<p><strong>ಬೆಂಗಳೂರು: </strong>ಎರಡೂ ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿದ್ದ ಏಳೂವರೆ ತಿಂಗಳು ಹೆಣ್ಣು ಮಗುವಿಗೆ ರಾಜಾಜಿನಗರದ ಎನ್.ಯು ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.</p>.<p>ಮೂರು ವಾರಗಳ ಹಿಂದೆ ಮಗು ಜ್ವರದಿಂದ ಬಳಲುತ್ತಿದ್ದರಿಂದ ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಗುವಿನ ದೇಹದ ಎಡ ಭಾಗದಲ್ಲಿ ಮೂತ್ರಪಿಂಡದಿಂದ ಮೂತ್ರ ಕೋಶಕ್ಕೆ ಸಂಪರ್ಕ ಕಲ್ಪಿಸುವ ನಳಿಕೆಯಲ್ಲಿ 9 ಮಿಲಿ ಮೀಟರ್ ಹಾಗೂ ಒಂದು ಸೆಂ.ಮೀ ಗಾತ್ರದ ಕಲ್ಲು ಇರುವುದನ್ನು ಪತ್ತೆ ಮಾಡಿದರು. ಯುರೆಟೆರೋಸ್ಕೋಪಿ ತಂತ್ರಜ್ಞಾನದ ನೆರವಿನಿಂದ ಕಲ್ಲು ತೆಗೆಯಲಾಗಿದೆ. ಎರಡು ವಾರಗಳ ನಂತರ ಮಗು ಚೇತರಿಸಿಕೊಂಡಿದೆ.</p>.<p>‘ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡದಲ್ಲಿನ ಕಲ್ಲು ಸಮಸ್ಯೆ ನಿವಾರಿಸಲು ಎಂಡೋಸ್ಕೋಪಿ ಜತೆಗೆ ಹೊಲ್ಮಿಯಮ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ. ಮಗುವಿನ ಎರಡೂ ಮೂತ್ರಪಿಂಡಗಳಲ್ಲಿ ಕಲ್ಲು ಬೆಳೆದಿದ್ದ ಪರಿಣಾಮ ಅದನ್ನು ಹೊರತೆಗೆಯುವುದು ಸವಾಲಾಗಿತ್ತು’ ಎಂದು ಆಸ್ಪತ್ರೆಯ ಡಾ. ಪ್ರಸನ್ನ ವೆಂಕಟೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎರಡೂ ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿದ್ದ ಏಳೂವರೆ ತಿಂಗಳು ಹೆಣ್ಣು ಮಗುವಿಗೆ ರಾಜಾಜಿನಗರದ ಎನ್.ಯು ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.</p>.<p>ಮೂರು ವಾರಗಳ ಹಿಂದೆ ಮಗು ಜ್ವರದಿಂದ ಬಳಲುತ್ತಿದ್ದರಿಂದ ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಗುವಿನ ದೇಹದ ಎಡ ಭಾಗದಲ್ಲಿ ಮೂತ್ರಪಿಂಡದಿಂದ ಮೂತ್ರ ಕೋಶಕ್ಕೆ ಸಂಪರ್ಕ ಕಲ್ಪಿಸುವ ನಳಿಕೆಯಲ್ಲಿ 9 ಮಿಲಿ ಮೀಟರ್ ಹಾಗೂ ಒಂದು ಸೆಂ.ಮೀ ಗಾತ್ರದ ಕಲ್ಲು ಇರುವುದನ್ನು ಪತ್ತೆ ಮಾಡಿದರು. ಯುರೆಟೆರೋಸ್ಕೋಪಿ ತಂತ್ರಜ್ಞಾನದ ನೆರವಿನಿಂದ ಕಲ್ಲು ತೆಗೆಯಲಾಗಿದೆ. ಎರಡು ವಾರಗಳ ನಂತರ ಮಗು ಚೇತರಿಸಿಕೊಂಡಿದೆ.</p>.<p>‘ಮಕ್ಕಳಲ್ಲಿ ಕಂಡುಬರುವ ಮೂತ್ರಪಿಂಡದಲ್ಲಿನ ಕಲ್ಲು ಸಮಸ್ಯೆ ನಿವಾರಿಸಲು ಎಂಡೋಸ್ಕೋಪಿ ಜತೆಗೆ ಹೊಲ್ಮಿಯಮ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ. ಮಗುವಿನ ಎರಡೂ ಮೂತ್ರಪಿಂಡಗಳಲ್ಲಿ ಕಲ್ಲು ಬೆಳೆದಿದ್ದ ಪರಿಣಾಮ ಅದನ್ನು ಹೊರತೆಗೆಯುವುದು ಸವಾಲಾಗಿತ್ತು’ ಎಂದು ಆಸ್ಪತ್ರೆಯ ಡಾ. ಪ್ರಸನ್ನ ವೆಂಕಟೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>