ಬೆಂಗಳೂರು: ‘ಯಾವುದೇ ಉದ್ಯಮದ ಜೊತೆಗೆ ಸರ್ಕಾರ, ಬ್ಯಾಂಕ್ ಕೂಡ ಪಾಲುದಾರರಂತಿರುತ್ತವೆ. ಆದರೆ, ಈ ಅಂಶಗಳೇ ಉದ್ಯಮಗಳನ್ನು ನಿರ್ದೇಶಿಸುವ ಬದಲು, ಉದ್ಯಮಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಳ್ಳಬೇಕು, ಪ್ರಗತಿಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಸಲಹೆ ನೀಡಿದರು.