ಘಟನೆ ನಡೆದ ಸ್ಥಳ ನಿಖರತೆ ಇಲ್ಲ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವುದರಿಂದ ಯಾವ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂಬ ದ್ವಂದ್ವ ಉಂಟಾಗುತ್ತಿದೆ. ಮಹಾರಾಷ್ಟ್ರದಲ್ಲಿ ಉಮರ್ಗಾ ಠಾಣೆ, ಕರ್ನಾಟಕದಲ್ಲಿ ಮಂಠಾಳ ಠಾಣೆಯ ಸರಹದ್ದಿಗೆ ಒಳಪಡುತ್ತದೆ.
ಕೂಡಲೆ ನಿರ್ಣಯ ಕೈಗೊಂಡು ಪ್ರಕರಣ ದಾಖಲಿಸಬೇಕು. ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.