<p><strong>ಭಟ್ಕಳ:</strong> ಈ ಬ್ಯಾಂಕ್ನಲ್ಲಿ ಸಾಲ, ಬಡ್ಡಿಯ ಸುಳಿವಿಲ್ಲ. ಬಡವರ ಮೈಮುಚ್ಚಲು ನೀಡುವ ಬಟ್ಟೆಯೇ ಠೇವಣಿ. ಇಂಥದ್ದೊಂದು ವಿಶಿಷ್ಟ ‘ಕಪಡಾ ಬ್ಯಾಂಕ್’ ಪಟ್ಟಣದಲ್ಲಿ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.</p>.<p>ನಗರ ಪ್ರದೇಶಗಳಲ್ಲಿ ಹಲವು ಶ್ರೀಮಂತರು ತಾವು ಧರಿಸುವ ಬಟ್ಟೆಗಳು ಸ್ವಲ್ಪ ಹಳೆಯದಾದರೆ ಮೂಲೆಗೆ ಎಸೆಯುತ್ತಾರೆ. ಅವುಗಳನ್ನು ವ್ಯರ್ಥ ಮಾಡದೇ ಬಡವರಿಗೆ ದಾನ ಮಾಡುವುದು ಈ ‘ಬ್ಯಾಂಕ್’ನ ಕಾರ್ಯ. ಪಟ್ಟಣದ ನವಾಯತ್ ಕಾಲೊನಿಯಲ್ಲಿ ಅಬ್ದುಲ್ ಮುನೈನ್ ಕೊಬಾಟೆ ಅವರ ನೇತೃತ್ವದಲ್ಲಿ ಇದನ್ನು ತೆರೆಯಲಾಗಿದೆ.</p>.<p>‘ಕಪಡಾ ಬ್ಯಾಂಕ್’ನಲ್ಲಿ ವ್ಯವಸ್ಥಾಪಕರೂ ಸೇರಿದಂತೆ 30 ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಸಾವಿರಾರು ಜನರಿಗೆ ನೆರವು ನೀಡಲಾಗಿದೆ.</p>.<p>ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಮಸ್ಕತ್ ಸೇರಿದಂತೆ ವಿವಿಧ ದೇಶಗಳಲ್ಲಿ ಇರುವ ಭಟ್ಕಳದ ಶ್ರೀಮಂತರು, ತಾವು ಧರಿಸಿದ, ಬೆಲೆ ಬಾಳುವ ಬಟ್ಟೆಗಳನ್ನು ಕಸದ ರಾಶಿಗೆ ಎಸೆಯುವುದಿಲ್ಲ. ಎಲ್ಲವನ್ನೂ ‘ಕಪಡಾ ಬ್ಯಾಂಕ್’ಗೆ ನೀಡುತ್ತಾರೆ. ಇದನ್ನು ‘ಕಪಡಾ ಠೇವಣಿ’ ಎಂದುಕರೆಯುತ್ತಾರೆ.</p>.<p>‘ಸ್ವಲ್ಪ ಹರಿದು ಹೋಗಿರುವ, ಗುಂಡಿ, ಕಾಲರ್ಗಳು ಇಲ್ಲದ ಬಟ್ಟೆಗಳನ್ನು ಸರಿಪಡಿಸಲಾಗುತ್ತದೆ. ಹೊಸ ಬಟ್ಟೆಯ ರೀತಿಯಲ್ಲಿ ಸಿದ್ಧಪಡಿಸಿ, ಶುಭ್ರಗೊಳಿಸಿ ಬಡವರಿಗೆ ಉಚಿತವಾಗಿ ವಿತರಿಸಲಾಗುತ್ತದೆ’ ಎಂದು ‘ಕಪಡಾ ಬ್ಯಾಂಕ್’ ನಿರ್ದೇಶಕ ಡಾ.ಅಬ್ದುಲ್ ಹಮೀದ್ ಅತ್ತಾರ್ ನದ್ವಿ ಹೇಳಿದರು.</p>.<p>ಭಟ್ಕಳ ತಾಲ್ಲೂಕಿನ ಸುತ್ತಮುತ್ತಲು ಇರುವ ಬಡವರ ಪಟ್ಟಿ ಮಾಡುವ ಈ ಬ್ಯಾಂಕ್ ಸದಸ್ಯರು, ಅವರು ಇರುವಲ್ಲಿಗೇ ತೆರಳಿ ಬಟ್ಟೆಗಳನ್ನು ವಿತರಿಸುತ್ತಾರೆ.</p>.<p>ತ್ಯಾಜ್ಯ ನಿರ್ವಹಣೆ ಕುರಿತಾಗಿ ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿಯಪ್ರಮುಖರಾದ ಅಲ್ ಮಿತ್ರ ಪಟೇಲ್ ಈಚೆಗೆ ಭಟ್ಕಳಕ್ಕೆ ಭೇಟಿ ನೀಡಿದ್ದರು. ಆಗಈ ಬ್ಯಾಂಕ್ಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇದೇಶದೆಲ್ಲೆಡೆ ಈ ಮಾದರಿಯನ್ನು ಅನುಸರಿಸುವಂತೆ ಸೂಚಿಸುವುದಾಗಿ ಹೇಳಿದ್ದರು.</p>.<p><strong>‘ಫುಡ್ ಬ್ಯಾಂಕ್’, ‘ಬುಕ್ ಬ್ಯಾಂಕ್’</strong></p>.<p>‘ಕಪಡಾ ಬ್ಯಾಂಕ್’ನಿಂದ ಇದೀಗ ಹೊಸದಾಗಿ ‘ಫುಡ್ ಬ್ಯಾಂಕ್’ ಹಾಗೂ ‘ಬುಕ್ ಬ್ಯಾಂಕ್’ ಅನ್ನೂ ಆರಂಭಿಸಲಾಗಿದೆ. ಸಭೆ ಸಮಾರಂಭಗಳಲ್ಲಿ ಮಾಡಿದಆಹಾರ ಪದಾರ್ಥಗಳು ಹೆಚ್ಚಾಗಿದ್ದರೆ, ಅದನ್ನು ಚೆಲ್ಲದೇ ಫುಡ್ ಬ್ಯಾಂಕ್ ಗೆ ತಂದು ಕೊಡಲಾಗುತ್ತದೆ. ಅದನ್ನು ಬಡವರಿಗೆ ಹಂಚಲಾಗುತ್ತದೆ.</p>.<p>ಅದೇ ರೀತಿ ಬಳಸದೇ ಇರುವ ಪುಸ್ತಕಗಳನ್ನು ‘ಬುಕ್ ಬ್ಯಾಂಕ್’ಗೆ ತಂದುಕೊಡುತ್ತಾರೆ. ಅದನ್ನು ಮಾರಾಟ ಮಾಡಿ ಬಡಕುಟುಂಬಗಳ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗುತ್ತದೆ ಎಂದು ಯೋಜನೆಯ ಬಗ್ಗೆ ಕಪಡಾ ಬ್ಯಾಂಕ್ ವ್ಯವಸ್ಥಾಪಕ ಅಬು ತಲ್ಹಾ ಹೇಳಿದರು.</p>.<p>‘ಕಪಡಾ ಬ್ಯಾಂಕ್’ನಿಂದ ಈವರೆಗೆಎಲ್ಲ ಸಮುದಾಯಗಳ ಲಕ್ಷಾಂತರ ಬಡಜನರಿಗೆ ನೆರವು ನೀಡಲಾಗಿದೆ. ಬಟ್ಟೆ, ಆಹಾರದ ಅಗತ್ಯವಿರುವ ಬಡವರುಇಲ್ಲಿಗೆ ಬರಬಹುದು<br /><strong>–ಡಾ.ಅಬ್ದುಲ್ ಹಮೀದ್ ಅತ್ತಾರ್ ನದ್ವಿ,‘ಕಪಡಾ ಬ್ಯಾಂಕ್’ ನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ:</strong> ಈ ಬ್ಯಾಂಕ್ನಲ್ಲಿ ಸಾಲ, ಬಡ್ಡಿಯ ಸುಳಿವಿಲ್ಲ. ಬಡವರ ಮೈಮುಚ್ಚಲು ನೀಡುವ ಬಟ್ಟೆಯೇ ಠೇವಣಿ. ಇಂಥದ್ದೊಂದು ವಿಶಿಷ್ಟ ‘ಕಪಡಾ ಬ್ಯಾಂಕ್’ ಪಟ್ಟಣದಲ್ಲಿ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.</p>.<p>ನಗರ ಪ್ರದೇಶಗಳಲ್ಲಿ ಹಲವು ಶ್ರೀಮಂತರು ತಾವು ಧರಿಸುವ ಬಟ್ಟೆಗಳು ಸ್ವಲ್ಪ ಹಳೆಯದಾದರೆ ಮೂಲೆಗೆ ಎಸೆಯುತ್ತಾರೆ. ಅವುಗಳನ್ನು ವ್ಯರ್ಥ ಮಾಡದೇ ಬಡವರಿಗೆ ದಾನ ಮಾಡುವುದು ಈ ‘ಬ್ಯಾಂಕ್’ನ ಕಾರ್ಯ. ಪಟ್ಟಣದ ನವಾಯತ್ ಕಾಲೊನಿಯಲ್ಲಿ ಅಬ್ದುಲ್ ಮುನೈನ್ ಕೊಬಾಟೆ ಅವರ ನೇತೃತ್ವದಲ್ಲಿ ಇದನ್ನು ತೆರೆಯಲಾಗಿದೆ.</p>.<p>‘ಕಪಡಾ ಬ್ಯಾಂಕ್’ನಲ್ಲಿ ವ್ಯವಸ್ಥಾಪಕರೂ ಸೇರಿದಂತೆ 30 ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಸಾವಿರಾರು ಜನರಿಗೆ ನೆರವು ನೀಡಲಾಗಿದೆ.</p>.<p>ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಮಸ್ಕತ್ ಸೇರಿದಂತೆ ವಿವಿಧ ದೇಶಗಳಲ್ಲಿ ಇರುವ ಭಟ್ಕಳದ ಶ್ರೀಮಂತರು, ತಾವು ಧರಿಸಿದ, ಬೆಲೆ ಬಾಳುವ ಬಟ್ಟೆಗಳನ್ನು ಕಸದ ರಾಶಿಗೆ ಎಸೆಯುವುದಿಲ್ಲ. ಎಲ್ಲವನ್ನೂ ‘ಕಪಡಾ ಬ್ಯಾಂಕ್’ಗೆ ನೀಡುತ್ತಾರೆ. ಇದನ್ನು ‘ಕಪಡಾ ಠೇವಣಿ’ ಎಂದುಕರೆಯುತ್ತಾರೆ.</p>.<p>‘ಸ್ವಲ್ಪ ಹರಿದು ಹೋಗಿರುವ, ಗುಂಡಿ, ಕಾಲರ್ಗಳು ಇಲ್ಲದ ಬಟ್ಟೆಗಳನ್ನು ಸರಿಪಡಿಸಲಾಗುತ್ತದೆ. ಹೊಸ ಬಟ್ಟೆಯ ರೀತಿಯಲ್ಲಿ ಸಿದ್ಧಪಡಿಸಿ, ಶುಭ್ರಗೊಳಿಸಿ ಬಡವರಿಗೆ ಉಚಿತವಾಗಿ ವಿತರಿಸಲಾಗುತ್ತದೆ’ ಎಂದು ‘ಕಪಡಾ ಬ್ಯಾಂಕ್’ ನಿರ್ದೇಶಕ ಡಾ.ಅಬ್ದುಲ್ ಹಮೀದ್ ಅತ್ತಾರ್ ನದ್ವಿ ಹೇಳಿದರು.</p>.<p>ಭಟ್ಕಳ ತಾಲ್ಲೂಕಿನ ಸುತ್ತಮುತ್ತಲು ಇರುವ ಬಡವರ ಪಟ್ಟಿ ಮಾಡುವ ಈ ಬ್ಯಾಂಕ್ ಸದಸ್ಯರು, ಅವರು ಇರುವಲ್ಲಿಗೇ ತೆರಳಿ ಬಟ್ಟೆಗಳನ್ನು ವಿತರಿಸುತ್ತಾರೆ.</p>.<p>ತ್ಯಾಜ್ಯ ನಿರ್ವಹಣೆ ಕುರಿತಾಗಿ ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿಯಪ್ರಮುಖರಾದ ಅಲ್ ಮಿತ್ರ ಪಟೇಲ್ ಈಚೆಗೆ ಭಟ್ಕಳಕ್ಕೆ ಭೇಟಿ ನೀಡಿದ್ದರು. ಆಗಈ ಬ್ಯಾಂಕ್ಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇದೇಶದೆಲ್ಲೆಡೆ ಈ ಮಾದರಿಯನ್ನು ಅನುಸರಿಸುವಂತೆ ಸೂಚಿಸುವುದಾಗಿ ಹೇಳಿದ್ದರು.</p>.<p><strong>‘ಫುಡ್ ಬ್ಯಾಂಕ್’, ‘ಬುಕ್ ಬ್ಯಾಂಕ್’</strong></p>.<p>‘ಕಪಡಾ ಬ್ಯಾಂಕ್’ನಿಂದ ಇದೀಗ ಹೊಸದಾಗಿ ‘ಫುಡ್ ಬ್ಯಾಂಕ್’ ಹಾಗೂ ‘ಬುಕ್ ಬ್ಯಾಂಕ್’ ಅನ್ನೂ ಆರಂಭಿಸಲಾಗಿದೆ. ಸಭೆ ಸಮಾರಂಭಗಳಲ್ಲಿ ಮಾಡಿದಆಹಾರ ಪದಾರ್ಥಗಳು ಹೆಚ್ಚಾಗಿದ್ದರೆ, ಅದನ್ನು ಚೆಲ್ಲದೇ ಫುಡ್ ಬ್ಯಾಂಕ್ ಗೆ ತಂದು ಕೊಡಲಾಗುತ್ತದೆ. ಅದನ್ನು ಬಡವರಿಗೆ ಹಂಚಲಾಗುತ್ತದೆ.</p>.<p>ಅದೇ ರೀತಿ ಬಳಸದೇ ಇರುವ ಪುಸ್ತಕಗಳನ್ನು ‘ಬುಕ್ ಬ್ಯಾಂಕ್’ಗೆ ತಂದುಕೊಡುತ್ತಾರೆ. ಅದನ್ನು ಮಾರಾಟ ಮಾಡಿ ಬಡಕುಟುಂಬಗಳ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗುತ್ತದೆ ಎಂದು ಯೋಜನೆಯ ಬಗ್ಗೆ ಕಪಡಾ ಬ್ಯಾಂಕ್ ವ್ಯವಸ್ಥಾಪಕ ಅಬು ತಲ್ಹಾ ಹೇಳಿದರು.</p>.<p>‘ಕಪಡಾ ಬ್ಯಾಂಕ್’ನಿಂದ ಈವರೆಗೆಎಲ್ಲ ಸಮುದಾಯಗಳ ಲಕ್ಷಾಂತರ ಬಡಜನರಿಗೆ ನೆರವು ನೀಡಲಾಗಿದೆ. ಬಟ್ಟೆ, ಆಹಾರದ ಅಗತ್ಯವಿರುವ ಬಡವರುಇಲ್ಲಿಗೆ ಬರಬಹುದು<br /><strong>–ಡಾ.ಅಬ್ದುಲ್ ಹಮೀದ್ ಅತ್ತಾರ್ ನದ್ವಿ,‘ಕಪಡಾ ಬ್ಯಾಂಕ್’ ನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>