<p><strong>ಬೆಂಗಳೂರು</strong>: ಓಲಾ ಕಂಪನಿಯ ಕೃತಕ ಬುದ್ಧಿಮತ್ತೆ ಅಂಗಸಂಸ್ಥೆಯಾದ ಕೃತ್ರಿಮ್ನ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ನಿಖಿಲ್ ಸೋಮವಂಶಿ ಮೃತ ಉದ್ಯೋಗಿ. ಕೆಲಸದ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ಸಹೋದ್ಯೋಗಿ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಮೇ 8ರಂದು ಘಟನೆ ನಡೆದಿದೆ.</p>.<p>ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಪದವಿ ಪಡೆದಿದ್ದ ನಿಖಿಲ್, ವರ್ಷದ ಹಿಂದೆಯಷ್ಟೇ ಕೃತ್ರಿಮ್ ಕಂಪನಿ ಸೇರಿದ್ದರು. ಪ್ರತಿಭಾವಂತ ನಿಖಿಲ್ಗೆ ಪ್ರಾಜೆಕ್ಟ್ ಕೊಟ್ಟು, ಇಬ್ಬರು ಸಹಾಯಕರನ್ನು ನೀಡಲಾಗಿತ್ತು. ಅವರಿಬ್ಬರೂ ಕೆಲಸ ಬಿಟ್ಟಿದ್ದರಿಂದ ಎಲ್ಲ ಕೆಲಸವೂ ನಿಖಿಲ್ ಮೇಲೆ ಬಿದ್ದಿತ್ತು ಎಂದು ಹೇಳಲಾಗಿದೆ.</p>.<p>ಅಮೆರಿಕದಲ್ಲಿರುವ ಕಂಪನಿಯ ವ್ಯವಸ್ಥಾಪಕ, ಮೀಟಿಂಗ್ನಲ್ಲಿ ಅವರನ್ನು ನಿಂದಿಸುತ್ತಿದ್ದರು ಎಂದು ಸಹೋದ್ಯೋಗಿ ಆರೋಪಿಸಿದ್ದಾರೆ.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಕೃತ್ರಿಮ್ ಕಂಪನಿ, ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ಅಗತ್ಯ ಇರುವ ಎಲ್ಲ ಸಹಾಯ ನೀಡುವುದಾಗಿ ಭರವಸೆ ನೀಡಿದೆ.</p>.<p>ಘಟನೆ ನಡೆದಾಗ ನಿಖಿಲ್ ವೈಯಕ್ತಿಕ ಕಾರಣಕ್ಕೆ ರಜೆ ಪಡೆದಿದ್ದರು. ಏಪ್ರಿಲ್ 8 ರಂದು ವಿಶ್ರಾಂತಿಗೆ ರಜೆ ಬೇಕೆಂದು ತನ್ನ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಏಪ್ರಿಲ್ 17ರಂದು ಮತ್ತಷ್ಟು ವಿಶ್ರಾಂತಿ ಬೇಕಿದೆ ಎಂದ ಕಾರಣ ರಜೆ ವಿಸ್ತರಿಸಲಾಗಿತ್ತು ಎಂದು ಕಂಪನಿ ತಿಳಿಸಿದೆ.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಓಲಾ ಕಂಪನಿಯ ಕೃತಕ ಬುದ್ಧಿಮತ್ತೆ ಅಂಗಸಂಸ್ಥೆಯಾದ ಕೃತ್ರಿಮ್ನ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ನಿಖಿಲ್ ಸೋಮವಂಶಿ ಮೃತ ಉದ್ಯೋಗಿ. ಕೆಲಸದ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ಸಹೋದ್ಯೋಗಿ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಮೇ 8ರಂದು ಘಟನೆ ನಡೆದಿದೆ.</p>.<p>ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಪದವಿ ಪಡೆದಿದ್ದ ನಿಖಿಲ್, ವರ್ಷದ ಹಿಂದೆಯಷ್ಟೇ ಕೃತ್ರಿಮ್ ಕಂಪನಿ ಸೇರಿದ್ದರು. ಪ್ರತಿಭಾವಂತ ನಿಖಿಲ್ಗೆ ಪ್ರಾಜೆಕ್ಟ್ ಕೊಟ್ಟು, ಇಬ್ಬರು ಸಹಾಯಕರನ್ನು ನೀಡಲಾಗಿತ್ತು. ಅವರಿಬ್ಬರೂ ಕೆಲಸ ಬಿಟ್ಟಿದ್ದರಿಂದ ಎಲ್ಲ ಕೆಲಸವೂ ನಿಖಿಲ್ ಮೇಲೆ ಬಿದ್ದಿತ್ತು ಎಂದು ಹೇಳಲಾಗಿದೆ.</p>.<p>ಅಮೆರಿಕದಲ್ಲಿರುವ ಕಂಪನಿಯ ವ್ಯವಸ್ಥಾಪಕ, ಮೀಟಿಂಗ್ನಲ್ಲಿ ಅವರನ್ನು ನಿಂದಿಸುತ್ತಿದ್ದರು ಎಂದು ಸಹೋದ್ಯೋಗಿ ಆರೋಪಿಸಿದ್ದಾರೆ.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಕೃತ್ರಿಮ್ ಕಂಪನಿ, ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ಅಗತ್ಯ ಇರುವ ಎಲ್ಲ ಸಹಾಯ ನೀಡುವುದಾಗಿ ಭರವಸೆ ನೀಡಿದೆ.</p>.<p>ಘಟನೆ ನಡೆದಾಗ ನಿಖಿಲ್ ವೈಯಕ್ತಿಕ ಕಾರಣಕ್ಕೆ ರಜೆ ಪಡೆದಿದ್ದರು. ಏಪ್ರಿಲ್ 8 ರಂದು ವಿಶ್ರಾಂತಿಗೆ ರಜೆ ಬೇಕೆಂದು ತನ್ನ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಏಪ್ರಿಲ್ 17ರಂದು ಮತ್ತಷ್ಟು ವಿಶ್ರಾಂತಿ ಬೇಕಿದೆ ಎಂದ ಕಾರಣ ರಜೆ ವಿಸ್ತರಿಸಲಾಗಿತ್ತು ಎಂದು ಕಂಪನಿ ತಿಳಿಸಿದೆ.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>