ಬಜೆಟ್ನಲ್ಲಿ ಬೆಂಗಳೂರು ನಗರದ ಅಭಿವೃದ್ಧಿಯ ಪರಿಕಲ್ಪನೆಯೇ ಬೇರೆ ರೀತಿ ಇದೆ. ಬೆಂಗಳೂರಿನ ನಾಗರಿಕರು ಯಾವ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ, ಅದರಿಂದ ಅವರನ್ನು ಪಾರು ಮಾಡುವುದು ಹೇಗೆ ಎಂಬ ಪರಿಕಲ್ಪನೆಯೇ ಸರ್ಕಾರಕ್ಕೆ ಇದ್ದಂತೆ ಇಲ್ಲ. ಉದ್ಯಾನ, ನಮ್ಮ ಕ್ಲಿನಿಕ್, ಮೆಟ್ರೊ ರೈಲಿಗೆ ಹಣ ನೀಡಲಾಗಿದೆ. ಇವೆಲ್ಲವೂ ಕಟ್ಟಡಗಳನ್ನು ಕಟ್ಟುವ ಕೆಲಸಗಳೇ ಹೊರತು ಜನರಿಗೆ ಬೇಕಿರುವ ನಿಜವಾದ ಅಭಿವೃದ್ಧಿ ಅಲ್ಲ. ಕೋವಿಡ್ ನಂತರ ಕಾರ್ಮಿಕರ ಸಂಬಳ ಕಡಿಮೆಯಾಗಿದೆ. ಅಡುಗೆ ಅನಿಲ, ತರಕಾರಿ, ಬೇಳೆ ಸೇರಿ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಪಡಿತರ ಚೀಟಿ ಹೊಂದಿದವರಿಗೆ ಕೊಡುತ್ತಿರುವ ಅಕ್ಕಿ ಪ್ರಮಾಣ ಕಡಿಮೆ ಮಾಡಲಾಗಿದೆ.