<p><strong>ಬೆಂಗಳೂರು: </strong>ಕನ್ನಮಂಗಲ ಕೆರೆಯಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ವರ್ಷದೊಳಗೆ ಈ ಕೆರೆಯು ಕೋಡಿ ಹರಿದಿದೆ. ತುಂಬಿ ಹರಿಯುತ್ತಿರುವ ಈ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಸಂಭ್ರಮ ಆಚರಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.</p>.<p>ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಕನ್ನಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಈ ಕೆರೆ ಒತ್ತುವರಿಯಾಗಿತ್ತು. ಸಮರ್ಪಕ ನಿರ್ವಹಣೆ ಇಲ್ಲದೇ ಈ ಕೆರೆ ಕಸ ತುಂಬುವ ತಾಣವಾಗಿ ಮಾರ್ಪಟ್ಟಿತ್ತು. ಕೊಳಚೆ ನೀರು ಕೂಡ ಇದರ ಒಡಲು ಸೇರುತ್ತಿತ್ತು. ಸಂಪೂರ್ಣ ಹದಗೆಟ್ಟಿದ್ದ ಈ ಕೆರೆಯನ್ನು ಸ್ಥಳೀಯ ನಿವಾಸಿಗಳ ಸ್ವಯಂಸೇವಕರ ಗುಂಪು ’ಫೋರ್ಸ್ ಜಿಡಬ್ಲ್ಯು’ ಹಾಗೂ ಮಹದೇವಪುರ ಪರಿಸರ ಕಾರ್ಯಪಡೆ ನೇತೃತ್ವದಲ್ಲಿ ಪುನರುಜ್ಜೀವನಗೊಳಿಸಿತ್ತು.</p>.<p>2019ರಲ್ಲಿ ಆರಂಭಗೊಂಡ ಪುನರುಜ್ಜೀವನ ಕಾರ್ಯ 2020ರಲ್ಲಿ ಪೂರ್ಣಗೊಂಡಿತ್ತು. ಶಾಸಕರ ನಿಧಿ, ದಾನಿಗಳು ಹಾಗೂ ಸ್ವಯಂಸೇವಕರು ನೀಡಿದ ದೇಣಿಗೆಯ ಮೂಲಕ ಪುನರುಜ್ಜೀವನ ಕಾರ್ಯದ ವೆಚ್ಚವನ್ನು ಭರಿಸಲಾಗಿತ್ತು.</p>.<p>‘ಒತ್ತುವರಿಯಾಗಿದ್ದ ಈ ಕೆರೆಯಲ್ಲಿ ಮೂರು ಎಕರೆಯಲ್ಲಷ್ಟೇ ನೀರು ನಿಲ್ಲುತ್ತಿತ್ತು. ಇದರಲ್ಲಿ ತುಂಬಿದ್ದ 400 ಟನ್ಗಳಷ್ಟು ಕಸವನ್ನು ಹೊರಗೆ ತೆಗೆಸಿ ಎಂಎಸ್ಜಿಪಿಎಲ್ ಕಸ ಸಂಸ್ಕರಣಾ ಘಟಕಕ್ಕೆ ಸಾಗಿಸಿದ್ದೇವೆ. ಕೆರೆ ಪುನರುಜ್ಜೀವನದ ಬಳಿಕ 10 ಎಕರೆ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಜಲಕಾಯದ ಸುತ್ತ ಸುಮಾರು 2 ಕಿ.ಮೀ ಉದ್ದದ ನಡಿಗೆ ಪಥ ನಿರ್ಮಿಸಲಾಗಿದೆ. ಎರಡು ಕಡೆ ಸ್ಥಳೀಯ ಪ್ರಭೇದದ ಗಿಡಗಳಿರುವ ಮಿಯಾವಾಕಿ ಕಾಡನ್ನು ಬೆಳೆಸಲಾಗಿದೆ. ಮಕ್ಕಳು ಆಡಲು ಆಟಿಕೆಗಳನ್ನು ಅಳವಡಿಸಲಾಗಿದೆ. ಬಯಲು ವ್ಯಾಯಾಮ ಶಾಲೆ ನಿರ್ಮಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಲಿಂಗರಾಜು ಅರಸ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬಾಗಿನ ಅರ್ಪಣೆ: ‘25 ವರ್ಷಗಳಲ್ಲಿ ಈ ಕೆರೆ ಕೋಡಿ ಹರಿದಿದ್ದನ್ನು ನೋಡಿಲ್ಲ. ಒಂದು ವಾರದಿಂದ ಈಚೆಗೆ ಬಂದ ಮಳೆಯಿಂದಾಗಿ ಕೆರೆ ಭರ್ತಿಯಾಗಿ ಕೋಡಿ ಹರಿದಿರುವುದು ಸ್ಥಳೀಯರ ಸಡಗರಕ್ಕೆ ಕಾರಣವಾಗಿದೆ. ಇದೇ 20ರಂದು ಕೆರೆಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.</p>.<p><strong>‘ನೈಸರ್ಗಿಕ ಸೋಸುವಿಕೆ’</strong></p>.<p>‘ಈ ಕೆರೆಗೆ ಶುದ್ಧೀಕರಣಗೊಂಡ ಕೊಳಚೆ ನೀರು ಸೇರ್ಪಡೆಯಾಗುತ್ತದೆ. ನೀರು ಶುದ್ಧೀಕರಣಕ್ಕೆ ನೀರು 48 ಗಂಟೆ ಕಾಲ ನಿಂತು, ಜೌಗು ಪ್ರದೇಶದ ಮೂಲಕ ಹಾದು ಹೋಗುವ ನೈಸರ್ಗಿಕ ಸೋಸುವಿಕೆ ವಿಧಾನವನ್ನು ಅನುಸರಿಸಲಾಗುತ್ತಿದೆ’ ಎಂದುಲಿಂಗರಾಜು ಅರಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನ್ನಮಂಗಲ ಕೆರೆಯಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ವರ್ಷದೊಳಗೆ ಈ ಕೆರೆಯು ಕೋಡಿ ಹರಿದಿದೆ. ತುಂಬಿ ಹರಿಯುತ್ತಿರುವ ಈ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಸಂಭ್ರಮ ಆಚರಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.</p>.<p>ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಕನ್ನಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಈ ಕೆರೆ ಒತ್ತುವರಿಯಾಗಿತ್ತು. ಸಮರ್ಪಕ ನಿರ್ವಹಣೆ ಇಲ್ಲದೇ ಈ ಕೆರೆ ಕಸ ತುಂಬುವ ತಾಣವಾಗಿ ಮಾರ್ಪಟ್ಟಿತ್ತು. ಕೊಳಚೆ ನೀರು ಕೂಡ ಇದರ ಒಡಲು ಸೇರುತ್ತಿತ್ತು. ಸಂಪೂರ್ಣ ಹದಗೆಟ್ಟಿದ್ದ ಈ ಕೆರೆಯನ್ನು ಸ್ಥಳೀಯ ನಿವಾಸಿಗಳ ಸ್ವಯಂಸೇವಕರ ಗುಂಪು ’ಫೋರ್ಸ್ ಜಿಡಬ್ಲ್ಯು’ ಹಾಗೂ ಮಹದೇವಪುರ ಪರಿಸರ ಕಾರ್ಯಪಡೆ ನೇತೃತ್ವದಲ್ಲಿ ಪುನರುಜ್ಜೀವನಗೊಳಿಸಿತ್ತು.</p>.<p>2019ರಲ್ಲಿ ಆರಂಭಗೊಂಡ ಪುನರುಜ್ಜೀವನ ಕಾರ್ಯ 2020ರಲ್ಲಿ ಪೂರ್ಣಗೊಂಡಿತ್ತು. ಶಾಸಕರ ನಿಧಿ, ದಾನಿಗಳು ಹಾಗೂ ಸ್ವಯಂಸೇವಕರು ನೀಡಿದ ದೇಣಿಗೆಯ ಮೂಲಕ ಪುನರುಜ್ಜೀವನ ಕಾರ್ಯದ ವೆಚ್ಚವನ್ನು ಭರಿಸಲಾಗಿತ್ತು.</p>.<p>‘ಒತ್ತುವರಿಯಾಗಿದ್ದ ಈ ಕೆರೆಯಲ್ಲಿ ಮೂರು ಎಕರೆಯಲ್ಲಷ್ಟೇ ನೀರು ನಿಲ್ಲುತ್ತಿತ್ತು. ಇದರಲ್ಲಿ ತುಂಬಿದ್ದ 400 ಟನ್ಗಳಷ್ಟು ಕಸವನ್ನು ಹೊರಗೆ ತೆಗೆಸಿ ಎಂಎಸ್ಜಿಪಿಎಲ್ ಕಸ ಸಂಸ್ಕರಣಾ ಘಟಕಕ್ಕೆ ಸಾಗಿಸಿದ್ದೇವೆ. ಕೆರೆ ಪುನರುಜ್ಜೀವನದ ಬಳಿಕ 10 ಎಕರೆ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಜಲಕಾಯದ ಸುತ್ತ ಸುಮಾರು 2 ಕಿ.ಮೀ ಉದ್ದದ ನಡಿಗೆ ಪಥ ನಿರ್ಮಿಸಲಾಗಿದೆ. ಎರಡು ಕಡೆ ಸ್ಥಳೀಯ ಪ್ರಭೇದದ ಗಿಡಗಳಿರುವ ಮಿಯಾವಾಕಿ ಕಾಡನ್ನು ಬೆಳೆಸಲಾಗಿದೆ. ಮಕ್ಕಳು ಆಡಲು ಆಟಿಕೆಗಳನ್ನು ಅಳವಡಿಸಲಾಗಿದೆ. ಬಯಲು ವ್ಯಾಯಾಮ ಶಾಲೆ ನಿರ್ಮಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಲಿಂಗರಾಜು ಅರಸ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬಾಗಿನ ಅರ್ಪಣೆ: ‘25 ವರ್ಷಗಳಲ್ಲಿ ಈ ಕೆರೆ ಕೋಡಿ ಹರಿದಿದ್ದನ್ನು ನೋಡಿಲ್ಲ. ಒಂದು ವಾರದಿಂದ ಈಚೆಗೆ ಬಂದ ಮಳೆಯಿಂದಾಗಿ ಕೆರೆ ಭರ್ತಿಯಾಗಿ ಕೋಡಿ ಹರಿದಿರುವುದು ಸ್ಥಳೀಯರ ಸಡಗರಕ್ಕೆ ಕಾರಣವಾಗಿದೆ. ಇದೇ 20ರಂದು ಕೆರೆಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.</p>.<p><strong>‘ನೈಸರ್ಗಿಕ ಸೋಸುವಿಕೆ’</strong></p>.<p>‘ಈ ಕೆರೆಗೆ ಶುದ್ಧೀಕರಣಗೊಂಡ ಕೊಳಚೆ ನೀರು ಸೇರ್ಪಡೆಯಾಗುತ್ತದೆ. ನೀರು ಶುದ್ಧೀಕರಣಕ್ಕೆ ನೀರು 48 ಗಂಟೆ ಕಾಲ ನಿಂತು, ಜೌಗು ಪ್ರದೇಶದ ಮೂಲಕ ಹಾದು ಹೋಗುವ ನೈಸರ್ಗಿಕ ಸೋಸುವಿಕೆ ವಿಧಾನವನ್ನು ಅನುಸರಿಸಲಾಗುತ್ತಿದೆ’ ಎಂದುಲಿಂಗರಾಜು ಅರಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>