ಆರ್.ಪಿ.ರವಿಶಂಕರ್, ‘ಚುನಾವಣಾಧಿಕಾರಿಗೆ ಪ್ರತ್ಯೇಕ ಕೊಠಡಿ ಇದೆ. ಅದರ ಪಕ್ಕದಲ್ಲೇ ನನ್ನ ಕಚೇರಿ ಇದೆ. ಅಲ್ಲಿ ಕುಳಿತಿದ್ದಾಗ ಕೆಲವರು ಭೇಟಿಯಾಗಲು ಬಂದಿದ್ದರು. ಅವರ್ಯಾರು ಅಭ್ಯರ್ಥಿಗಳಲ್ಲ. ಚುನಾವಣಾಧಿಕಾರಿ ಕರೆದರಷ್ಟೇ ಒಳಗೆ ಹೋಗಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಗೋವರ್ಧನ್ ಬಾಬು, ರಮೇಶ್ ಹಾಗೂ ನರಸಿಂಹ ಮೂರ್ತಿ ಅವರು ತಮ್ಮ ಸರತಿಗೂ ಮುನ್ನವೇ ಕಚೇರಿಯೊಳಗೆ ಪ್ರವೇಶಿಸಲು ಮುಂದಾದರು. ಅದಕ್ಕೆ ಅವಕಾಶ ನಿರಾಕರಿಸಿದ ಸಿಬ್ಬಂದಿಯನ್ನು ತಳ್ಳಿದರು. ಹೀಗಾಗಿ ನಾನೇ ಕೊಠಡಿಯಿಂದ ಆಚೆ ಬಂದು ಅವರನ್ನು ಹೊರಹಾಕಲು ಪ್ರಯತ್ನಿಸಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.