<p><strong>ಕೆಂಗೇರಿ</strong>: ‘ಸೈನಿಕರ ನೈತಿಕ ಶಕ್ತಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಂಚಾಯಿತಿ ವತಿಯಿಂದ ಸೈನಿಕರ ಕಲ್ಯಾಣ ನಿಧಿಗೆ ₹10 ಲಕ್ಷ ದೇಣಿಗೆ ನೀಡಲಾಗುತ್ತಿದೆ’ ಎಂದು ಕುಂಬಳಗೋಡು ಪಂಚಾಯಿತಿ ಅಧ್ಯಕ್ಷ ಎನ್. ದೇವರಾಜ್ ಹೇಳಿದರು.</p>.<p>ಕುಂಬಳಗೋಡು ಪಂಚಾಯಿತಿಯ 2025-26ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆಯಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ದೇಣಿಗೆಯ ಚೆಕ್ ನೀಡಿ, ಅವರು ಮಾತನಾಡಿದರು.</p>.<p>ಪಂಚಾಯಿತಿ ವ್ಯಾಪ್ತಿಯ ಸಮಸ್ತ ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸೌಧ ನಿರ್ಮಿಸುವ ಉದ್ದೇಶ ಹೊಂದಿದ್ದು, ಶಾಸಕ ಎಸ್. ಟಿ. ಸೋಮಶೇಖರ್ ಅಗತ್ಯ ಬೆಂಬಲ ನೀಡುವಂತೆ ಕೋರಿದರು.</p>.<p><strong>ಕಡೆಯ ಗ್ರಾಮ ಸಭೆ:</strong> ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಕುಂಬಳಗೋಡು ಗ್ರಾಮ ಪಂಚಾಯಿತಿಯ ಕಟ್ಟ ಕಡೆಯ ಗ್ರಾಮಸಭೆ ಹಲವಾರು ಸವಲತ್ತುಗಳ ವಿತರಣೆಗೆ ಸಾಕ್ಷಿಯಾಯಿತು. </p>.<p>ಹೊಸಪಾಳ್ಯ, ಕುಂಬಳಗೋಡು, ಅಂಚೆಪಾಳ್ಯ, ಗೇರು ಪಾಳ್ಯ, ಕಣಿಮಿಣಕೆ ಅಂಗನವಾಡಿಗಳಿಗೆ ತಲಾ ಒಂದು ವಾಟರ್ ಫಿಲ್ಟರ್, ಹೊಸಪಾಳ್ಯ ಅಂಗನವಾಡಿಗೆ ಒಂದು ಫ್ರಿಡ್ಜ್, ಪಂಚಾಯಿತಿ ವ್ಯಾಪ್ತಿಯ 65 ಸ್ತ್ರೀ ಶಕ್ತಿ ಗುಂಪುಗಳಿಗೆ ಸೀರೆ, ಬಾಣಂತಿಯರು, ಅಂಗವಿಕಲರು ಸೇರಿದಂತೆ 1000 ಮಂದಿಗೆ ಕುಕ್ಕರ್, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ₹10 ಸಾವಿರ ವಿದ್ಯಾರ್ಥಿವೇತನ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ವಿತರಿಸಲಾಯಿತು.</p>.<p>ಶಾಸಕ ಎಸ್. ಟಿ. ಸೋಮಶೇಖರ್ ಮಾತನಾಡಿ, ‘ಜಲ ಜೀವನ್ ಮಿಷನ್ ಅಡಿ ನೀರಿನ ಸಂಪರ್ಕಕ್ಕಾಗಿ ತೋಡಿರುವ ಗುಂಡಿಗಳಿಗೆ ಬಿದ್ದು ದ್ವಿಚಕ್ರ ಸವಾರರು ಸಾವಿಗೆ ಈಡಾಗುತ್ತಿದ್ದಾರೆ. ಅಧಿಕಾರಿಗಳು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು’ ಎಂದು ತಾಕೀತು ಮಾಡಿದರು.</p>.<p>ಕುಂಬಳಗೋಡು ಪಂಚಾಯಿತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರ್ಪಡೆ ಯಾಗುವ ಮೂಲಕ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಮಂಚನಬೆಲೆ ಜಲಾಶಯದಿಂದ ಕ್ಷೇತ್ರದ 71 ಗ್ರಾಮಗಳಿಗೆ ಕುಡಿಯುವ ನೀರು ದೊರಕಲಿದೆ ಎಂದು ಮಾಹಿತಿ ನೀಡಿದರು.</p>.<p>ಉಪಾಧ್ಯಕ್ಷ ಗೋಪಾಲ ಕೃಷ್ಣ, ಮಾಜಿ ಅಧ್ಯಕ್ಷರಾದ ಚಿಕ್ಕರಾಜು, ನರಸಿಂಹಮೂರ್ತಿ ಮುಖಂಡರಾದ ಅನಿಸ್, ಯಶೋದಮ್ಮ, ನಂಜಪ್ಪ, ನಂಜೇಗೌಡ ಮತ್ತಿತರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಗೇರಿ</strong>: ‘ಸೈನಿಕರ ನೈತಿಕ ಶಕ್ತಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಪಂಚಾಯಿತಿ ವತಿಯಿಂದ ಸೈನಿಕರ ಕಲ್ಯಾಣ ನಿಧಿಗೆ ₹10 ಲಕ್ಷ ದೇಣಿಗೆ ನೀಡಲಾಗುತ್ತಿದೆ’ ಎಂದು ಕುಂಬಳಗೋಡು ಪಂಚಾಯಿತಿ ಅಧ್ಯಕ್ಷ ಎನ್. ದೇವರಾಜ್ ಹೇಳಿದರು.</p>.<p>ಕುಂಬಳಗೋಡು ಪಂಚಾಯಿತಿಯ 2025-26ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆಯಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ದೇಣಿಗೆಯ ಚೆಕ್ ನೀಡಿ, ಅವರು ಮಾತನಾಡಿದರು.</p>.<p>ಪಂಚಾಯಿತಿ ವ್ಯಾಪ್ತಿಯ ಸಮಸ್ತ ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸೌಧ ನಿರ್ಮಿಸುವ ಉದ್ದೇಶ ಹೊಂದಿದ್ದು, ಶಾಸಕ ಎಸ್. ಟಿ. ಸೋಮಶೇಖರ್ ಅಗತ್ಯ ಬೆಂಬಲ ನೀಡುವಂತೆ ಕೋರಿದರು.</p>.<p><strong>ಕಡೆಯ ಗ್ರಾಮ ಸಭೆ:</strong> ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಕುಂಬಳಗೋಡು ಗ್ರಾಮ ಪಂಚಾಯಿತಿಯ ಕಟ್ಟ ಕಡೆಯ ಗ್ರಾಮಸಭೆ ಹಲವಾರು ಸವಲತ್ತುಗಳ ವಿತರಣೆಗೆ ಸಾಕ್ಷಿಯಾಯಿತು. </p>.<p>ಹೊಸಪಾಳ್ಯ, ಕುಂಬಳಗೋಡು, ಅಂಚೆಪಾಳ್ಯ, ಗೇರು ಪಾಳ್ಯ, ಕಣಿಮಿಣಕೆ ಅಂಗನವಾಡಿಗಳಿಗೆ ತಲಾ ಒಂದು ವಾಟರ್ ಫಿಲ್ಟರ್, ಹೊಸಪಾಳ್ಯ ಅಂಗನವಾಡಿಗೆ ಒಂದು ಫ್ರಿಡ್ಜ್, ಪಂಚಾಯಿತಿ ವ್ಯಾಪ್ತಿಯ 65 ಸ್ತ್ರೀ ಶಕ್ತಿ ಗುಂಪುಗಳಿಗೆ ಸೀರೆ, ಬಾಣಂತಿಯರು, ಅಂಗವಿಕಲರು ಸೇರಿದಂತೆ 1000 ಮಂದಿಗೆ ಕುಕ್ಕರ್, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ₹10 ಸಾವಿರ ವಿದ್ಯಾರ್ಥಿವೇತನ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ವಿತರಿಸಲಾಯಿತು.</p>.<p>ಶಾಸಕ ಎಸ್. ಟಿ. ಸೋಮಶೇಖರ್ ಮಾತನಾಡಿ, ‘ಜಲ ಜೀವನ್ ಮಿಷನ್ ಅಡಿ ನೀರಿನ ಸಂಪರ್ಕಕ್ಕಾಗಿ ತೋಡಿರುವ ಗುಂಡಿಗಳಿಗೆ ಬಿದ್ದು ದ್ವಿಚಕ್ರ ಸವಾರರು ಸಾವಿಗೆ ಈಡಾಗುತ್ತಿದ್ದಾರೆ. ಅಧಿಕಾರಿಗಳು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು’ ಎಂದು ತಾಕೀತು ಮಾಡಿದರು.</p>.<p>ಕುಂಬಳಗೋಡು ಪಂಚಾಯಿತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರ್ಪಡೆ ಯಾಗುವ ಮೂಲಕ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಮಂಚನಬೆಲೆ ಜಲಾಶಯದಿಂದ ಕ್ಷೇತ್ರದ 71 ಗ್ರಾಮಗಳಿಗೆ ಕುಡಿಯುವ ನೀರು ದೊರಕಲಿದೆ ಎಂದು ಮಾಹಿತಿ ನೀಡಿದರು.</p>.<p>ಉಪಾಧ್ಯಕ್ಷ ಗೋಪಾಲ ಕೃಷ್ಣ, ಮಾಜಿ ಅಧ್ಯಕ್ಷರಾದ ಚಿಕ್ಕರಾಜು, ನರಸಿಂಹಮೂರ್ತಿ ಮುಖಂಡರಾದ ಅನಿಸ್, ಯಶೋದಮ್ಮ, ನಂಜಪ್ಪ, ನಂಜೇಗೌಡ ಮತ್ತಿತರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>