‘ಪ್ರೌಢಶಾಲೆಯಲ್ಲಿ ಹಸುಗಳ ಬಗ್ಗೆ ಪ್ರಬಂಧ ಬರೆಯಲು ಶಿಕ್ಷಕರು ಸೂಚಿಸಿದ್ದರು. ಆದರೆ, ನಾನು ಹಸುವಿನ ಚಿತ್ರ ಬಿಡಿಸಿ, ಪ್ರಬಂಧ ಎಂದು ನೀಡಿದ್ದೆ. ಶಿಕ್ಷಕರು ನನ್ನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿದರು. ಸಾಹಿತಿಗಳಿಗೆ ಕವನ ಅಭಿವ್ಯಕ್ತಿಯ ಮಾರ್ಗವಾದರೆ, ಗ್ರಾಮೀಣ ಚಿತ್ರಣಗಳೇ ನನ್ನ ಚಿತ್ರಕಲೆಯ ಅಭಿವ್ಯಕ್ತಿ ಮಾರ್ಗವಾಯಿತು’ ಎಂದರು.