<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ತನ್ನ ಉದ್ಯೋಗಿಗಳಿಗೆ ಅಧಿಕ ಅವಧಿ ಭತ್ಯೆ (ಓವರ್ ಟೈಮ್ ಅಲೋಯನ್ಸ್–ಓಟಿಎ) ನೀಡದಿರುವ ಕುರಿತಂತೆ 2011ರ ಮೇ 10ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.</p>.<p>ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ರಂಗಸಮುದ್ರದ ಕೆಎಸ್ಆರ್ಟಿಸಿ ಚಾಲಕ ಜಿ.ಎಂ.ಪೂವಯ್ಯ ಸಲ್ಲಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.</p>.<p>ಅರ್ಜಿದಾರ ಉದ್ಯೋಗಿಗೆ ಅಧಿಕ ಅವಧಿ ಭತ್ಯೆಯ ಬಾಕಿಯನ್ನು 8 ವಾರಗಳಲ್ಲಿ ನೀಡಬೇಕು. ಅಂತೆಯೇ ಅವರಿಗೆ ₹ 20 ಸಾವಿರ ಪಾವತಿಸಬೇಕು’ ಎಂದೂ ನ್ಯಾಯಪೀಠ ಆದೇಶಿಸಿದೆ. ಅಂತೆಯೇ ಅಧಿಕ ಅವಧಿ ಭತ್ಯೆಗೆ (ಓಟಿಎ) ಅಡ್ಡಿಯಾಗಿದ್ದ ಸುತ್ತೋಲೆಯನ್ನು ರದ್ದುಗೊಳಿಸಿದೆ.</p>.<p>‘ಅಧಿಕ ಅವಧಿ ಭತ್ಯೆ ಉದ್ಯೋಗಿಗಳ ಹಕ್ಕು. ಭತ್ಯೆ ನೀಡದೇ ಕೆಲಸ ಮಾಡಿಸಿಕೊಳ್ಳುವುದು ಕಾನೂನು ಬಾಹಿರ ಮತ್ತು ಸಂವಿಧಾನದ 23ನೇ ವಿಧಿಯ ಉಲ್ಲಂಘನೆ’ ಎಂದು ಹೇಳಿರುವ ನ್ಯಾಯಪೀಠ ಈ ಕುರಿತಂತೆ ಗುಜರಾತ್ ಹೈಕೋರ್ಟ್ ತೀರ್ಪನ್ನು<br />ಉಲ್ಲೇಖಿಸಿದೆ.</p>.<p>‘ಅಧಿಕ ಅವಧಿ ಭತ್ಯೆ (ಎಸ್ಓಟಿ/ಎನ್ಎಸ್ಓಟಿ) ಹೆಚ್ಚುವರಿ ವೇತನ, ಪ್ರಯಾಣ ಭತ್ಯೆ ಇವುಗಳು ಉದ್ಯೋಗಿಗಳ ಅಸ್ಥಿರ (variable) ಹಾಗೂ ನಿರ್ದಿಷ್ಟಪಡಿಸದ (unspecifide) ಗಳಿಕೆಯಾಗುವುದರಿಂದ ವ್ಯತ್ಯಾಸದ ಪಾವತಿ ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಬರುವುದಿಲ್ಲ' ಎಂದು ಕೆಎಸ್ಆರ್ಟಿಸಿ ತಿಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ತನ್ನ ಉದ್ಯೋಗಿಗಳಿಗೆ ಅಧಿಕ ಅವಧಿ ಭತ್ಯೆ (ಓವರ್ ಟೈಮ್ ಅಲೋಯನ್ಸ್–ಓಟಿಎ) ನೀಡದಿರುವ ಕುರಿತಂತೆ 2011ರ ಮೇ 10ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.</p>.<p>ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ರಂಗಸಮುದ್ರದ ಕೆಎಸ್ಆರ್ಟಿಸಿ ಚಾಲಕ ಜಿ.ಎಂ.ಪೂವಯ್ಯ ಸಲ್ಲಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.</p>.<p>ಅರ್ಜಿದಾರ ಉದ್ಯೋಗಿಗೆ ಅಧಿಕ ಅವಧಿ ಭತ್ಯೆಯ ಬಾಕಿಯನ್ನು 8 ವಾರಗಳಲ್ಲಿ ನೀಡಬೇಕು. ಅಂತೆಯೇ ಅವರಿಗೆ ₹ 20 ಸಾವಿರ ಪಾವತಿಸಬೇಕು’ ಎಂದೂ ನ್ಯಾಯಪೀಠ ಆದೇಶಿಸಿದೆ. ಅಂತೆಯೇ ಅಧಿಕ ಅವಧಿ ಭತ್ಯೆಗೆ (ಓಟಿಎ) ಅಡ್ಡಿಯಾಗಿದ್ದ ಸುತ್ತೋಲೆಯನ್ನು ರದ್ದುಗೊಳಿಸಿದೆ.</p>.<p>‘ಅಧಿಕ ಅವಧಿ ಭತ್ಯೆ ಉದ್ಯೋಗಿಗಳ ಹಕ್ಕು. ಭತ್ಯೆ ನೀಡದೇ ಕೆಲಸ ಮಾಡಿಸಿಕೊಳ್ಳುವುದು ಕಾನೂನು ಬಾಹಿರ ಮತ್ತು ಸಂವಿಧಾನದ 23ನೇ ವಿಧಿಯ ಉಲ್ಲಂಘನೆ’ ಎಂದು ಹೇಳಿರುವ ನ್ಯಾಯಪೀಠ ಈ ಕುರಿತಂತೆ ಗುಜರಾತ್ ಹೈಕೋರ್ಟ್ ತೀರ್ಪನ್ನು<br />ಉಲ್ಲೇಖಿಸಿದೆ.</p>.<p>‘ಅಧಿಕ ಅವಧಿ ಭತ್ಯೆ (ಎಸ್ಓಟಿ/ಎನ್ಎಸ್ಓಟಿ) ಹೆಚ್ಚುವರಿ ವೇತನ, ಪ್ರಯಾಣ ಭತ್ಯೆ ಇವುಗಳು ಉದ್ಯೋಗಿಗಳ ಅಸ್ಥಿರ (variable) ಹಾಗೂ ನಿರ್ದಿಷ್ಟಪಡಿಸದ (unspecifide) ಗಳಿಕೆಯಾಗುವುದರಿಂದ ವ್ಯತ್ಯಾಸದ ಪಾವತಿ ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಬರುವುದಿಲ್ಲ' ಎಂದು ಕೆಎಸ್ಆರ್ಟಿಸಿ ತಿಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>