‘ದೇಶದಲ್ಲಿ ಸಂವಿಧಾನವೇ ಶ್ರೇಷ್ಠ ಗ್ರಂಥ. ಅದರಲ್ಲಿ ದೇಶದ ಬಹುತ್ವವನ್ನು ಗಟ್ಟಿಗೊಳಿಸಲು ಆದ್ಯತೆ ನೀಡಲಾಗಿದೆ. ದೇಶದಲ್ಲಿ ಅಶಾಂತಿ, ಗೊಂದಲ ಸೃಷ್ಟಿಯಾದಾಗ ಸಹಬಾಳ್ವೆಯ ಸಂದೇಶವನ್ನು ಸೂಫಿ ಸಂತರು ಸಾರಿದರು. ಒಂದು ಧರ್ಮ ಇನ್ನೊಂದು ಧರ್ಮವನ್ನು ಪ್ರೀತಿಸಬೇಕು ಎಂದು ಸಂತರು ಹೇಳಿದರು. ಬುದ್ಧ, ಬಸವರಿಂದ ಹಿಡಿದು ಅನೇಕರು ಬಹುತ್ವದ ಉಳಿವಿಗೆ ಕೊಡುಗೆ ಕೊಟ್ಟಿದ್ದಾರೆ’ ಎಂದು
ಅವರು ನುಡಿದರು.