ಕಸಾಪ: ಜೂನ್ನಲ್ಲಿ ಕಲಾವಿದರ ಆಯ್ಕೆ
ಬೆಂಗಳೂರು: ‘ಶಿಶುನಾಳ ಶರೀಫರ ತತ್ತ್ವ ಪದಗಳ ಆಧರಿತ ತತ್ತ್ವರಸಾಯನ ಕಾರ್ಯಕ್ರಮ ಜು.3 ರಂದು ನಡೆಯಲಿದೆ. ಜೂ.18 ಮತ್ತು 19 ರಂದು ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
‘ಈ ಕಾರ್ಯಕ್ರಮವನ್ನು ಆಯೋಜಿಸಲು ಪರಿಷತ್ತಿನೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ, ಶಾರದ ವಿದ್ಯಾಪೀಠ ಕೈಜೋಡಿಸಿವೆ. ಜೂ.18 ರಂದು ತತ್ತ್ವಪದಗಳ ಗಾಯಕರಿಗೆ, ಜೂ.19 ರಂದು ನೃತ್ಯ ತಂಡದವರಿಗೆ ಬೆಳಿಗ್ಗೆ 9 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ಆಯ್ಕೆ ಪ್ರಕ್ರಿಯೆ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದೆ. ಆಸಕ್ತ ಸಂಗೀತ ಕಲಾವಿದರು, ನೃತ್ಯ ತಂಡದವರು ಅರ್ಜಿಯೊಂದಿಗೆ ಹಾಜರಿರಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.