<p><strong>ಬೆಂಗಳೂರು</strong>: ಸಂಚಾರ ದಟ್ಟಣೆ ಪರಿಸ್ಥಿತಿ ತಿಳಿಯುವ ಸಲುವಾಗಿ ಪ್ರಥಮ ಭಾರಿಗೆ ನಗರದ ದಕ್ಷಿಣ ಸಂಚಾರ ವಿಭಾಗದಲ್ಲಿ ಡಿಸಿಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ‘ಜಾಯಿನ್ ದಿ ಕಮ್ಯೂಟ್’ (ವಾಹನ ಸವಾರರ ಜತೆ ಪ್ರಯಾಣ) ಎಂಬ ಅಭಿಯಾನ ಆರಂಭಿಸಲಾಗಿದೆ.</p>.<p>ವಾಹನ ಪ್ರಯಾಣಿಕರ ಜತೆಯೇ ಅಧಿಕಾರಿ ಪ್ರಯಾಣಿಸಿ ರಸ್ತೆಯ ಮಾರ್ಗ ಮಧ್ಯೆ ಉಂಟಾಗುವ ಸಂಚಾರ ದಟ್ಟಣೆ, ವಾಹನ ನಿಲುಗಡೆ ಪ್ರದೇಶಗಳ ಅತಿಕ್ರಮಣ ಸೇರಿ ಹಲವು ಸಮಸ್ಯೆಗಳ ನೈಜ ಸ್ಥಿತಿ ಅರಿಯಬಹುದು. ಪ್ರಾಯೋಗಿಕವಾಗಿ ಡಿಸಿಪಿ ಈ ಅಭಿಯಾನದ ಭಾಗವಾಗಿ ಪ್ರಯಾಣಿಕರ ಜತೆ ಪ್ರಯಾಣ ಮಾಡಲಿದ್ದಾರೆ.</p>.<p>ನಾಗರಿಕರನ್ನು ನೇರವಾಗಿ ಸಂಚಾರ ಸಮಸ್ಯೆಗಳ ಪರಿಹಾರದಲ್ಲಿ ಭಾಗಿಯಾಗಿಸುವುದು ಈ ಅಭಿಯಾನದ ಉದ್ದೇಶ. ನಾಗರಿಕರು ತಮ್ಮ ದೈನಂದಿನ ಪ್ರಯಾಣದ ಮಾರ್ಗಗಳು ಮತ್ತು ಪ್ರಯಾಣದ ವಿಧಾನಗಳನ್ನು ನೋಂದಣಿ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ.</p>.<p>ಇದರಲ್ಲಿ ಆಯ್ಕೆಯಾದ ನಾಗರಿಕರಿಗೆ ಶಿವಪ್ರಕಾಶ್ ದೇವರಾಜು ಅವರೊಂದಿಗೆ ಸಂಚಾರ ಮಾಡುವ ಅವಕಾಶ ದೊರೆಯಲಿದೆ. ಈ ವೇಳೆ ದಟ್ಟಣೆ, ವಿಳಂಬ ಅಥವಾ ಸುರಕ್ಷತೆ ಕಾಳಜಿಗಳು ಸೇರಿದಂತೆ ನಾಗರಿಕರು ಸಂಚಾರ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗೆ ವಿವರಿಸಬಹುದು. ಇದರಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಉಪಯೋಗಿಸಿ ನಗರದಾದ್ಯಂತ ಸಂಚಾರ ಸಮಸ್ಯೆಗೆ ಪರಿಹಾರ ಹುಡುಕುವ ಉದ್ದೇಶವಿದೆ.</p>.<p>ಡಿಸಿಪಿ ಶಿವಪ್ರಕಾಶ್ ದೇವರಾಜು ಮಾತನಾಡಿ, ‘ನಗರ ಸಂಚಾರ ಸಮಸ್ಯೆಗಳು ಕೇವಲ ಪೊಲೀಸರು ನಿರ್ವಹಿಸಬೇಕಾದ ಸಮಸ್ಯೆಗಳಲ್ಲ. ನಾಗರಿಕರು ಮತ್ತು ಪೊಲೀಸರು ಒಟ್ಟಾಗಿ ಪರಿಹರಿಸಬೇಕಾದ ಸವಾಲುಗಳಿವೆ . ನಾಗರಿಕರು ಎದುರಿಸುವ ದೈನಂದಿನ ಸವಾಲುಗಳನ್ನು ಅರ್ಥ ಮಾಡಿಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ’ ಎಂದರು.</p>.<p>ಪ್ರಯಾಣಿಕರು ನಿತ್ಯದ ಪ್ರಯಾಣದ ಮಾರ್ಗಗಳು ಮತ್ತು ಯಾವ ವಾಹನಗಳಲ್ಲಿ ಸಂಚರಿಸುತ್ತಾರೆ ಎಂಬ ವಿವರಗಳನ್ನು ಆನ್ಲೈನ್ <a href="https://jointhecommutebstp.in">https://jointhecommutebstp.in</a> ಮೂಲಕ ನೋಂದಾಯಿಸಬೇಕು. ಬಳಿಕ ಅಧಿಕಾರಿ ಜತೆ ಪ್ರಯಾಣಿಸುವ ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಂಚಾರ ದಟ್ಟಣೆ ಪರಿಸ್ಥಿತಿ ತಿಳಿಯುವ ಸಲುವಾಗಿ ಪ್ರಥಮ ಭಾರಿಗೆ ನಗರದ ದಕ್ಷಿಣ ಸಂಚಾರ ವಿಭಾಗದಲ್ಲಿ ಡಿಸಿಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ‘ಜಾಯಿನ್ ದಿ ಕಮ್ಯೂಟ್’ (ವಾಹನ ಸವಾರರ ಜತೆ ಪ್ರಯಾಣ) ಎಂಬ ಅಭಿಯಾನ ಆರಂಭಿಸಲಾಗಿದೆ.</p>.<p>ವಾಹನ ಪ್ರಯಾಣಿಕರ ಜತೆಯೇ ಅಧಿಕಾರಿ ಪ್ರಯಾಣಿಸಿ ರಸ್ತೆಯ ಮಾರ್ಗ ಮಧ್ಯೆ ಉಂಟಾಗುವ ಸಂಚಾರ ದಟ್ಟಣೆ, ವಾಹನ ನಿಲುಗಡೆ ಪ್ರದೇಶಗಳ ಅತಿಕ್ರಮಣ ಸೇರಿ ಹಲವು ಸಮಸ್ಯೆಗಳ ನೈಜ ಸ್ಥಿತಿ ಅರಿಯಬಹುದು. ಪ್ರಾಯೋಗಿಕವಾಗಿ ಡಿಸಿಪಿ ಈ ಅಭಿಯಾನದ ಭಾಗವಾಗಿ ಪ್ರಯಾಣಿಕರ ಜತೆ ಪ್ರಯಾಣ ಮಾಡಲಿದ್ದಾರೆ.</p>.<p>ನಾಗರಿಕರನ್ನು ನೇರವಾಗಿ ಸಂಚಾರ ಸಮಸ್ಯೆಗಳ ಪರಿಹಾರದಲ್ಲಿ ಭಾಗಿಯಾಗಿಸುವುದು ಈ ಅಭಿಯಾನದ ಉದ್ದೇಶ. ನಾಗರಿಕರು ತಮ್ಮ ದೈನಂದಿನ ಪ್ರಯಾಣದ ಮಾರ್ಗಗಳು ಮತ್ತು ಪ್ರಯಾಣದ ವಿಧಾನಗಳನ್ನು ನೋಂದಣಿ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ.</p>.<p>ಇದರಲ್ಲಿ ಆಯ್ಕೆಯಾದ ನಾಗರಿಕರಿಗೆ ಶಿವಪ್ರಕಾಶ್ ದೇವರಾಜು ಅವರೊಂದಿಗೆ ಸಂಚಾರ ಮಾಡುವ ಅವಕಾಶ ದೊರೆಯಲಿದೆ. ಈ ವೇಳೆ ದಟ್ಟಣೆ, ವಿಳಂಬ ಅಥವಾ ಸುರಕ್ಷತೆ ಕಾಳಜಿಗಳು ಸೇರಿದಂತೆ ನಾಗರಿಕರು ಸಂಚಾರ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗೆ ವಿವರಿಸಬಹುದು. ಇದರಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಉಪಯೋಗಿಸಿ ನಗರದಾದ್ಯಂತ ಸಂಚಾರ ಸಮಸ್ಯೆಗೆ ಪರಿಹಾರ ಹುಡುಕುವ ಉದ್ದೇಶವಿದೆ.</p>.<p>ಡಿಸಿಪಿ ಶಿವಪ್ರಕಾಶ್ ದೇವರಾಜು ಮಾತನಾಡಿ, ‘ನಗರ ಸಂಚಾರ ಸಮಸ್ಯೆಗಳು ಕೇವಲ ಪೊಲೀಸರು ನಿರ್ವಹಿಸಬೇಕಾದ ಸಮಸ್ಯೆಗಳಲ್ಲ. ನಾಗರಿಕರು ಮತ್ತು ಪೊಲೀಸರು ಒಟ್ಟಾಗಿ ಪರಿಹರಿಸಬೇಕಾದ ಸವಾಲುಗಳಿವೆ . ನಾಗರಿಕರು ಎದುರಿಸುವ ದೈನಂದಿನ ಸವಾಲುಗಳನ್ನು ಅರ್ಥ ಮಾಡಿಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ’ ಎಂದರು.</p>.<p>ಪ್ರಯಾಣಿಕರು ನಿತ್ಯದ ಪ್ರಯಾಣದ ಮಾರ್ಗಗಳು ಮತ್ತು ಯಾವ ವಾಹನಗಳಲ್ಲಿ ಸಂಚರಿಸುತ್ತಾರೆ ಎಂಬ ವಿವರಗಳನ್ನು ಆನ್ಲೈನ್ <a href="https://jointhecommutebstp.in">https://jointhecommutebstp.in</a> ಮೂಲಕ ನೋಂದಾಯಿಸಬೇಕು. ಬಳಿಕ ಅಧಿಕಾರಿ ಜತೆ ಪ್ರಯಾಣಿಸುವ ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>