<p><strong>ಬೆಂಗಳೂರು</strong>: ವಾಹನ ನಿಲುಗಡೆ ಪ್ರದೇಶದಿಂದ ವಿಮಾನ ಏರುವವರೆಗೆ ಸಂಪರ್ಕ ರಹಿತ ಪ್ರಕ್ರಿಯೆ ಅನುಸರಿಸುತ್ತಿದ್ದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಬಿಐಎಎಲ್) ಈಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸುಧಾರಿತ ನೈರ್ಮಲ್ಯ ಕ್ರಮಗಳನ್ನು ಕೈಗೊಂಡಿದೆ.</p>.<p>ಹೊರಗಡೆಗೆ ರವಾನೆಯಾಗುವ ಬ್ಯಾಗೇಜ್ಗಳಿಗೆ ಅಲ್ಟ್ರಾ ಲೋ ವ್ಯಾಲ್ಯೂಮ್ (ಯುಎಲ್ವಿ) ಮತ್ತು ಟ್ರಾಲಿಗಳಿಗೆ ಯುವಿ ಸೋಂಕು ನಿವಾರಣಾ ಕ್ರಮಗಳನ್ನು ಬಿಐಎಎಲ್ ಪರಿಚಯಿಸಿದೆ. ಈ ಯುಎಲ್ವಿ ಯಂತ್ರಗಳನ್ನು ಬಳಸಿ, ಪ್ರತಿ ಮೂರು ಗಂಟೆಗೊಮ್ಮೆ ಪ್ರದೇಶವನ್ನು ಸೋಂಕು ಮುಕ್ತಗೊಳಿಸಲಾಗುತ್ತದೆ.</p>.<p>ವಿಶೇಷವಾಗಿ ವಿನ್ಯಾಸಗೊಳಿಸಿರುವ ಟ್ರೇಗಳನ್ನು ಬಳಕೆಗೆ ತರಲಾಗಿದೆ. ಪ್ರತಿ ಬಳಕೆಯ ನಂತರ ಈ ಟ್ರೇಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತದೆಯಲ್ಲದೆ, ಯುವಿ ತಂತ್ರಜ್ಞಾನದ ಅಡಿ ಸ್ವಚ್ಛಗೊಳಿಸಲಾಗುತ್ತದೆ. ಇದಲ್ಲದೆ, ಟ್ರಾಲಿಗಳನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ದ್ರಾವಣದ ಸುರಂಗ (ಟನೆಲ್) ನಿರ್ಮಿಸಲಾಗಿದೆ.</p>.<p>ಅಲ್ಲದೆ, ಪಿಪಿಇ ಕಿಟ್ಗಳಿಂದ ಜೈವಿಕ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಿಲ್ದಾಣದ 120 ಕಡೆ ಈ ಜೈವಿಕ ತ್ಯಾಜ್ಯ ವಿಲೇವಾರಿ ಡಬ್ಬಿಗಳನ್ನು ಇರಿಸಲಾಗಿದೆ.</p>.<p>ಎಲ್ಲ ಕೌಂಟರ್ಗಳು ಮತ್ತು ಪದೇ ಪದೇ ಸ್ಪರ್ಶಿಸುವ ಸ್ಥಳ ಹಾಗೂ ವಸ್ತುಗಳಿಗೆ ‘ಸಿಲ್ವರ್ ನ್ಯಾನೊ ಕೋಟಿಂಗ್’ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ, ಮೇಲ್ಮೈ ಪ್ರದೇಶವನ್ನು ಸೋಂಕು ರಹಿತವಾಗಿಸಲು ಈ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದಪದೇ ಪದೇ ರಾಸಾಯನಿಕಗಳನ್ನು ಸಿಂಪಡಿಸುವ ಅಗತ್ಯವಿರುವುದಿಲ್ಲ ಎಂದು ಬಿಐಎಎಲ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಾಹನ ನಿಲುಗಡೆ ಪ್ರದೇಶದಿಂದ ವಿಮಾನ ಏರುವವರೆಗೆ ಸಂಪರ್ಕ ರಹಿತ ಪ್ರಕ್ರಿಯೆ ಅನುಸರಿಸುತ್ತಿದ್ದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಬಿಐಎಎಲ್) ಈಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸುಧಾರಿತ ನೈರ್ಮಲ್ಯ ಕ್ರಮಗಳನ್ನು ಕೈಗೊಂಡಿದೆ.</p>.<p>ಹೊರಗಡೆಗೆ ರವಾನೆಯಾಗುವ ಬ್ಯಾಗೇಜ್ಗಳಿಗೆ ಅಲ್ಟ್ರಾ ಲೋ ವ್ಯಾಲ್ಯೂಮ್ (ಯುಎಲ್ವಿ) ಮತ್ತು ಟ್ರಾಲಿಗಳಿಗೆ ಯುವಿ ಸೋಂಕು ನಿವಾರಣಾ ಕ್ರಮಗಳನ್ನು ಬಿಐಎಎಲ್ ಪರಿಚಯಿಸಿದೆ. ಈ ಯುಎಲ್ವಿ ಯಂತ್ರಗಳನ್ನು ಬಳಸಿ, ಪ್ರತಿ ಮೂರು ಗಂಟೆಗೊಮ್ಮೆ ಪ್ರದೇಶವನ್ನು ಸೋಂಕು ಮುಕ್ತಗೊಳಿಸಲಾಗುತ್ತದೆ.</p>.<p>ವಿಶೇಷವಾಗಿ ವಿನ್ಯಾಸಗೊಳಿಸಿರುವ ಟ್ರೇಗಳನ್ನು ಬಳಕೆಗೆ ತರಲಾಗಿದೆ. ಪ್ರತಿ ಬಳಕೆಯ ನಂತರ ಈ ಟ್ರೇಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತದೆಯಲ್ಲದೆ, ಯುವಿ ತಂತ್ರಜ್ಞಾನದ ಅಡಿ ಸ್ವಚ್ಛಗೊಳಿಸಲಾಗುತ್ತದೆ. ಇದಲ್ಲದೆ, ಟ್ರಾಲಿಗಳನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ದ್ರಾವಣದ ಸುರಂಗ (ಟನೆಲ್) ನಿರ್ಮಿಸಲಾಗಿದೆ.</p>.<p>ಅಲ್ಲದೆ, ಪಿಪಿಇ ಕಿಟ್ಗಳಿಂದ ಜೈವಿಕ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಿಲ್ದಾಣದ 120 ಕಡೆ ಈ ಜೈವಿಕ ತ್ಯಾಜ್ಯ ವಿಲೇವಾರಿ ಡಬ್ಬಿಗಳನ್ನು ಇರಿಸಲಾಗಿದೆ.</p>.<p>ಎಲ್ಲ ಕೌಂಟರ್ಗಳು ಮತ್ತು ಪದೇ ಪದೇ ಸ್ಪರ್ಶಿಸುವ ಸ್ಥಳ ಹಾಗೂ ವಸ್ತುಗಳಿಗೆ ‘ಸಿಲ್ವರ್ ನ್ಯಾನೊ ಕೋಟಿಂಗ್’ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ, ಮೇಲ್ಮೈ ಪ್ರದೇಶವನ್ನು ಸೋಂಕು ರಹಿತವಾಗಿಸಲು ಈ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದಪದೇ ಪದೇ ರಾಸಾಯನಿಕಗಳನ್ನು ಸಿಂಪಡಿಸುವ ಅಗತ್ಯವಿರುವುದಿಲ್ಲ ಎಂದು ಬಿಐಎಎಲ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>