ರಾಜ್ಯದಲ್ಲಿ 45 ಲಕ್ಷ ವಿಶ್ವಕರ್ಮರಿದ್ದು, ಚಿನ್ನ ಬೆಳ್ಳಿ, ಕಬ್ಬಿಣ, ಮರ, ಕಂಚು ಮತ್ತು ಶಿಲ್ಪದ ಕೆಲಸ ಮಾಡುತ್ತಿದ್ದಾರೆ. ಈ ಐದು ಕಸುಬುಗಳಿಂದ ದೇಶಕ್ಕೆ ಗೌರವ ತರುವುದರ ಜೊತೆಗೆ ಎಲ್ಲರ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಸಮಾಜ ಇಂದು ಮೂಲೆ ಗುಂಪಾಗಿದೆ. ಎರಡು ತಿಂಗಳ ಹಿಂದೆ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದಾಗ, ಎರಡು ತಿಂಗಳ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು ಎಂದವರು ತಿಳಿಸಿದ್ದಾರೆ.