<p><strong>ಬೆಂಗಳೂರು:</strong> ಭಾರತೀಯ ಇತಿಹಾಸ ಮತ್ತು ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನ (ಎಫ್ಐಎಚ್ಸಿಆರ್) ಹಾಗೂ ಓಲಾ ಫೌಂಡೇಷನ್ ಆಶ್ರಯದಲ್ಲಿ ‘ಯುವ ಪುಸ್ತಕ ಸರಣಿ’ಗೆ ಹೆಬ್ಬಾಳದ ಕೋರ್ಟ್ಯಾರ್ಡ್ ಮ್ಯಾರಿಯಟ್ನಲ್ಲಿ ಶನಿವಾರ ಚಾಲನೆ ನೀಡಲಾಯಿತು.</p>.<p>ಪ್ರಾಚೀನ ನಾಗರಿಕತೆಗಳಿಂದ ಆರಂಭಿಸಿ ಮಧ್ಯಕಾಲೀನ ರಾಜವಂಶಗಳು, ನಾಯಕರು, ಹಾಗೂ ಸಾಂಸ್ಕೃತಿಕ ಘಟ್ಟಗಳವರೆಗೆ ವಿಷಯಗಳನ್ನು ಸುಂದರ ಚಿತ್ರಣದೊಂದಿಗೆ ಮಕ್ಕಳಿಗೆ ಇತಿಹಾಸವನ್ನು ತಿಳಿಸುವ ಸರಣಿ ಇದಾಗಿದೆ. ಪುಸ್ತಕಗಳು ಏಕಕಾಲದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ, ಮರಾಠಿ ಹಾಗೂ ಆಂಗ್ಲದಲ್ಲಿ ಪ್ರಕಟವಾಗಿವೆ.</p>.<p>ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಮಾತನಾಡಿ, ‘ಇತಿಹಾಸವೇ ನಮ್ಮ ಭಾಷೆ, ನಮ್ಮ ಸಂಸ್ಕೃತಿ. ಮಾತ್ರವಲ್ಲ ನಮ್ಮ ನಡವಳಿಕೆಯ ಬೆನ್ನೆಲುಬು. ಮಕ್ಕಳಿಗೆ ಇತಿಹಾಸವನ್ನು ಸರಳವಾಗಿ, ಕಥೆಗಳ ಮೂಲಕ ಕಲಿಸಲು ಇಂತಹ ಪುಸ್ತಕಗಳು ಬಹಳ ಅವಶ್ಯಕ’ ಎಂದು ಹೇಳಿದರು.</p>.<p>ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಮಕ್ಕಳಲ್ಲಿ ಇತಿಹಾಸದ ಬಗ್ಗೆ ಕುತೂಹಲ ಬೆಳೆಸುವ ಇಂತಹ ಯೋಜನೆಗಳು, ದೇಶದ ಭವಿಷ್ಯವನ್ನು ಉತ್ತಮಗೊಳಿಸಲಿದೆ’ ಎಂದರು.</p>.<p>ಸದ್ಗುರು ಮಧುಸೂದನ್ ಸಾಯಿ, ಲೇಖಕ ವಿಕ್ರಮ್ ಸಂಪತ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಭಾರತೀಯ ಇತಿಹಾಸ ಮತ್ತು ಸಾಂಸ್ಕೃತಿಕ ಸಂಶೋಧನಾ ಪ್ರತಿಷ್ಠಾನ (ಎಫ್ಐಎಚ್ಸಿಆರ್) ಹಾಗೂ ಓಲಾ ಫೌಂಡೇಷನ್ ಆಶ್ರಯದಲ್ಲಿ ‘ಯುವ ಪುಸ್ತಕ ಸರಣಿ’ಗೆ ಹೆಬ್ಬಾಳದ ಕೋರ್ಟ್ಯಾರ್ಡ್ ಮ್ಯಾರಿಯಟ್ನಲ್ಲಿ ಶನಿವಾರ ಚಾಲನೆ ನೀಡಲಾಯಿತು.</p>.<p>ಪ್ರಾಚೀನ ನಾಗರಿಕತೆಗಳಿಂದ ಆರಂಭಿಸಿ ಮಧ್ಯಕಾಲೀನ ರಾಜವಂಶಗಳು, ನಾಯಕರು, ಹಾಗೂ ಸಾಂಸ್ಕೃತಿಕ ಘಟ್ಟಗಳವರೆಗೆ ವಿಷಯಗಳನ್ನು ಸುಂದರ ಚಿತ್ರಣದೊಂದಿಗೆ ಮಕ್ಕಳಿಗೆ ಇತಿಹಾಸವನ್ನು ತಿಳಿಸುವ ಸರಣಿ ಇದಾಗಿದೆ. ಪುಸ್ತಕಗಳು ಏಕಕಾಲದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳ, ಮರಾಠಿ ಹಾಗೂ ಆಂಗ್ಲದಲ್ಲಿ ಪ್ರಕಟವಾಗಿವೆ.</p>.<p>ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಮಾತನಾಡಿ, ‘ಇತಿಹಾಸವೇ ನಮ್ಮ ಭಾಷೆ, ನಮ್ಮ ಸಂಸ್ಕೃತಿ. ಮಾತ್ರವಲ್ಲ ನಮ್ಮ ನಡವಳಿಕೆಯ ಬೆನ್ನೆಲುಬು. ಮಕ್ಕಳಿಗೆ ಇತಿಹಾಸವನ್ನು ಸರಳವಾಗಿ, ಕಥೆಗಳ ಮೂಲಕ ಕಲಿಸಲು ಇಂತಹ ಪುಸ್ತಕಗಳು ಬಹಳ ಅವಶ್ಯಕ’ ಎಂದು ಹೇಳಿದರು.</p>.<p>ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಮಕ್ಕಳಲ್ಲಿ ಇತಿಹಾಸದ ಬಗ್ಗೆ ಕುತೂಹಲ ಬೆಳೆಸುವ ಇಂತಹ ಯೋಜನೆಗಳು, ದೇಶದ ಭವಿಷ್ಯವನ್ನು ಉತ್ತಮಗೊಳಿಸಲಿದೆ’ ಎಂದರು.</p>.<p>ಸದ್ಗುರು ಮಧುಸೂದನ್ ಸಾಯಿ, ಲೇಖಕ ವಿಕ್ರಮ್ ಸಂಪತ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>