣಿನ ಮರಗಳಿದ್ದ ಕಾರಣಕ್ಕೆ (ಈ ಮರಗಳಿಗೆ ಜೀಡಿ ಮರ ಎಂದು ಕರೆಯುತ್ತಾರೆ) ಈ ಹೆಸರು ಬಂದಿದೆ. ಕಾಲಕ್ರಮೇಣ ಇಲ್ಲಿದ್ದ ಜೀಡಿ ಮರಗಳು ನಾಶವಾಗಿದ್ದು, ಒಂದು ಮರ ಮಾತ್ರ ಉಳಿದುಕೊಂಡಿದೆ. ಇಲ್ಲಿ ಮತ್ತೆ ಗೇರು ಹಣ್ಣಿನ ಗಿಡಗಳನ್ನು ಬೆಳೆಸಿ ಈ ಹೆಸರನ್ನು ಅಜರಾಮರಗೊಳಿಸುವ ಪ್ರಯತ್ನಕ್ಕೆ ಭಾನುವಾರ ನಾಂದಿ ಹಾಡಲಾಯಿತು.</p>.<p>ಪ್ರಾಜೆಕ್ಟ್ ವೃಕ್ಷಾ ಫೌಂಡೇಷನ್ ಬಿಬಿಎಂಪಿಯ ಅರಣ್ಯ ಘಟಕದ ಜೊತೆ ಸೇರಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರೆಡ್ಡಿ ಶಂಕರ ಬಾಬು ಅವರು ಗಿಡಗಳನ್ನು ನೆಡುವ ಮೂಲಕ ನಗರದ ಮರಗಳ ಪರಂಪರೆಯನ್ನು ಮುಂದುವರಿಸುವ ಕಾರ್ಯದಲ್ಲಿ ಕೈಜೋಡಿಸಿದರು.</p>.<p>‘ಮಲ್ಲೇಶ್ವರದಲ್ಲಿ ಸಂಪಿಗೆ ರಸ್ತೆ ಇದೆ, ಮಾರ್ಗೋಸಾ (ಬೇವಿನ ಮರ) ರಸ್ತೆ ಇದೆ. ವಿದ್ಯಾರಣ್ಯಪುರದಲ್ಲಿ ಈಚಲಮರ ನಿಲ್ದಾಣ ಇದೆ. ಬನಶಂಕರಿಯಲ್ಲಿ ಹುಣಸೇಮರ ನಿಲ್ದಾಣವಿದೆ. ಅಂದರೆ ಮರಗಳ ಹೆಸರಿನಲ್ಲಿ ನಿರ್ದಿಷ್ಟ ಜಾಗವನ್ನು ಗುರುತಿಸುವ ಪರಂಪರೆ ಈ ನಗರದಲ್ಲಿ ಹಿಂದಿನಿಂದಲೂ ಬೆಳೆದುಬಂದಿದೆ. ಅನೇಕ ಕಡೆ ಮರಗಳನ್ನು ಕಳೆದುಕೊಂಡಿದ್ದರಿಂದ ಅವುಗಳ ಜೊತೆಗೆ ಬೆಸೆದುಕೊಂಡಿದ್ದ ಹೆಸರುಗಳ ಬಳಕೆಯೂ ನಿಂತಿದೆ. ಮರಗಳ ಹೆಸರಿನಲ್ಲಿ ಸ್ಥಳಗಳನ್ನು ಗುರುತಿಸುವ ಪರಂಪರೆಯ ಪುನರುಜ್ಜೀವನಕ್ಕಾಗಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಲ್ಲೀ ಸದ್ಯಕ್ಕೆ ಸಾಂಕೇತಿಕವಾಗಿ 10 ಗೇರುಹಣ್ಣಿನ ಗಿಡಗಳನ್ನು ನೆಟ್ಟಿದ್ದೇವೆ’ ಎಂದು ಪ್ರಾಜೆಕ್ಟ್ ವೃಕ್ಷಾ ಫೌಂಡೇಷನ್ನ ವಿಜಯ್ ನಿಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇನ್ನು ಮುಂದೆ ರಸ್ತೆಗಳನ್ನು, ವೃತ್ತಗಳನ್ನು ಅಭಿವೃದ್ಧಿಪಡಿಸುವಾಗ, ಅಲ್ಲಿ ನಿರ್ದಿಷ್ಟ ಜಾತಿಯ ಸಸಿಗಳನ್ನು ನೆಟ್ಟು ಬೆಳೆಸಬೇಕು. ಅವುಗಳ ಹೆಸರನ್ನೇ ರಸ್ತೆಗೆ ಅಥವಾ ವೃತ್ತಗಳಿಗೆ ಇಡಬೇಕು ಎಂದು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಅಧಿಕಾರಿಗಳನ್ನು ಕೋರಿದ್ದೇವೆ. ಉದಾಹರಣೆಗೆ ಹೊಂಗೆ ಮರಗಳನ್ನು ರಸ್ತೆ ಪಕ್ಕ ನೆಟ್ಟರೆ, ಆ ರಸ್ತೆಯನ್ನು ಹೊಂಗೆ ಮರ ರಸ್ತೆ ಎಂದೇ ಕರೆಯಬೇಕೆಂಬುದು ನಮ್ಮ ಕೋರಿಕೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯರೊಬ್ಬರು ಈ ಜಂಕ್ಷನ್ನಲ್ಲಿ ಒಂದು ಭಾರಿ ಗಾತ್ರದ ಜೀಡಿಮರವೂ ಸೇರಿ ಅನೇಕ ಜೀಡಿಮರಗಳು ಇದ್ದುದನ್ನು ಮೆಲುಕು ಹಾಕಿದರು. ಸಸಿಗಳನ್ನು ನೆಟ್ಟ ಬಳಿಕ ಅಲ್ಲಿ ಸೇರಿದ್ದವರಿಗೆಲ್ಲ ‘ಗೋಡಂಬಿ’ಯನ್ನು ಹಂಚಿ ಸಂಭ್ರಮ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬನ್ನೇರುಘಟ್ಟ ರಸ್ತೆಯಲ್ಲಿ ಜೀಡಿ ಮರ ಜಂಕ್ಷನ್ ಹೆಸರುವಾಸಿ. ಇಲ್ಲಿ ಗೇರುಹಣ್ಣಿನ ಮರಗಳಿದ್ದ ಕಾರಣಕ್ಕೆ (ಈ ಮರಗಳಿಗೆ ಜೀಡಿ ಮರ ಎಂದು ಕರೆಯುತ್ತಾರೆ) ಈ ಹೆಸರು ಬಂದಿದೆ. ಕಾಲಕ್ರಮೇಣ ಇಲ್ಲಿದ್ದ ಜೀಡಿ ಮರಗಳು ನಾಶವಾಗಿದ್ದು, ಒಂದು ಮರ ಮಾತ್ರ ಉಳಿದುಕೊಂಡಿದೆ. ಇಲ್ಲಿ ಮತ್ತೆ ಗೇರು ಹಣ್ಣಿನ ಗಿಡಗಳನ್ನು ಬೆಳೆಸಿ ಈ ಹೆಸರನ್ನು ಅಜರಾಮರಗೊಳಿಸುವ ಪ್ರಯತ್ನಕ್ಕೆ ಭಾನುವಾರ ನಾಂದಿ ಹಾಡಲಾಯಿತು.</p>.<p>ಪ್ರಾಜೆಕ್ಟ್ ವೃಕ್ಷಾ ಫೌಂಡೇಷನ್ ಬಿಬಿಎಂಪಿಯ ಅರಣ್ಯ ಘಟಕದ ಜೊತೆ ಸೇರಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರೆಡ್ಡಿ ಶಂಕರ ಬಾಬು ಅವರು ಗಿಡಗಳನ್ನು ನೆಡುವ ಮೂಲಕ ನಗರದ ಮರಗಳ ಪರಂಪರೆಯನ್ನು ಮುಂದುವರಿಸುವ ಕಾರ್ಯದಲ್ಲಿ ಕೈಜೋಡಿಸಿದರು.</p>.<p>‘ಮಲ್ಲೇಶ್ವರದಲ್ಲಿ ಸಂಪಿಗೆ ರಸ್ತೆ ಇದೆ, ಮಾರ್ಗೋಸಾ (ಬೇವಿನ ಮರ) ರಸ್ತೆ ಇದೆ. ವಿದ್ಯಾರಣ್ಯಪುರದಲ್ಲಿ ಈಚಲಮರ ನಿಲ್ದಾಣ ಇದೆ. ಬನಶಂಕರಿಯಲ್ಲಿ ಹುಣಸೇಮರ ನಿಲ್ದಾಣವಿದೆ. ಅಂದರೆ ಮರಗಳ ಹೆಸರಿನಲ್ಲಿ ನಿರ್ದಿಷ್ಟ ಜಾಗವನ್ನು ಗುರುತಿಸುವ ಪರಂಪರೆ ಈ ನಗರದಲ್ಲಿ ಹಿಂದಿನಿಂದಲೂ ಬೆಳೆದುಬಂದಿದೆ. ಅನೇಕ ಕಡೆ ಮರಗಳನ್ನು ಕಳೆದುಕೊಂಡಿದ್ದರಿಂದ ಅವುಗಳ ಜೊತೆಗೆ ಬೆಸೆದುಕೊಂಡಿದ್ದ ಹೆಸರುಗಳ ಬಳಕೆಯೂ ನಿಂತಿದೆ. ಮರಗಳ ಹೆಸರಿನಲ್ಲಿ ಸ್ಥಳಗಳನ್ನು ಗುರುತಿಸುವ ಪರಂಪರೆಯ ಪುನರುಜ್ಜೀವನಕ್ಕಾಗಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಲ್ಲೀ ಸದ್ಯಕ್ಕೆ ಸಾಂಕೇತಿಕವಾಗಿ 10 ಗೇರುಹಣ್ಣಿನ ಗಿಡಗಳನ್ನು ನೆಟ್ಟಿದ್ದೇವೆ’ ಎಂದು ಪ್ರಾಜೆಕ್ಟ್ ವೃಕ್ಷಾ ಫೌಂಡೇಷನ್ನ ವಿಜಯ್ ನಿಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇನ್ನು ಮುಂದೆ ರಸ್ತೆಗಳನ್ನು, ವೃತ್ತಗಳನ್ನು ಅಭಿವೃದ್ಧಿಪಡಿಸುವಾಗ, ಅಲ್ಲಿ ನಿರ್ದಿಷ್ಟ ಜಾತಿಯ ಸಸಿಗಳನ್ನು ನೆಟ್ಟು ಬೆಳೆಸಬೇಕು. ಅವುಗಳ ಹೆಸರನ್ನೇ ರಸ್ತೆಗೆ ಅಥವಾ ವೃತ್ತಗಳಿಗೆ ಇಡಬೇಕು ಎಂದು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಅಧಿಕಾರಿಗಳನ್ನು ಕೋರಿದ್ದೇವೆ. ಉದಾಹರಣೆಗೆ ಹೊಂಗೆ ಮರಗಳನ್ನು ರಸ್ತೆ ಪಕ್ಕ ನೆಟ್ಟರೆ, ಆ ರಸ್ತೆಯನ್ನು ಹೊಂಗೆ ಮರ ರಸ್ತೆ ಎಂದೇ ಕರೆಯಬೇಕೆಂಬುದು ನಮ್ಮ ಕೋರಿಕೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯರೊಬ್ಬರು ಈ ಜಂಕ್ಷನ್ನಲ್ಲಿ ಒಂದು ಭಾರಿ ಗಾತ್ರದ ಜೀಡಿಮರವೂ ಸೇರಿ ಅನೇಕ ಜೀಡಿಮರಗಳು ಇದ್ದುದನ್ನು ಮೆಲುಕು ಹಾಕಿದರು. ಸಸಿಗಳನ್ನು ನೆಟ್ಟ ಬಳಿಕ ಅಲ್ಲಿ ಸೇರಿದ್ದವರಿಗೆಲ್ಲ ‘ಗೋಡಂಬಿ’ಯನ್ನು ಹಂಚಿ ಸಂಭ್ರಮ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>