<p><strong>ಬೆಂಗಳೂರು</strong>: ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆರಂಭವಾದ ಉಡುಪಿಯ ಚಿತ್ರ ಕಲಾವಿದ ಜನಾರ್ದನ ರಾವ್ ಹಾವಂಜೆ ಅವರ ‘ಕಾವಿ ಚಿತ್ರ ಕಲಾ ಪ್ರದರ್ಶನ’ಕ್ಕೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್ ಚಾಲನೆ ನೀಡಿದರು.</p>.<p>ಕಾವಿ ಆರ್ಟ್ ಫೌಂಡೇಷನ್, ಹಾಗೂ ಭಾಸಾ ಗ್ಯಾಲರಿ ಮತ್ತು ಸ್ಟುಡಿಯೊ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. 'ಕಾವಿ ಕೆಲಡೋಸ್ಕೋಪ್' ಶೀರ್ಷಿಕೆಯಡಿ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯುತ್ತಿದೆ. ನವೆಂಬರ್ 17ರವರೆಗೂ ಚಿತ್ರ ಪ್ರದರ್ಶನ ನಡೆಯುತ್ತದೆ.</p>.<p>ಪ್ರದರ್ಶನದಲ್ಲಿ ಸಾಂಪ್ರದಾಯಿಕ, ಜನಪದೀಯ ಶೈಲಿಯ ಜೊತೆಗೆ ಸಮಕಾಲೀನ ವಿಷಯಗಳ ಕುರಿತ ನೂರಕ್ಕೂ ಹೆಚ್ಚು ಚಿತ್ರಗಳಿವೆ. ಇದು ಕಾವಿ ಕಲೆಯನ್ನು ಸಮಕಾಲೀನ ಮಾಧ್ಯಮಗಳಲ್ಲಿ ಬಳಸುವ, ಅದರ ಸಾಧ್ಯತೆಗಳನ್ನು ಎತ್ತಿ ಹಿಡಿಯುವ ಪ್ರಯೋಗಾತ್ಮಕ ಪ್ರದರ್ಶನವಾಗಿದೆ.</p>.<p>ಕಾವಿ ಕಲೆ ಕರ್ನಾಟಕದ ಕರಾವಳಿ ಭಾಗದ ವಿಶಿಷ್ಟ ಚಿತ್ರ ಕಲಾ ಪ್ರಕಾರ. 13–14ನೇ ಶತಮಾನದ ಪಾರಂಪರಿಕ ಕಲೆಯಾಗಿರುವ ‘ಕಾವಿ ಚಿತ್ರಕಲೆ’ 1950ರ ನಂತರ ಅಳಿವಿನಂಚು ತಲುಪಿದೆ. ಈ ಕಲೆ ಉಳಿವಿಗಾಗಿ 22 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ ಉಡುಪಿಯ ಚಿತ್ರ ಕಲಾವಿದ ಜನಾರ್ದನ ರಾವ್ ಹಾವಂಜೆ. ಅವರು ಸದ್ಯ 800ಕ್ಕೂ ಹೆಚ್ಚು ಕಾವಿ ಚಿತ್ರಗಳಿರುವ ನೆಲೆಗಳನ್ನು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಆರಂಭವಾದ ಉಡುಪಿಯ ಚಿತ್ರ ಕಲಾವಿದ ಜನಾರ್ದನ ರಾವ್ ಹಾವಂಜೆ ಅವರ ‘ಕಾವಿ ಚಿತ್ರ ಕಲಾ ಪ್ರದರ್ಶನ’ಕ್ಕೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್ ಚಾಲನೆ ನೀಡಿದರು.</p>.<p>ಕಾವಿ ಆರ್ಟ್ ಫೌಂಡೇಷನ್, ಹಾಗೂ ಭಾಸಾ ಗ್ಯಾಲರಿ ಮತ್ತು ಸ್ಟುಡಿಯೊ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. 'ಕಾವಿ ಕೆಲಡೋಸ್ಕೋಪ್' ಶೀರ್ಷಿಕೆಯಡಿ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯುತ್ತಿದೆ. ನವೆಂಬರ್ 17ರವರೆಗೂ ಚಿತ್ರ ಪ್ರದರ್ಶನ ನಡೆಯುತ್ತದೆ.</p>.<p>ಪ್ರದರ್ಶನದಲ್ಲಿ ಸಾಂಪ್ರದಾಯಿಕ, ಜನಪದೀಯ ಶೈಲಿಯ ಜೊತೆಗೆ ಸಮಕಾಲೀನ ವಿಷಯಗಳ ಕುರಿತ ನೂರಕ್ಕೂ ಹೆಚ್ಚು ಚಿತ್ರಗಳಿವೆ. ಇದು ಕಾವಿ ಕಲೆಯನ್ನು ಸಮಕಾಲೀನ ಮಾಧ್ಯಮಗಳಲ್ಲಿ ಬಳಸುವ, ಅದರ ಸಾಧ್ಯತೆಗಳನ್ನು ಎತ್ತಿ ಹಿಡಿಯುವ ಪ್ರಯೋಗಾತ್ಮಕ ಪ್ರದರ್ಶನವಾಗಿದೆ.</p>.<p>ಕಾವಿ ಕಲೆ ಕರ್ನಾಟಕದ ಕರಾವಳಿ ಭಾಗದ ವಿಶಿಷ್ಟ ಚಿತ್ರ ಕಲಾ ಪ್ರಕಾರ. 13–14ನೇ ಶತಮಾನದ ಪಾರಂಪರಿಕ ಕಲೆಯಾಗಿರುವ ‘ಕಾವಿ ಚಿತ್ರಕಲೆ’ 1950ರ ನಂತರ ಅಳಿವಿನಂಚು ತಲುಪಿದೆ. ಈ ಕಲೆ ಉಳಿವಿಗಾಗಿ 22 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ ಉಡುಪಿಯ ಚಿತ್ರ ಕಲಾವಿದ ಜನಾರ್ದನ ರಾವ್ ಹಾವಂಜೆ. ಅವರು ಸದ್ಯ 800ಕ್ಕೂ ಹೆಚ್ಚು ಕಾವಿ ಚಿತ್ರಗಳಿರುವ ನೆಲೆಗಳನ್ನು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>