‘ಕೆಂಪಾಂಬುಧಿ ಕೆರೆ, ಮಾರತ್ತಹಳ್ಳಿ,ಇಂದಿರಾನಗರ, ಜಯನಗರ, ಲಕ್ಷ್ಮಿಪುರ, ಕೆ.ಜಿ.ರಸ್ತೆ, ಚಿಕ್ಕಪೇಟೆ, ಮೆಜೆಸ್ಟಿಕ್, ಬಿನ್ನಿಪೇಟೆ, ಯಶವಂತಪುರ ಸೇರಿದಂತೆ ಹಲವೆಡೆ ಬಾವುಟ ಬದಲಿಸಿದ್ದೇನೆ. ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಕೆಲಸದಿಂದ ಪ್ರೇರಣೆಗೊಂಡು ಬೆಳಗಾವಿ ಮತ್ತು ಹಾಸನದಲ್ಲೂ ಯುವಕರ ತಂಡಗಳು ಮಾಸಿದ ಬಾವುಟಗಳನ್ನು ಬದಲಿಸುವ ಅಭಿಯಾನ ಆರಂಭಿಸಿರುವುದು ಖುಷಿ ನೀಡಿದೆ’ ಎಂದು ಹೇಳಿದರು.