<p><strong>ಬೆಂಗಳೂರು: </strong>‘ಶಾಲೆಗಳಿಗೆ ಬರಲು ಮಕ್ಕಳು ಉತ್ಸುಕರಾಗಿದ್ದಾರೆ. ಕೋವಿಡ್ ಕಡಿಮೆಯಾಗಿಲ್ಲ, ಅದರ ಜೊತೆ ಬದುಕುವುದು ಈಗ ಅನಿವಾರ್ಯ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಸಾಕ್ಷರತೆ ಉತ್ತೇಜಿಸಲು ಸಮರ್ಥನಂ ಅಂಗವಿಕಲರ ಸಂಸ್ಥೆಯು ಆರಂಭಿಸಿರುವ ‘ಸ್ಮಾರ್ಟ್ ಕ್ಲಾಸ್ ರೂಂ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.</p>.<p>‘ಶಿಕ್ಷಣವು ಮೌಲ್ಯಾಧಾರಿತವಾಗಿರಬೇಕು. ಪಾವಿತ್ರ್ಯತೆಯಿಂದಲೂ ಕೂಡಿರಬೇಕು. ಮನುಷ್ಯರಲ್ಲಿರುವ ಅಜ್ಞಾನವನ್ನು ತೊಡೆದು ಹಾಕುವುದು ಶಿಕ್ಷಣದ ಬಹುಮುಖ್ಯ ಗುರಿಯಾಗಬೇಕು’ ಎಂದರು.</p>.<p>ಸಮರ್ಥನಂ ಸಂಸ್ಥಾಪಕ ಮಹಾಂತೇಶ್ ಜಿ., ‘ಡಿಜಿಟಲೀಕರಣವು ಶಿಕ್ಷಣ ಕ್ಷೇತ್ರವನ್ನು ಪರಿಷ್ಕರಣೆಗೆ ಒಳಪಡಿಸಿದೆ. ವರ್ಚುವಲ್ ತರಗತಿಗಳು, ಇ–ಪಠ್ಯಪುಸ್ತಕಗಳಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗುತ್ತಿದೆ. ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದಸ್ಮಾರ್ಟ್ ಕ್ಲಾಸ್ ರೂಂ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.</p>.<p>‘ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯ. ತಂತ್ರಜ್ಞಾನ ಕ್ಷೇತ್ರಕ್ಕೆ ಅವರನ್ನು ಪರಿಚಯಿಸಲೂ ಈ ಕಾರ್ಯಕ್ರಮ ನೆರವಾಗಲಿದೆ. ಸರ್ಕಾರಿ ಶಾಲೆಯ ಶಿಕ್ಷಕರನ್ನೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಣಿಗೊಳಿಸಬೇಕೆಂಬ ಉದ್ದೇಶದಿಂದ ಡಿ.ಎಕ್ಸ್.ಸಿ ತಂತ್ರಜ್ಞಾನ ಸಂಸ್ಥೆ ನಮ್ಮ ಕಾರ್ಯಕ್ಕೆ ಕೈಜೋಡಿಸಿದೆ’ ಎಂದು ತಿಳಿಸಿದರು. </p>.<p>ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ, ಡಿ.ಎಕ್ಸ್.ಸಿ. ತಂತ್ರಜ್ಞಾನ ಸಂಸ್ಥೆಯ ಸೇವಾ ನಿರ್ವಹಣೆ ವಿಭಾಗದ ನಿರ್ದೇಶಕ ಓಂಕಾರ್ ಜಿ.ರಾವ್, ಎಸ್.ರಾಜೇಂದ್ರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಶಾಲೆಗಳಿಗೆ ಬರಲು ಮಕ್ಕಳು ಉತ್ಸುಕರಾಗಿದ್ದಾರೆ. ಕೋವಿಡ್ ಕಡಿಮೆಯಾಗಿಲ್ಲ, ಅದರ ಜೊತೆ ಬದುಕುವುದು ಈಗ ಅನಿವಾರ್ಯ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಸಾಕ್ಷರತೆ ಉತ್ತೇಜಿಸಲು ಸಮರ್ಥನಂ ಅಂಗವಿಕಲರ ಸಂಸ್ಥೆಯು ಆರಂಭಿಸಿರುವ ‘ಸ್ಮಾರ್ಟ್ ಕ್ಲಾಸ್ ರೂಂ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.</p>.<p>‘ಶಿಕ್ಷಣವು ಮೌಲ್ಯಾಧಾರಿತವಾಗಿರಬೇಕು. ಪಾವಿತ್ರ್ಯತೆಯಿಂದಲೂ ಕೂಡಿರಬೇಕು. ಮನುಷ್ಯರಲ್ಲಿರುವ ಅಜ್ಞಾನವನ್ನು ತೊಡೆದು ಹಾಕುವುದು ಶಿಕ್ಷಣದ ಬಹುಮುಖ್ಯ ಗುರಿಯಾಗಬೇಕು’ ಎಂದರು.</p>.<p>ಸಮರ್ಥನಂ ಸಂಸ್ಥಾಪಕ ಮಹಾಂತೇಶ್ ಜಿ., ‘ಡಿಜಿಟಲೀಕರಣವು ಶಿಕ್ಷಣ ಕ್ಷೇತ್ರವನ್ನು ಪರಿಷ್ಕರಣೆಗೆ ಒಳಪಡಿಸಿದೆ. ವರ್ಚುವಲ್ ತರಗತಿಗಳು, ಇ–ಪಠ್ಯಪುಸ್ತಕಗಳಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗುತ್ತಿದೆ. ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದಸ್ಮಾರ್ಟ್ ಕ್ಲಾಸ್ ರೂಂ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.</p>.<p>‘ಸರ್ಕಾರಿ ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯ. ತಂತ್ರಜ್ಞಾನ ಕ್ಷೇತ್ರಕ್ಕೆ ಅವರನ್ನು ಪರಿಚಯಿಸಲೂ ಈ ಕಾರ್ಯಕ್ರಮ ನೆರವಾಗಲಿದೆ. ಸರ್ಕಾರಿ ಶಾಲೆಯ ಶಿಕ್ಷಕರನ್ನೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಣಿಗೊಳಿಸಬೇಕೆಂಬ ಉದ್ದೇಶದಿಂದ ಡಿ.ಎಕ್ಸ್.ಸಿ ತಂತ್ರಜ್ಞಾನ ಸಂಸ್ಥೆ ನಮ್ಮ ಕಾರ್ಯಕ್ಕೆ ಕೈಜೋಡಿಸಿದೆ’ ಎಂದು ತಿಳಿಸಿದರು. </p>.<p>ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ, ಡಿ.ಎಕ್ಸ್.ಸಿ. ತಂತ್ರಜ್ಞಾನ ಸಂಸ್ಥೆಯ ಸೇವಾ ನಿರ್ವಹಣೆ ವಿಭಾಗದ ನಿರ್ದೇಶಕ ಓಂಕಾರ್ ಜಿ.ರಾವ್, ಎಸ್.ರಾಜೇಂದ್ರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>